Quantcast
Channel: VijayKarnataka
Viewing all articles
Browse latest Browse all 6795

ದಕ್ಷಿಣ ದಿಕ್ಕೂ ಒಳ್ಳೆಯದು

$
0
0



ದಕ್ಷಿಣ ದಿಕ್ಕೆಂದರೆ ಕೆಲವರಿಗೆ ಅದೇನೋ ಅಂಜಿಕೆ. ಮತ್ತೆ ಕೆಲವರಿಗೆ ದಕ್ಷಿಣ ದಿಕ್ಕಿನಲ್ಲಿ ಮನೆ ಬಾಗಿಲಿದ್ದರೆ ಒಳ್ಳೆಯದಲ್ಲ ಎನ್ನುವ ಅಪನಂಬಿಕೆ. ದಕ್ಷಿಣ ದಿಕ್ಕಿನ ಫಲವೇನು ಎಂಬುದಕ್ಕೆ ಉತ್ತರ ಇಲ್ಲಿದೆ.

- ಎಚ್‌.ಎಲ್‌.ನರಸಿಂಹಮೂರ್ತಿ

ಸಾರ್‌, ನಮ್ಮ ಮನೆ ಬಾಗಿಲು ದಕ್ಷಿಣಕ್ಕಿದೆ. ಹಾಗಂತ ಮನೆ ಬಾಡಿಗೆಗೆ ಬರೋಕೇ ಜನರು ಹಿಂಜರಿಯುತ್ತಿದ್ದಾರೆ ಎಂದು ಜನರು ಅಲವತ್ತುಗೊಳ್ಳುವುದನ್ನು ನಾವು ನೋಡಿರುತ್ತೇವೆ. ಬಹಳಷ್ಟು ಜನರಿಗೆ ದಕ್ಷಿಣ ದಿಕ್ಕಿನ ಬಗ್ಗೆ, ಅದರ ಫಲಾಫಲಗಳ ಬಗ್ಗೆ ಅಷ್ಟಾಗಿ ಅರಿವಿದ್ದಂತಿಲ್ಲ. ಅವರು ತಪ್ಪು ಕಲ್ಪನೆಯಲ್ಲೇ ತಡಕಾಡುತ್ತಾರೆ. ಇನ್ನಿಲ್ಲದ ಯೋಚನೆಗಳನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಒದ್ದಾಡುತ್ತಾರೆ.

ನಿವೇಶನದ ದಕ್ಷಿಣಕ್ಕೆ ರಸ್ತೆ ಇದ್ದರೆ, ದಕ್ಷಿಣದ ಮಧ್ಯದ ನಿವೇಶನವಿದ್ದರೆ, ದಕ್ಷಿಣ ಆಗ್ನೇಯ ಪ್ರಶಸ್ತವಾದ ಗೇಟು ಇಡಲು ಅಥವಾ ಬಾಗಿಲು ಇಟ್ಟುಕೊಂಡರೆ ಅದರಿಂದ ಸಾಕಷ್ಟು ಶುಭಫಲಗಳು ಉಂಟಾಗುತ್ತವೆ. ಪೂರ್ವಾಗ್ನೇಯ ನಿವೇಶನವಿದ್ದರೆ ಪೂರ್ವ ಈಶಾನ್ಯಕ್ಕೆ ಗೇಟು, ಬಾಗಿಲು ಇಟ್ಟರೆ ಪ್ರಶಸ್ತವಾಗಿರುತ್ತದೆ. ದಕ್ಷಿಣಕ್ಕೆ ಪೂರ್ತಿ ಕಾಂಪೌಂಡ್‌ ಹಾಕಿ ದಕ್ಷಿಣ ಆಗ್ನೇಯದಲ್ಲಿ ಚಿಕ್ಕ ಗೇಟು ಇಟ್ಟರೆ ಪ್ರಶಸ್ತವಾಗಿರುತ್ತದೆ.

ನಿವೇಶನದ ಆಗ್ನೇಯದಲ್ಲಿ ಮಹಾಮರ್ಮ ಸ್ಥಾನ ಬಹಳ ಶಕ್ತಿಯುತವಾಗಿರುತ್ತದೆ. ಯಾಕೆಂದರೆ ಭೂಮಿಗೆ ಸೂರ್ಯನ ಕಿರಣಗಳು ಹೇಗೆ ಪ್ರಾಮುಖ್ಯವೋ ಹಾಗೇ, ಭೂಮಿಯ ಶಕ್ತಿ ಉತ್ಪತ್ತಿ ಎಂದರೆ ಭೂಮಿಯ ಎಲ್ಲಾ ಕೆಲಸ ಕಾರ್ಯಗಳಿಗೂ ಚಾಲನೆ ಇದ್ದಂತೆ. ಅಗ್ನಿ, ಪಂಚಭೂತಗಳಲ್ಲಿ ಅತಿ ಮುಖ್ಯವಾದ ಸ್ಥಾನವನ್ನು ಹೊಂದಿರುತ್ತದೆ. ಅದರಲ್ಲೂ ಆಗ್ನೇಯ ಮಹಾಮರ್ಮಸ್ಥಾನ ಪವಿತ್ರವಾದ ಸ್ಥಾನ. ದಕ್ಷಿಣ ಆಗ್ನೇಯ ದ್ವಾರ ಸಂಸಾರ ಬುದ್ಧಿಯ ಸಂಕೇತ ಹಾಗೂ ಸುಖಕ್ಕೆ ಸಂಕೇತ.

ಉದಾಹರಣೆಗೆ ತಿರುಪತಿ ತಿರುಮಲ ದೇವಸ್ಥಾನದ ಮಧ್ಯಭಾಗದಲ್ಲಿ ಶ್ರೀ ವೆಂಕಟೇಶ್ವರನ ದರ್ಶನಕ್ಕೆಂದು ಮೂಲಸ್ಥಾನಕ್ಕೆ ಹೋದರೆ ಎಲ್ಲಾ ಭಕ್ತರು ದಕ್ಷಿಣ, ಆಗ್ನೇಯ ಭಾಗದಿಂದಲೇ ಒಳಗೆ ಹೋಗಿ ಪರಮಾತ್ಮನನ್ನು ದರ್ಶಿಸಿ ದಕ್ಷಿಣ ಭಾಗದಿಂದಲೇ ಹೊರ ಬರುತ್ತಾರೆ. ಇದು ಎಲ್ಲರ ಗಮನಕ್ಕೂ ಬಂದಿರುವ ಸಂಗತಿ. ಪರಮಾತ್ಮ ಪೂರ್ವಕ್ಕೆ ಇದ್ದರೂ ದಕ್ಷಿಣ ದಿಕ್ಕಿಗೆ ಎಲ್ಲಾ ಭಕ್ತರು, ದಕ್ಷಿಣಾಜ್ಞೇಯದಲ್ಲಿ ಪ್ರವೇಶವನ್ನು ಮಾಡುತ್ತಿದ್ದಾರೆ. ಈ ಪ್ರಕ್ರಿಯೆ ಶತಶತಮಾನಗಳಿಂದಲೂ ನಡೆದು ಬರುತ್ತಿದೆ. ಅಲ್ಲಿ ಹೋಗಿ ದರ್ಶನ ಪಡೆದ ನಂತರ ಭಕ್ತರು ಸುಖ, ಸಂತೋಷ ಮತ್ತು ಮಾನಸಿಕ ಶಾಂತಿಯನ್ನು ಅನುಭವಿಸುತ್ತಿರುವುದು ಎಲ್ಲರಿಗೂ ವೇದ್ಯವಷ್ಟೇ.


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಮುಕೇಶ್ ಅಂಬಾನಿಯವರ ಮೊದಲ ಮನೆ ಹೇಗಿದೆ ಗೊತ್ತಾ?


ಜಮೀನಿನಲ್ಲೇ ಘೋರ ದುರಂತ: ನೀರು ತುಂಬಿದ್ದ ಗುಂಡಿಗೆ ಬಿದ್ದು ಮೂವರು ಸಾವು


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


ವಚನಗಳಿಂದ ಸಂಗೀತ ಲೋಕ ಶ್ರೀಮಂತ


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ತುಳು ತೆರೆಗೆ ಸೋನಿಯಾ ಎಂಟ್ರಿ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್



<script src="https://jsc.adskeeper.com/r/s/rssing.com.1596347.js" async> </script>