Quantcast
Channel: VijayKarnataka
Viewing all articles
Browse latest Browse all 6795

ಜಲರಾಶಿಯೊಳಗೆ ಸಂಚಾರ

$
0
0

ಬಿಸಿಲ ಧಗೆಗೆ ಬಾಡಿದ ಧರೆಯಲ್ಲೀಗ ಕೊಂಚ ನಿರುಮ್ಮಳತೆ. ಅಲ್ಲಲ್ಲಿ ಮಳೆಯ ತುಂತುರು ಆರಂಭವಾಗಿದೆ. ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರದ ಪ್ರಕಾರ ಜಲರಾಶಿಯೊಳಗೆ ಗ್ರಹಗಳ ಸಂಚಾರ ಆರಂಭವಾಗಿದೆ. ಅದುವೇ ಮಳೆಗೆ ಕಾರಣವಾಗಿದೆ.

- ಸಿ.ಕೆ. ಆನಂದತೀರ್ಥಾಚಾರ್‌

ಮಳೆ ಬಾರದಿದ್ದರೆ ಇಳೆಯಲ್ಲೆಲ್ಲಾ ಧಗೆ ಧಗೆ. ಅಬ್ಬಾ ಎಷ್ಟು ಬಿಸಿಲು ಎಂದು ಬಳಲಿ ಬೆಂಡಾದವರೇ ಹಲವರು. ಹೌದು, ಎಂದಿಗಿಂತಲೂ ಈ ಬಾರಿ ಬಿಸಿಲು ಹೆಚ್ಚಿತ್ತು. ಮಳೆರಾಯನ ಕೃಪೆಗಾಗಿ ಅಲ್ಲಲ್ಲಿ ಮಂಡೂಕಗಳ, ಗಾರ್ದಭಗಳ ಮದುವೆಯೂ ನಡೆಯಿತು. ಆದರೂ ಪ್ರಯೋಜನವಾಗಲಿಲ್ಲ. ಈ ಹವಾಮಾನ ವೈಪರೀತ್ಯಕ್ಕೆ ಗ್ರಹ-ನಕ್ಷತ್ರಗಳು ಕಾರಣ ಎನ್ನುವ ಅಂಶ ಸರ್ವವಿಧಿತ. ಅಂತೆಯೇ ಗ್ರಹಗಳು ವಿವಿಧ ರಾಶಿಗಳಲ್ಲಿ ಸಂಚರಿಸುವ ಆಧಾರದ ಮೇಲೆ ಧರಣಿಯಲ್ಲಿ ಮಳೆ ಬೀಳುವುದನ್ನು ಲೆಕ್ಕ ಹಾಕಬಹುದು. ಒಂದು ನಂಬಿಕೆಯಂತೆ ಜಲರಾಶಿಯಲ್ಲಿ ಗ್ರಹಗಳು ಸಂಚಾರ ಮಾಡುವಾಗ ಮಳೆ ಆಗುತ್ತದೆ. ಅನೇಕ ಗ್ರಹಗಳು ಜಲರಾಶಿಯಲ್ಲಿದ್ದಾಗ ವಿಶೇಷವಾಗಿ ಚಂದ್ರನು ಜಲರಾಶಿಯಲ್ಲಿ ಸಂಚರಿಸುವಾಗ ಮಳೆ ಆಗುತ್ತದೆ. ಭೂರಾಶಿಯ ಮೇಲೆ ಗ್ರಹಗಳ ಸಂಚಾರವಿದ್ದಾಗಲೂ ಮಳೆ ಆಗುತ್ತದೆ. ಅಂತೆಯೇ ಅಗ್ನಿರಾಶಿಯ ಮೇಲೆ ಗ್ರಹಗಳ ಸಂಚಾರವಾಗುವಾಗ ಮಳೆಯ ಲಕ್ಷಣ ಕಡಿಮೆ. ಬಿಸಿಲು ಜಾಸ್ತಿಯಾಗುತ್ತದೆ.

ಏಪ್ರಿಲ್‌ ಕೊನೆಯ ವಾರದವರೆಗೂ ಅಗ್ನಿತತ್ವ ರಾಶಿಯಾದ ಮೇಷ ರಾಶಿಯಲ್ಲಿ ರವಿ, ಬುಧ, ಶುಕ್ರ ಗ್ರಹರು ಸಂಚರಿಸುತ್ತಿದ್ದರಿಂದ ಬಿಸಿಲು ಹೆಚ್ಚಿತ್ತು. ಯಾವ ರಾಶಿಯಲ್ಲಿಯೇ ಆಗಲಿ ರವಿ, ಬುಧರು ಒಂದೇ ರಾಶಿಯಲ್ಲಿದ್ದರೆ ರವಿ ಮಧ್ಯ ದೋಷವಾಗುತ್ತದೆ. ಅಂದರೆ ರವಿಗಿಂತ ಬುಧ ಮುಂದೆ ಹೋದರೆ ರವಿ ಮಧ್ಯ ದೋಷವಾಗುತ್ತದೆ. ಈ ಸಂದರ್ಭದಲ್ಲಿ ರವಿಯು ಅಶ್ವಿನಿ ನಕ್ಷತ್ರದಲ್ಲೂ ಬುಧನು ಕೃತ್ತಿಕಾ ನಕ್ಷತ್ರದಲ್ಲೂ ಸಂಚರಿಸುತ್ತಿದ್ದರಿಂದ ಮಳೆ ಆಗುವಲ್ಲಿ ಸ್ವಲ್ಪ ವಿಳಂಬವಾಯಿತು. ಆದರೆ ಬುಧ ಗ್ರಹವು ಏಪ್ರಿಲ್‌ 29ರಂದು ವಕ್ರೀಯವಾಗಿ ಸಂಚರಿಸುತ್ತಿದ್ದು, ಬುಧ ಗ್ರಹವು ವಕ್ರ ಅಥವಾ ಅಸ್ತಂಗತನಾಗಿದ್ದರೆ ರವಿ ಮಧ್ಯೆ ದೋಷ ಹುಟ್ಟುವುದಿಲ್ಲ. ಆ ಕಾರಣದಿಂದಲೇ ಏಪ್ರಿಲ್‌ 29ರ ನಂತರ ಅಲ್ಲಲ್ಲಿ ತುಂತುರಾದರೂ ಮಳೆಯಾಗಿರುವುದು.

ವಾಯು ರಾಶಿಗಳ ಮೇಲೆ ಗ್ರಹಗಳ ಸಂಚಾರವಿದ್ದಾಗ ಮಳೆಯೇನೋ ಆಗುತ್ತದೆ. ಆದರೆ ಮಳೆಗಿಂತ ಗಾಳಿ ಹೆಚ್ಚಾಗಿರುವುದರಿಂದ ಇಂತಹ ಮಳೆಗಳಿಂದ ಹಾನಿಯೇ ಹೆಚ್ಚು. ಸೂರ್ಯನ ಸಮೀಪ ಅನೇಕ ಗ್ರಹಗಳಿದ್ದಾಗ ಮಳೆ ಹೆಚ್ಚಾಗುತ್ತದೆ. ಸೂರ್ಯನಿಂದ ದೂರ ಇದ್ದಾಗ ಮಳೆ ಕಡಿಮೆ ಆಗುತ್ತದೆ.

ಧರಣಿಗೆ ಭರಣಿಯ ಸಿಂಚನ

ಈ ಬಾರಿ ಮಳೆ ಭರಣಿಯೊಂದಿಗೆ ಆಗಿರುವುದರಿಂದ ವರ್ಷಪೂರ್ತಿ ಉತ್ತಮ ಮಳೆ-ಬೆಳೆಯನ್ನು ಕಾಣಬಹುದು. ಇನ್ನು ಸರ್ವಜ್ಞ ಕವಿಯ ಅಭಿಪ್ರಾಯದಂತೆ 'ಸಿಂಹಕ್ಕೆ ಗುರು ಬರಲು ಸಂಗರವು ಘನವಕ್ಕು' ಎಂಬಂತೆ ಮಹಿಳೆಯರಿಗೆ ಸ್ವಲ್ಪ ತೊಂದರೆಯಾಗುವ ಸಾಧ್ಯತೆಯಿದೆ. ಹಿಂಗಾರು ಮಳೆಯು ಮಾತ್ರ ಚೆನ್ನಾಗಿ ಆಗಿ ಹಿಂಗಾರು ಬೆಳೆ ಬರುವುದು.

ಮಳೆ ನಿರ್ಣಯ

ಮಳೆಗಾಲದಲ್ಲಿ ನೈರುತ್ಯ ದಿಕ್ಕಿನ ಗಾಳಿಯು ತಂಪಾಗಿ ಯಾವ ಮಳೆಯವರೆಗೆ ಬೀಸುವುದೋ ಆ ಮಳೆಯವರೆಗೆ ಎಲ್ಲಾ ಕಡೆಗೆ ಒಂದೇ ರೀತಿ ಮಳೆ ಆಗುವುದು. ಈಶಾನ್ಯ ದಿಕ್ಕಿನ ಗಾಳಿ ಯಾವ ಮಳೆಯವರೆಗೆ ಬೀಸುವುದೋ ಆ ಮಳೆಯವರೆಗೆ ಮಳೆ ಆಗುವುದಿಲ್ಲ. ಒಟ್ಟಿನಲ್ಲಿ ನೈರುತ್ಯ, ಈಶಾನ್ಯ ದಿಕ್ಕಿನ ಗಾಳಿಗಳಿಂದ ಮಳೆ ಬೆಳೆಗಳ ಕಷ್ಟ. ಹಿಂಗಾರು ಫಲಕ್ಕೆ ಈಶಾನ್ಯ ಗಾಳಿ ನಾಶ ಮಾಡುತ್ತದೆ. ಪೂರ್ವ-ಪಶ್ಚಿಮ ಬೀಸಿದರೆ ವಿಶೇಷವಾದ ವೃಷ್ಟಿಯುಂಟಾಗುವುದು.

ಆಗ್ನೇಯದಲ್ಲಿ ಬೀಸಿದರೆ ಅಲ್ಲಲ್ಲಿ ಅಲ್ಪ ವೃಷ್ಟಿಯುಂಟಾಗುವುದು. ದಕ್ಷಿಣ ದಿಕ್ಕಿನಲ್ಲಿ ಬೀಸಿದರೆ ಅಲ್ಪ ವೃಷ್ಟಿ. ನೈರುತ್ಯದಲ್ಲಿ ಮಿಂಚಿದರೆ ಕ್ಷಾಮ ಎಂತಲೂ, ಪಶ್ಚಿಮದಲ್ಲಿ ಬೀಸಿದರೆ ಮಧ್ಯಮ ವೃಷ್ಟಿಯಾಗುತ್ತದೆ. ವಾಯು ಅಧಿಕವಾದರೆ ಅಲ್ಲಲ್ಲಿ ಮಳೆಯಾಗುವುದು. ಗಾಳಿ ಉತ್ತರದಲ್ಲಿ ಬೀಸಿದರೆ ಸಂಪೂರ್ಣ ವೃಷ್ಟಿಯಾಗುವುದು. ಈಶಾನ್ಯದಲ್ಲಿ ಬೀಸಿದರೆ ತಕ್ಷಣ ವೃಷ್ಟಿ ಆರಂಭವಾಗುವುದು ಮತ್ತು ಸರ್ವತ್ರ ಅಧಿಕ ಮಳೆ ಆಗುವುದು.

ಗುರುವು ಆಗಸ್ಟ್‌ 11ರಿಂದ ಕನ್ಯಾರಾಶಿಯಲ್ಲಿ ಸಂಚರಿಸುವನು. ಗುರುವು ಕನ್ಯಾರಾಶಿಗೆ ಬಂದರೆ ದೇಶಕ್ಕೆ ಸಮೃದ್ಧಿಯಾಗಿ ಮಳೆ ಆಗುವುದು. ಹೈನು ಚೆನ್ನಾಗಿ ಆಗುವುದು. ಸ್ತ್ರೀಯರಿಗೆ ಆರೋಗ್ಯವಾಗುವುದು. ಮಳೆಗಾಲದಲ್ಲಿ ಬರುವ ಸಂಕ್ರಮಣಗಳು ಜನರಾಶಿಗಳಾದ ಕರ್ಕ, ಮಕರ, ುೕನ ಲಗ್ನಗಳಲ್ಲಾದರೆ ಆ ಮಾಸದಲ್ಲಿ ಅಧಿಕ ಮಳೆಯು, ಮಧ್ಯಮ ಜಲರಾಶಿಗಳಾದ ವೃಷಭ, ತುಲಾ, ವೃಶ್ಚಿಕ, ಧನಸ್ಸು, ಕುಂಭ ಈ ಲಗ್ನಗಳಲ್ಲಾದರೆ ಸಾಧಾರಣ ಮಳೆಯು, ನಿರ್ಜಲ ರಾಶಿಗಳಾದ ಮೇಷ, ುಥುನ, ಸಿಂಹ, ಕನ್ಯಾ ಈ ಲಗ್ನಗಳಲ್ಲಾದರೆ ಅನಾವ್ಟೃಯು ಉಂಟಾಗುವುದು.

ಒಟ್ಟಿನಲ್ಲಿ ಜ್ಯೋತಿಷ್ಯ ಶಾಸ್ತ್ರದಿಂದಲೂ ಹವಮಾನದ ವೈಪರೀತ್ಯಗಳನ್ನು ತಿಳಿಸಬಹುದಾಗಿದ್ದು, ಜ್ಯೋತಿಷ್ಯರು ಈ ದಿಶೆಯಲ್ಲಿಯೂ ಹೆಚ್ಚಿನ ಅಧ್ಯಯನ ಗೈಯ್ಯುವುದು ಅವಶ್ಯಕವಾಗಿರುತ್ತದೆ.

---

ಒಂದಷ್ಟು ನಂಬಿಕೆ

ಈ ಮಳೆಯ ವಿಚಾರವಾಗಿ ಕುರುಬರ ರಟ್ಟುಮತದ ಶಾಸ್ತ್ರಕಾರರು ಮತ್ತು ಸರ್ವಜ್ಞ ಕವಿಯು ತಮ್ಮ ಅನುಭವ ಮೂಲಕ ಕರಾರುವಾಕ್‌ ಭವಿಷ್ಯ ನುಡಿಗಳನ್ನು ಬರೆದಿಟ್ಟಿದ್ದಾರೆ. ಅದರಲ್ಲೂ ಕುರುಬರ ರಟ್ಟು ಮತವನ್ನು ವಿಶೇಷವಾಗಿ ಮಳೆ-ಬೆಳೆ ವಿಚಾರವಾಗಿ ಇಂದಿಗೂ ರೈತಾಪಿ ಜನರು ಮತ್ತು ಜ್ಯೋತಿಷ್ಯರು ಅಂಗೀಕರಿಸಿದ್ದಾರೆ. ರಟ್ಟು ಮತದ ಶಾಸ್ತ್ರದ ಪ್ರಕಾರ ಅಶ್ವಿನಿ ಮಳೆ ಬರಬಾರದು. ಅಶ್ವಿನಿ ಮಳೆ ಬಂದರೆ ಹಸುವಿಗೆ ಹುಲ್ಲಿಲ್ಲ. ವಿಪ್ರರಿಗೆ ಕಷ್ಟವಾಗುವುದು. ಭರಣಿ ಮಳೆ ಬರಲು ಬಂಗಾರದ ಹೊಗೆಯಂತೆ ಶೃಂಗಾರ ಸೌಖ್ಯದಿಂದ ಮೆರೆಯುವುದು. ಎತ್ತ ನೋಡಿದರೂ ಫಲ, ಪೈರು, ಪಚ್ಚೆ, ಜನರು ಸೌಖ್ಯದಿಂದ ಇರುತ್ತಾರೆ. ಮೃಗಶಿರದಿಂದ ಮುಂದಿನ ಹತ್ತು ಮಳೆಯು ಬಂದಲ್ಲಿ ಜಗತ್ತಿನ ಎಲ್ಲ ಕಡೆಗೂ ಬೆಳೆಗಳು ಉತ್ತಮವಾಗಿ ಬರುತ್ತದೆ. ಎಲ್ಲೆಡೆ ಶಾಂತಿ ನೆಲೆಸುತ್ತದೆ ಎಂದು ತಿಳಿಸಿದ್ದಾರೆ.


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಮುಕೇಶ್ ಅಂಬಾನಿಯವರ ಮೊದಲ ಮನೆ ಹೇಗಿದೆ ಗೊತ್ತಾ?


ಜಮೀನಿನಲ್ಲೇ ಘೋರ ದುರಂತ: ನೀರು ತುಂಬಿದ್ದ ಗುಂಡಿಗೆ ಬಿದ್ದು ಮೂವರು ಸಾವು


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


ವಚನಗಳಿಂದ ಸಂಗೀತ ಲೋಕ ಶ್ರೀಮಂತ


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ತುಳು ತೆರೆಗೆ ಸೋನಿಯಾ ಎಂಟ್ರಿ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್



<script src="https://jsc.adskeeper.com/r/s/rssing.com.1596347.js" async> </script>