Quantcast
Channel: VijayKarnataka
Viewing all articles
Browse latest Browse all 6795

ಪರಿಶ್ರಮ ಮತ್ತು ಏಕಾಗ್ರತೆ ಇರಲಿ

$
0
0

ದಾರಿದೀಪ: ಹರೀಶ್ ಕಾಶ್ಯಪ್

1. ಕುಟುಂಬ ವಿರೋಧಗಳು, ನೌಕರಿ ಮತ್ತು ಮದುವೆ ವಿಳಂಬ ಸಮಸ್ಯೆಯಿದೆ. ದಯ ಮಾಡಿ ಉತ್ತರಿಸಿ.

ಲಿಂಗಪ್ಪ ಅಂಗಡಿ, ವಿಜಯಪುರ

ನಿಮ್ಮಂತೆ ವಿದ್ಯಾವಂತರೆಲ್ಲಾ ಸರ್ಕಾರಿ ನೌಕರಿಯ ಜಪ ಮಾಡಿದರೆ ಅನ್ಯ ವಿಕಾಸ ವೃತ್ತಿಯಲ್ಲಿ ತೆರೆಯಲಾರದು. ನಿಮ್ಮದು ಆಶ್ಲೇಷಾ-ಕರ್ಕ ರಾಶಿ. ನೀವು ಹೇಳಿದಂತೆ ಮೇಷ ರಾಶಿ ಬರುವುದಿಲ್ಲ. ಸರಿಪಡಿಸಿಕೊಳ್ಳಿ. 48 ದಿನ ಪ್ರಾತಃಕಾಲ ಅಶ್ವತ್ಥ ಪ್ರದಕ್ಷಿಣೆ, ಮಂಗಳವಾರ ಸುಬ್ರಹ್ಮಣ್ಯ ದೇವರ ಪೂಜೆ ಮಾಡುತ್ತಾ ಬನ್ನಿ. ಇದೇ ವರ್ಷ ಶುಭ ಫಲವಿದೆ.

2. ನನ್ನ ತಮ್ಮ ಮದುವೆ ನಿರಾಕರಿಸುತ್ತಿದ್ದಾನೆ. ದೋಷ ಮತ್ತು ಪರಿಹಾರಗಳನ್ನು ತಿಳಿಸಿ.

ಅಂಜನ್‌ಕುಮಾರ್‌, ಹನುಮಂತ ನಗರ

ನೀಚ ಚಂದ್ರ, ಲಗ್ನ ಬುಧ, ಭಾಗ್ಯದ ಶನಿಯು ಆತನ ವಿವಾಹ, ಸಂಸಾರ ವಿಷಯದಲ್ಲಿ ಅನಾಸಕ್ತಿ ಉಂಟು ಮಾಡುತ್ತಿದ್ದಾರೆ. ನೀವು ಬಲವಂತ ಮಾಡಿದರೆ ಮುಂದೆ ತೊಂದರೆ ಆದೀತು. ಮನೋವೈದ್ಯರಲ್ಲಿ ಆಪ್ತ ಸಲಹೆ ಮತ್ತು ಕೆಲವು ಪೂಜಾ ಪ್ರಾಯಶ್ಚಿತಗಳು ಆಗಬೇಕು. ಅವರನ್ನು ಈ ನಿಟ್ಟಿನಲ್ಲಿ ಒಪ್ಪಿಸಿ ಮುಂದುವರೆದರೆ ಒಳಿತು.

3. ಹಣಕಾಸಿನ ತೊಂದರೆ ತುಂಬಾ ಇದೆ. ವ್ಯಾಪಾರವಿಲ್ಲ. ವಾಸ್ತು ಬದಲಾವಣೆ ಮಾಡಿದ್ದೇವೆ. ದಾರಿ ತೋರಿ.

ಮಂಜುನಾಥ ಉಜ್ಜಪ್ಪ, ರಾಣೆಬೆನ್ನೂರು

ವ್ಯಾಪಾರ ಚೆನ್ನಾಗಿ ಆಗುವುದಕ್ಕೆ ವಾಸ್ತು ಸರಿ ಮಾಡಿಸಿದರೆ ಆಗದು. ಮೊದಲಿಗೆ ತಪ್ಪು ತಿಳುವಳಿಕೆಯಿಂದ ಹೊರ ಬನ್ನಿ. ನಾವು ತಂದ ಶುಭಾಶುಭ ಕರ್ಮಗಳು ವಾಸ್ತು, ಹರಳು, ದಿಕ್ಕು ಎಂಬ ಮೂಢನಂಬಿಕೆಯಿಂದ ಬದಲಾಗದು. ಸತ್ಫಲ ಕೊಡುವುದು ಸತ್ಕರ್ಮ, ಜ್ಞಾನ ಮಾತ್ರದಿಂದ ಎಂಬುದು ನೆನಪಿರಲಿ. ಜಾತಕ ಪರಿಶೀಲನೆ ಮತ್ತು ಪ್ರಶ್ನಾವಳಿಯ ಅಗತ್ಯವಿದೆ.

4. ವೈಭವದಿಂದ ಮದುವೆ ಮಾಡಿಕೊಟ್ಟ ಮಗಳ ದಾಂಪತ್ಯ ಮುರಿದಿದೆ. ನೀವೇ ದಾರಿ ತೋರಬೇಕು.

ಬಿ. ಆರ್ಮುಗಂ, ಬೆಂಗಳೂರು

ವೈಭವದ ಸಂಸಾರ ಆಪೇಕ್ಷೆ ನರಚಿತ್ತ, ಸುಖ ಶಾಂತಿಯು ಹರಿಚಿತ್ತ ಎಂಬುದು ನೆನಪಿರಲಿ. ಮಗಳ ಮದುವೆ ಸಂಬಂಧದಲ್ಲಿ ಜಾತಕ ಹೊಂದುವುದಿಲ್ಲ. ಅಳಿಯನ ಕುಟುಂಬದಲ್ಲಿ ಅನೇಕ ದೋಷಗಳಿವೆ. ಮಗಳಿಗೂ ಗುರು-ಕುಜ ದೋಷಗಳಿವೆ. ಸೂಕ್ತ ಪ್ರಶ್ನಾವಳಿ, ಪ್ರಾಯಶ್ಚಿತ ಹಾಗೂ ಆಪ್ತ ಸಲಹೆಗಳಿಂದ ಪರಿಹರಿಸಬಹುದು.

5. ಮಗನು ಯಾವ ವಿಷಯ ಓದಿದರೆ ಯಶಸ್ವಿಯಾಗುವನು ಎಂಬುದೇ ಚಿಂತೆಯಾಗಿದೆ. ದಾರಿ ತೋರಿ.

ಅನ್ನಪೂರ್ಣಾ, ಮಂಗಳೂರು

ಆತ ಕಾಮರ್ಸ್‌ನಲ್ಲೇ ಮುಂದುವರೆದು ಮ್ಯಾನೇಜ್‌ಮೆಂಟ್‌ ಎಂಬಿಎ ಮಾಡಿದರೆ ದಾರಿಯಾಗುವುದು. ಲಗ್ನ ಶುಕ್ರ ಬಾಧೆಯೂ, ಅದರ ದಶೆಯೂ ಇರಲಾಗಿ ಅಭಿವೃದ್ಧಿ ಕುಂಠಿತವಾಗುವುದು. ಹೆಚ್ಚಿನ ಪರಿಶ್ರಮ ಮತ್ತು ಏಕಾಗ್ರತೆಗೆ ಶ್ರಮಿಸಬೇಕು. ಪ್ರತಿ ಶುಕ್ರವಾರ ಮುಂದಿನ ನವರಾತ್ರಿಯವರೆಗೂ ಮನೆಯಲ್ಲಿ ದುರ್ಗಾ ಪಾರಾಯಣೆ ಮಾಡಿಸುತ್ತ ಕೊನೆಗೆ ಸರಸ್ವತಿ ಹೋಮ, ಗಣ ಹೋಮಗಳನ್ನು ವಿಧಿವತ್ತಾಗಿ ಮಾಡಿಸಿ.

6. ದಾಂಪತ್ಯದಲ್ಲಿ ವಿರಸವಿದೆ. ಮಗುವಿದೆ ಆದರೆ ಪತಿಯ ತಿರಸ್ಕಾರದಿಂದ ನೊಂದಿರುವೆ. ದಾರಿ ತೋರಿಸಿ.

ಪ್ರಮೀಳಾ, ಶ್ರೀರಂಗಪಟ್ಟಣ

ಬಹಳ ವಿಷಯಗಳನ್ನು ನೊಂದು ಬರೆದಿರುವಿರಿ. ನಮ್ಮ ಸಹಾನುಭೂತಿ ಮತ್ತು ದೇವರ ಆಶೀರ್ವಾದ ನಿಮಗಿದೆ. ಒಲ್ಲದ ಗಂಡನಿಗೆ ಅಥವಾ ಹೆಂಡತಿಗೂ ಅನ್ಯರು ಬುದ್ಧಿ ಹೇಳಲಾಗದು. ಕೊರಗಿ ಬಾಳುವುದಕ್ಕಿಂತ ಮಗುವಿನ ಶ್ರೇಯಸ್ಸಿಗೆ, ನಿಮ್ಮ ಸ್ವತಂತ್ರ ಜೀವನ ನಡೆಸುವುದೇ ಒಳ್ಳೆಯದು. ನೀವು ವಿದ್ಯಾವಂತರಾಗಿದ್ದು, ಕೆಲಸವೂ ಇರುವುದರಿಂದ ಕಾನೂನಿನ ಆಶ್ರಯ ಮತ್ತು ಧೈರ್ಯದಿಂದ ಮುಂದಡಿಯಿಡಿ.


Viewing all articles
Browse latest Browse all 6795

Trending Articles


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್


Namaskāra नमस्कार (salutation)


ವಿರಾಟ್-ಅನುಷ್ಕಾ ನಡುವಣ ಸಂಭಾಷಣೆ ಊಹಿಸಬಲ್ಲೀರಾ?


‘ವ್ಯಾಪಾರ’ದಲ್ಲಿ ವೃದ್ಧಿಯಾಗಲು ಹೀಗೆ ಮಾಡಿ….


ಅಪ್ಪ ಅಮ್ಮ ಬೈಯ್ತಾರೆ ಅಂತ ಬೆಂಗಳೂರಿಂದ ಚಳ್ಳಕೆರೆಗೆ ಹೋದ ಮಕ್ಕಳು


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


ನಿತ್ಯ ‘ಬ್ಲೂ ಫಿಲಂ’ತೋರಿಸಿ ಸೆಕ್ಸ್ ಗೆ ಬಲವಂತ: ರೋಸಿ ಹೋದ ಪತ್ನಿ


ಮನೆಯಲ್ಲಿ ಸದಾ ಲಕ್ಷ್ಮಿ ನೆಲೆಸಿರಲು ಮಂಗಳಮುಖಿಯಿಂದ ಒಂದು ನಾಣ್ಯ ಪಡೆದು ಹೀಗೆ ಮಾಡಿ


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!



<script src="https://jsc.adskeeper.com/r/s/rssing.com.1596347.js" async> </script>