Quantcast
Channel: VijayKarnataka
Viewing all articles
Browse latest Browse all 6795

ಮಂತ್ರವೆಂಬೋ ವಿಜ್ಞಾನ

$
0
0

ಜ್ಯೋತಿಷಿಗಳು ಹೇಳಿಕೊಟ್ಟ ಮಂತ್ರ ಪಠಿಸಿದ್ರೂ ಪ್ರಯೋಜನವಾಗಲಿಲ್ಲ ಅಂತ ಗೊಣಗೋ ಬದಲು ಮಂತ್ರವನ್ನು ಯಾವ ದಾಟಿಯಲ್ಲಿ ಹೇಳ್ತಾ ಇದ್ದೀರಿ ಅನ್ನೋದನ್ನು ಅರ್ಥ ಮಾಡ್ಕೊಳ್ಳಿ. ನಂತರ ಎಫೆಕ್ಟ್ ಬಗ್ಗೆ ಚಿಂತೆ ಮಾಡಿ.

- ಚಂದ್ರು ಗೌರಿಪುರ

ಮಂತ್ರವೂ ಜ್ಞಾನದ ಒಂದು ಭಾಗ ಅಂತಾನೋ ಕಾನ್ಸನ್‌ಟ್ರೇಷನ್‌ ಟೂಲ್‌ ಅನ್ನೋದೀಗ ನಮ್ಮ ಗಮನಕ್ಕೆ ಬಂದಿದೆ. ಮಂತ್ರೋಚ್ಛಾರಣೆಯಲ್ಲಿ ನಾಲ್ಕು ಭಾಗಗಳಿವೆ. ಮೊದಲನೆಯದಾಗಿ ಸುಮ್ಮನೇ ನಮ್ಮ ಪಾಡಿಗೆ ನಾವು ಹೇಳ್ಕೊಳ್ಳೋದು. ಅದರಿಂದ ನೀವೆಷ್ಟರ ಮಟ್ಟಿಗೆ ಚಾರ್ಜ್‌ ಆಗ್ತಿದ್ದೀರೋ ಅಥವಾ ರಿಲ್ಯಾಕ್ಸ್‌ ಆಗಿದ್ದೀರೋ ಅದು ಬೇರೆ ಮಾತು. ಆ ಕಾರಣ ಅದರ ವೋಲ್ಟೇಜ್‌ ತೀರಾ ಕಡಿಮೆ. ಎರಡನೆಯದಾಗಿ ಮಂತ್ರವನ್ನು ಗಮನವಿಟ್ಟು ಒಂದುಕಡೆ ಕೂತು ಹೇಳ್ಕೊಳ್ಳಿ. ಆಗ ಅದರ ಪರಿಣಾಮ ನಿಮ್ಮ ಮನಸ್ಸಿನ ಮೇಲೆ ನೇರವಾಗಿ ಆಗುತ್ತೆ. ಅದನ್ನು 100 ವೋಲ್ಟ್‌ ಪವರ್‌ಗೆ ಹೋಲಿಸಬಹುದು. ಇನ್ನೂ ಸ್ವಲ್ಪ ಮುಂದುವರಿದು ಮಂತ್ರವನ್ನು ಮನಸ್ಸಿನೊಳಗೆ ಪಠಸುತ್ತಾ ಹೋಗೋದು 1000 ವೋಲ್ಟ್‌ಗೆ ಸಮ. ಅದನ್ನೇ ನಿಮ್ಮ ಪ್ರಾಣಶಕ್ತಿಯನ್ನಾಗಿಸಿಕೊಂಡರೆ ಅದು 10,000 ವೋಲ್ಟ್‌ನಷ್ಟಾಗುತ್ತದೆ. ಹೌದು, ಮಂತ್ರೋಚ್ಛಾರಣೆಯ ನಾಲ್ಕು ಸ್ತರಗಳನ್ನು ಒಂದು ಅಮ್ಮೀಟರ್‌ (ವೋಲ್ಟೇಜ್‌ ಮಾಪನ ಯಂತ್ರ)ನ ನೀಡಲ್‌ಗೆ ಹೋಲಿಸಬಹುದು.

ಸಾಮಾನ್ಯ ಉಚ್ಚಾರಣೆ

ಟೈಂ ಇಲ್ಲಾ ಅನ್ನೋ ನಿಮ್ಮ ಮಾತಿಗೆ ಸಮಜಾಯಿಷಿ ಕೊಡೋವಂತೆ ಕೆಲ ಜ್ಯೋತಿಗಳು ನಿಮ್ಮ ಪಾಡಿಗೆ ನೀವು ಕೆಲಸ ಮಾಡ್ಕೊಳ್ತಾನೇ ಮಂತ್ರವನ್ನು ಪಠಿಸಿಕೊಳ್ಳಿ' ಅಂತಾರೆ. ಹಾಗೆ ಮಾಡೋದು ಬಾಯಿಗೊಂದು ಕಸರತ್ತು ಅಥವಾ ನಿಮ್ಮ ಲೆಕ್ಕದ ಪುಸ್ತಕಕ್ಕೊಂದಿಷ್ಟು ತುತ್ತು ಆಗಬಹುದೇ ಹೊರತು ಅದರಿಂದ ಪ್ರಯೋಜನವೇನೂ ಇಲ್ಲ. ಅಂತಹ ಸನ್ನಿವೇಶದಲ್ಲಿ, ಮಂತ್ರೋಚ್ಚಾರಣೆ ಅನ್ನೋದು ಬಸ್‌ನಲ್ಲಿ ಪ್ರಯಾಣ ಮಾಡ್ತಾ ಇರೋವಾಗ ಅಲ್ಲಿ ಹಾಕ್ತಾರಲ್ಲ ಹಾಡಿನಂತೆ. ಮೊದಲ ಹತ್ತರಿಂದ ಹದಿನೈದು ನಿಮಿಷ ನಿಮ್ಮ ಗಮನ ಮಂತ್ರ ಅಥವಾ ನಾಮದ ಮೇಲಿರಬಹುದು. ಆ ನಂತರ ನಿಮ್ಮ ಗಮನವೆಲ್ಲಾ ಬೇರೆ ಕಡೆ ಹೊರಳುತ್ತೆ. ಅದೇನು ಪಠಿಸ್ತೀರೋ ಏನೋ ಅದು ಬೇರೆ ಮಾತು. ಅದು ಕೇವಲ ಮ್ಮೇಳವಷ್ಟೇ. ಎಫೆಕ್ಟ್ ಮಾತ್ರ ನ್ಯೂಟ್ರಲ್ಲು. ಸ್ವಲ್ಪ ರಿಲ್ಯಾಕ್ಸ್‌ ಆಗಬಹುದೇನೋ! ಅಥವಾ ಜಸ್ಟ್‌ ಟೈಂ ಪಾಸ್‌ ಅಥವಾ ಡೈಲಿ ರೊಟೀನ್‌!! ಅಂದಮೇಲೆ ಅದರಿಂದ ಸಿಗೋ ಲಾಭಾನೂ ಅಷ್ಟೇ. ಯಾರೋ ಜ್ಯೋತಿಷಿಗಳ ಬಳಿ ಹೋಗಿ ಹೇಳಿದ್ದರಂತೆ 'ಸ್ವಾಮಿ ನೀವು ಕೋಟಿ ಬಾರಿ ಜಪ ಮಾಡಿ ಅಂದ್ರಿ. ಸಮಸ್ಯೆ ನಿವಾರಣೆ ಆಗುತ್ತೆ ಅಂದಿದ್ರಿ. ನಾನೇನೋ ಲೆಕ್ಕ ಇಟ್ಕೊಂಡು ಕೋಟಿ ಬಾರಿ ಜಪ ಮಾಡ್ದೆ. ಸಮಸ್ಯೆ ಮಾತ್ರ ಹಾಗೇ ಉಳ್ಕೊಳು'್ತ ಅಂತ.

'ಮಂತ್ರ ಹೇಳೋದು ಅಂದ್ರೆ ಉಗುಳು ನುಂಗೋದು ಅಥವಾ ಚೆಲ್ಲೋದು ಅಂತಲ್ಲ. ನೀವು ಹೇಳ್ಳೊಳ್ಳೋ ಮಂತ್ರಾನೇ ನಿಮಗೆ ಸ್ಪಷ್ಟವಾಗಿ ಗೊತ್ತಿಲ್ಲದಿದ್ದರೆ ಅದು ಜಸ್ಟ್‌ ಒದರಾಟ ಆಗುತ್ತೆ ಅಷ್ಟೆ' ಅಂತಾರೆ ರಾಮಕೃಷ್ಣ ಪರಮಹಂಸರು.

ಮಂತ್ರವನ್ನು ಅರ್ಥ ಮಾಡ್ಕೊಂಡು ಹೇಳ್ಕೊಂಡ್ರೆ ಅದು ತಲೆಗೆ ಹತ್ತುತ್ತೆ. ಸಿಂಪಲ್ಲಾಗಿ ಹೇಳಬೇಕು ಅಂದ್ರೆ, ನಿಮ್ಮ ಮುಂದಿರೋ ಕಥೇನೋ, ಕಾದಂಬರೀನೋ ಅಥವಾ ಪಠ್ಯಪುಸ್ತಕಾನೋ ಅರ್ಥ ಮಾಡ್ಕೊಂಡು ಓದಿದಾಂಗೆ. ಅದನ್ನೇ ಮಂತ್ರ ಹೇಳೋಕು ಒಂದು ತಂತ್ರ ಇದೆ ಅಂತ. ಇಲ್ಲಿ ತಂತ್ರ ಅಂದ್ರೆ ಇನ್ನೇನೋ ಅಲ್ಲ. ಹ್ರಸ್ವ, ದೀರ್ಘ, ಅನುಸ್ವಾರಯುಕ್ತ ಸ್ವರೋಚ್ಛಾರಣೆ. ಸಂಗೀತದ ಭಾಷೇಲಿ ನೋಡ್ಸ್‌ ಅಂತಾರಲ್ಲ ಹಾಗೆ! ಸ್ವರಯುಕ್ತವಾಗಿ ಹೇಳೋ ಸಂಗೀತ ಮನಸ್ಸಿಗೆ ನಾಟೋವಂತೆ ಮಂತ್ರಾನೂ! ಎನ್ನುತ್ತಾರೆ ಸಂಗೀತಗಾರ ನಾಗೇಂದ್ರ.

ಸ್ವರಯುಕ್ತವಾದ ಮ್ಯೂಸಿಕ್‌ ಚಿಕಿತ್ಸಕ ವಸ್ತುವಾಗುವಂತೆ ಕ್ರಮಬದ್ಧವಾಗಿ ಹೇಳ್ಕೊಳ್ಳೊ ಮಂತ್ರಾನೂ ದೇಹದ ಮೇಲೆ ಎಫೆಕ್ಟ್ ಮಾಡುತ್ತೆ. ಇಲ್ಲಾಂದ್ರೆ ಹೇಳಿದ್ದೇ ಹೇಳೋ ಕಿಸಬಾಯಿ ದಾಸ ಅಂತ ಹೇಳೋವ್ರು ಹೇಳ್ತಾನೇ ಇರ್ತಾರೆ. ಕೇಳೋವ್ರು ಕೇಳ್ತಾನೇ ಇರ್ತಾರೆ. ಏನಂತೀರಿ?


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಮುಕೇಶ್ ಅಂಬಾನಿಯವರ ಮೊದಲ ಮನೆ ಹೇಗಿದೆ ಗೊತ್ತಾ?


ಜಮೀನಿನಲ್ಲೇ ಘೋರ ದುರಂತ: ನೀರು ತುಂಬಿದ್ದ ಗುಂಡಿಗೆ ಬಿದ್ದು ಮೂವರು ಸಾವು


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


ವಚನಗಳಿಂದ ಸಂಗೀತ ಲೋಕ ಶ್ರೀಮಂತ


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ತುಳು ತೆರೆಗೆ ಸೋನಿಯಾ ಎಂಟ್ರಿ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್



<script src="https://jsc.adskeeper.com/r/s/rssing.com.1596347.js" async> </script>