Quantcast
Channel: VijayKarnataka
Viewing all articles
Browse latest Browse all 6795

ದಾರಿದೀಪ: ಅತಿ 'ಪೋಷಣೆ' ಬೇಡ

$
0
0

1. ದತ್ತು ಪಡೆದ ಮಗಳಿಗೆ ಈಗ ಎಂಟು ವರ್ಷ. ತುಂಬಾ ಚಂಚಲವಾಗಿದ್ದಾಳೆ. ಯಾವುದರಲ್ಲೂ ಏಕಾಗ್ರತೆಯಿಲ್ಲ. ವಿವರ ನೋಡಿ ಸಲಹೆ ನೀಡಿ.

* ಸುನಂದಾ, ಉಡುಪಿ

ದತ್ತು ಮಗುವಾಗಿರುವ ಕಾರಣ ಸರಿಯಾದ ಜಾತಕ ಮಾಡುವುದು ಕಷ್ಟಸಾಧ್ಯ. ವಿವರ ನೋಡಿದರೆ ಆಕೆಗೆ ಕೆಲವು ಜನ್ಮ ಸಂಸ್ಕಾರದ ಕೊರತೆ ಇರುವುದು ಕಂಡು ಬರುತ್ತದೆ. ಜನ್ಮಾರಿಷ್ಟ ಶಾಂತಿ, ದತ್ತು ಪ್ರಕ್ರಿಯಾ ವಿಧಿಗಳನ್ನು ನೀವು ಮಾಡಿಸಿದ ಹಾಗೆ ಕಾಣದು. ತಡವಾದರೂ ಈ ಬಗ್ಗೆ ವಿಮರ್ಶೆ ನಡೆಸಿ ಮಾಡುವುದೊಳಿತು.

2. ಮಗನು ಓದಿನಲ್ಲಿ ಹಿಂದೆ ಬಿದ್ದು ಸಾಧಾರಣ ನೌಕರಿ ಮಾಡುತ್ತಾ ಚಿಂತಿತನಾಗಿದ್ದಾನೆ. ಅವನು ಭವಿಷ್ಯದಲ್ಲಿ ಏನು ಮಾಡುವನು?

* ಸರಸ್ವತಿ, ಬೆಂಗಳೂರು

ಅತಿ ಪೋಷಣೆಯಿಂದ ಸಹಜ ಬೆಳವಣಿಗೆ ಕುಂಠಿತವಾಗುವುದು ಇಂದಿನ ಜನಾಂಗದ ಸಮಸ್ಯೆ. ಎಲ್ಲಾ ಅನುಕೂಲವಿದ್ದು ಕಷ್ಟ ಯಾಕೆ ಪಡಬೇಕು? ಎಂದು ಕೇಳುವರು ಇಂದಿನ ಮಕ್ಕಳು. ಆದರೆ ಬೆಳೆದಂತೆಲ್ಲಾ ಅವರಿಗೆ ಇದು ಗೊತ್ತಾಗುವಾಗ ತಡವಾಗಿರುತ್ತದೆ. ಸದ್ಯ ಅವನಿಗೆ ರಾಹು ದಶೆಯಿದ್ದು ಚಂದ್ರ-ಲಗ್ನ ಉಭಯ ಬಾಧೆಯಿದೆ. ಇದಕ್ಕೆ ತಕ್ಕುದಾದ ಜಪ, ಶಾಂತಿ ಕರ್ಮಗಳಿಂದ ಪ್ರಗತಿಯಿದೆ.

3. ಮದುವೆಗೆ ಒಪ್ಪಿದ ಸಂಬಂಧ ಕೈತಪ್ಪಿ, ಒಪ್ಪದಿರುವ ಸಂಬಂಧದವರು ದುಂಬಾಲು ಬೀಳುತ್ತಿದ್ದಾರೆ. ಏನು ಮಾಡಲಿ?

* ರಕ್ಷಿತಾ, ಅರಸಿಕೆರೆ

ನಿಮ್ಮ ಪ್ರವೃತ್ತಿಯಲ್ಲೇ ಗೊಂದಲವಿದೆ. ಯಾಕೆ ಒಪ್ಪಿದಿರಿ ಎಂದೂ, ಯಾಕೆ ಒಪ್ಪಲಿಲ್ಲ ಎಂದೂ ಸಹ ನಿಮಗೆ ಸ್ಪಷ್ಟತೆ ಇರದು. ಮತ್ತು ನಿಮ್ಮದು ಕರ್ಕ ರಾಶಿ, ತುಲಾ ಅಲ್ಲ. ಇಲ್ಲೂ ಗೊಂದಲವೇ ಇದೆ. ಮೊದಲು ಜಾತಕ ಸರಿ ಮಾಡಿಸಿಕೊಳ್ಳಿ. ನಂತರ ಧರ್ಮಸ್ಥಳಕ್ಕೆ ಹರಕೆ ಮಾಡಿಕೊಳ್ಳಿ. ವರ್ಷಾಂತ್ಯಕ್ಕೆ ವಿವಾಹ ನೆರವೇರುವುದು.

4. ವೈದ್ಯಕೀಯ ಓದುತ್ತಿರುವ ಮಗ ಓದು ಪೂರೈಸಲಾಗದೆ ಬಹಳ ಗೊಂದಲವಾಗಿದೆ. ದಾರಿ ತೋರಿ.

* ಭ್ರಮರಾಂಬ, ಮೈಸೂರು

ಜ್ಯೋತಿಷ್ಯವು ಕರಾರುವಾಕ್‌ ವಿದ್ಯೆಯಾಗಿದೆ ಎಂಬುದಕ್ಕೆ ನಿಮ್ಮಂಥ ಸಮಸ್ಯೆಗಳೇ ಸಾಕ್ಷಿ. ಓದ ಬೇಕಾದ್ದು ಬೇರೆ, ಓದುತ್ತಿರುವುದೇ ಬೇರೆಯಾದರೆ ಹೇಗೆ ಓದು ಮುಗಿಸುವುದು? ನಿಮ್ಮ ಮಗನಿಗೆ ಎಂಜಿನಿಯರಿಂಗ್‌ನಲ್ಲಿ ಎಲೆಕ್ಟ್ರಿಕಲ್‌, ಎಲೆಕ್ಟ್ರಾನಿಕ್ಸ್‌ ಆಗಿ ಬರುವುದು. ಅದೂ ಕಷ್ಟಸಾಧ್ಯ. ಇನ್ನು ವೈದ್ಯಕೀಯ ದೂರವೇ ಆಯಿತಲ್ಲ. ಕೇತುಗ್ರಸ್ತ ಚಂದ್ರ, ಬಲಿಷ್ಠ ಶನಿ, ಕುಜ, ಕರ್ಮದ ಶುಕ್ರಬಾಧೆ, ಅಷ್ಟಮ ಗುರು ಇದೆಲ್ಲಾ ಇಂಥ ಪರಿಣಾಮ ಹೇಳುತ್ತದೆ. ಇನ್ನು ಇಂಥ ಜಾತರು ವೈದ್ಯಕೀಯ ಓದಿದರೂ ಯಶಸ್ವಿ ಮತ್ತು ನೈಪುಣ್ಯವಿರದ ಮಂದಿಯಾಗುವರು. ನೀವು ಕಾರಣ ಹೇಳಿ ಎನ್ನಲಾಗಿ ವಿವರಿಸಲಾಗಿದೆ. ಇಂಥ ವ್ಯಾಸಂಗದ ಸಮಸ್ಯೆಗಳನ್ನು ಸರಿ ಮಾಡಲು ಕೌನ್ಸೆಲಿಂಗ್‌ ಕೇಂದ್ರಗಳಿವೆ. ಅಲ್ಲಿ ಆಪ್ತ ಸಲಹೆ ಪಡೆಯಿರಿ. ಅನ್ಯ ಕೋರ್ಸ್‌ ಅಂದರೆ ವೃತ್ತಿಪರ ಕೋರ್ಸ್‌ ಮಾಡಲು ಮಾರ್ಗದರ್ಶನ ಪಡೆಯಿರಿ.


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಮುಕೇಶ್ ಅಂಬಾನಿಯವರ ಮೊದಲ ಮನೆ ಹೇಗಿದೆ ಗೊತ್ತಾ?


ಜಮೀನಿನಲ್ಲೇ ಘೋರ ದುರಂತ: ನೀರು ತುಂಬಿದ್ದ ಗುಂಡಿಗೆ ಬಿದ್ದು ಮೂವರು ಸಾವು


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


ವಚನಗಳಿಂದ ಸಂಗೀತ ಲೋಕ ಶ್ರೀಮಂತ


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ತುಳು ತೆರೆಗೆ ಸೋನಿಯಾ ಎಂಟ್ರಿ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್



<script src="https://jsc.adskeeper.com/r/s/rssing.com.1596347.js" async> </script>