Quantcast
Channel: VijayKarnataka
Viewing all articles
Browse latest Browse all 6795

ವನ್ಯ ಮೃಗಗಳ ವಧೆ: ಪರಿಸರ ಸಚಿವಾಲಯದ ವಿರುದ್ಧ ಮನೇಕಾ ತರಾಟೆ

$
0
0

ಹೊಸದಿಲ್ಲಿ: ದೇಶದ ಕೆಲವು ರಾಜ್ಯಗಳನ್ನು 'ತೊಂದರೆ ನೀಡುತ್ತಿವೆ,' ಎಂಬ ನೆಪವೊಡ್ಡಿ ಕೆಲವು ಪ್ರಾಣಿಗಳನ್ನು ಕೊಲ್ಲುತ್ತಿದ್ದು, ಇದಕ್ಕೆ ಅನುಮತಿ ನೀಡಿದ ಪರಿಸರ ಸಚಿವಾಲಯದ ಕ್ರಮದ ವಿರುದ್ಧ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಮನೇಕಾ ಗಾಂಧಿ ತರಾಟೆ ತೆಗೆದುಕೊಂಡಿದ್ದಾರೆ.

'ಬರ ಪೀಡಿತ ಮಹಾರಾಷ್ಟ್ರದ ಚಂದ್ರಾಪುರದಲ್ಲಿ 50ಕ್ಕೂ ಹೆಚ್ಚು ಸೂಕರ (ಬೀಜದ ಹಂದಿ)ಗಳನ್ನು ಕೊಲ್ಲಲಾಗಿದೆ. ಇದಕ್ಕೆ ರಾಜ್ಯ ಪರಿಸರ ಇಲಾಖೆಯ ವಿರೋಧವಿದ್ದು, ಕೇಂದ್ರ ಸಚಿವಾಲಯ ಅನುಮತಿ ನೀಡಿದೆ. ಪ್ರಾಣಿಗಳನ್ನು ಕೊಲ್ಲುವ ದುರಾಸೆ ಮನುಷ್ಯನಿಗೇಕೆ ಎಂಬುವುದೇ ಅರ್ಥವಾಗುವುದಿಲ್ಲ,' ಎಂದಿದ್ದಾರೆ.

'ಪಶ್ಚಿಮ ಬಂಗಾಳ ಸರಕಾರ ಆನೆಗಳನ್ನು ಕೊಲ್ಲಲು, ಹಿಮಾಚಲ ಪ್ರದೇಶ ಮಂಗ ಜತೆಗೆ ಗೋವಾ ಸರಕಾರ ನವಿಲುಗಳನ್ನು ಸಾಯಿಸಲು ಅನುಮತಿ ಯಾಚಿಸುತ್ತಿದೆ,' ಎಂದರು.

'ಕೇಂದ್ರ ಪರಿಸರ ಸಚಿವಾಲಯ ಎಲ್ಲ ರಾಜ್ಯಗಳಿಗೂ 'ತೊಂದರೆ ನೀಡುವ' ಪ್ರಾಣಿಗಳ ಪಟ್ಟಿ ನೀಡಲು ಕೋರಿದ್ದು, ನಂತರ ಅವುಗಳನ್ನು ಕೊಲ್ಲಲು ಅನುಮತಿ ಕೋರಲಾಗುತ್ತದೆ. ಇಂಥದ್ದೊಂದು ವಿಕೃತ ಇದೇ ಮೊದಲ ಬಾರಿಗೆ ನಡೆಯುತ್ತಿರುವುದು,' ಎಂದು ಆರೋಪಿಸಿದ್ದಾರೆ.

ಮಾನವ-ವನ್ಯ ಮೃಗಗಳ ಸಂಘರ್ಷದ ಹಿನ್ನೆಲೆಯಲ್ಲಿ ಕಳೆದ ವರ್ಷ ಪರಿಸರ ಹಾಗೂ ಅರಣ್ಯ ಸಚಿವಾಲಯಗಳು ತೊಂದರೆ ನೀಡುವ ಪ್ರಾಣಿಗಳನ್ನು ಕೊಲ್ಲಲು ಒಪ್ಪಿಕೊಂಡಿದ್ದವು.

'ರೈತರ ಬೆಳೆಗಳನ್ನು ನಾಶ ಪಡಿಸುವಂಥ ಪ್ರಾಣಿಗಳನ್ನು ಕೊಲ್ಲಲು ಅವಕಾಶವಿದ್ದು, ಆ ಪ್ರದೇಶಗಳಲ್ಲಿ ಸೂಕರ ಮತ್ತು ನೀಲಿ ಹೋರಿಯಂಥ ಪ್ರಾಣಿಗಳನ್ನು ಕೊಲ್ಲಲು ಅನುಮತಿ ನೀಡಲಾಗುತ್ತಿದೆ,' ಎಂದು ಪರಿಸರ ಸಚಿವ ಪ್ರಕಾಶ್ ಜಾವೇಡ್ಕರ್, ಮನೇಕಾ ಗಾಂಧಿ ಅವರ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಮುಕೇಶ್ ಅಂಬಾನಿಯವರ ಮೊದಲ ಮನೆ ಹೇಗಿದೆ ಗೊತ್ತಾ?


ಮನವನ್ನು ಮುದಗೊಳಿಸುತ್ತೆ ಪುಟ್ಟ ಕಂದನ ಕ್ಯೂಟ್‌ ವಿಡಿಯೋ


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


ಗುರು ರಾಘವೇಂದ್ರರ ದಿನದ ಭವಿಷ್ಯ ಹಾಗೂ ರಾಶಿ ಫಲ


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ತುಳು ತೆರೆಗೆ ಸೋನಿಯಾ ಎಂಟ್ರಿ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್



<script src="https://jsc.adskeeper.com/r/s/rssing.com.1596347.js" async> </script>