Quantcast
Channel: VijayKarnataka
Viewing all articles
Browse latest Browse all 6795

ರಾಜಕಾರಣಿಗಳು ನಾಜೂಕಿನ ಹತ್ಯೆಗಾರರು: ಕೋಡಿಹಳ್ಳಿ

$
0
0

ಇಳಕಲ್‌: ''ರೈತ, ನೇಕಾರ ಸರಕಾರದ ಎರಡು ಕಣ್ಣು. ರೈತ ನಮ್ಮ ಅನ್ನದಾತ ಎಂದು ಹೊಗಳುತ್ತ, ಅವರ ಯಾವ ತೊಂದರೆಯನ್ನೂ ಸರಿಪಡಿಸದಿರುವ ಇಂದಿನ ರಾಜಕಾರಣಿಗಳು ನಯ ನಾಜೂಕಿನ ಹತ್ಯೆಗಾರರು'' ಎಂದು ರೈತ ಸಂಘದ ರಾಜ್ಯಾಧ್ಯಕ್ಷ ಚಂದ್ರಶೇಖರ ಕೋಡಿಹಳ್ಳಿ ಹೇಳಿದರು.

ರಾಜ್ಯ ಹಾಗೂ ಕೇಂದ್ರ ಸರಕಾರದ ರೈತ ವಿರೋಧಿ ನೀತಿ ಪ್ರತಿಭಟಿಸಿ ಬೆಂಗಳೂರಿನ ಬಸವನಗುಡಿ ನ್ಯಾಷನಲ್‌ ಕಾಲೇಜ್‌ ಮೈದಾನದಲ್ಲಿ ಮೇ 27 ರಂದು ನಡೆಸಲಿರುವ ರೈತರ ಬೃಹತ್‌ ಸಮಾವೇಶ ಕುರಿತು ರಾಜ್ಯದೆಲ್ಲೆಡೆ ಸಂಚಾರ ಕೈಗೊಂಡ ಅವರು ನಗರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

''ರೈತರು ಗ್ರಾಮೀಣ ಪ್ರದೇಶ ತೊರೆದು ಗುಳೆ ಹೋಗುತ್ತಿದ್ದರೂ ಚಿಂತಿಸದಿರುವ, ರಾಜ್ಯಕ್ಕೆ ಅತ್ಯಂತ ಮಹತ್ವಪೂರ್ಣವಾದ ಮಹದಾಯಿ ಯೋಜನೆ ಜಾರಿಗೊಳಿಸುವಲ್ಲಿ ಹಿಂದೇಟು ಹಾಕುತ್ತಿರುವ, ಸರಕಾರದ ನೀತಿ ಖಂಡನೀಯ. ಯೋಜನೆ ವಿಳಂಬಕ್ಕೆ ರಾಜ್ಯದ ಬಿಜೆಪಿ ನಾಯಕರ ಇಚ್ಛಾಶಕ್ತಿ ಕೊರತೆಯೇ ಕಾರಣ. ತಮ್ಮ ಅವಧಿಯಲ್ಲಿಯೇ ಮಾಡಬೇಕೆಂಬ ಸಮಯ ಸಾಧಕತನ ಕೈ ಬಿಟ್ಟು ರಾಜ್ಯದ ರೈತರ ಹಿತ ಕಾಪಾಡುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಬೇಕಿದೆ'' ಎಂದರು.

''ಎರಡೂ ಸರಕಾರಗಳು ರೈತರ ಆತ್ಮಹತ್ಯೆ ತಡೆಗಟ್ಟುವಲ್ಲಿ ವಿಫಲವಾಗಿವೆ. ಬರಗಾಲ ಸಂದರ್ಭದಲ್ಲಿ ಬಲತುಂಬುವ ಕೆಲಸವನ್ನೂ ಮಾಡುವಲ್ಲಿ ಸಂಪೂರ್ಣ ಸೋತಿವೆ. ರಾಜ್ಯದಲ್ಲಿ ರೈತರ ಹೋರಾಟ ಇದ್ದರೂ ಗ್ರಾಮೀಣ ಭಾಗದ ಜನರ ತೊಂದರೆ ನೀಗಿಸುವ ಇಚ್ಛಾಶಕ್ತಿ ಕೊರತೆ ಸರಕಾರದಲ್ಲಿ ಎದ್ದು ಕಾಣುತ್ತಿದೆ'' ಎಂದು ಆರೋಪಿಸಿದರು.

ರಾಜ್ಯದಲ್ಲಿ 1300 ರೈತರು ಸಾವಿಗೀಡಾಗಿದ್ದಾರೆ. ಈ ಹಿನ್ನೆಲೆಯಲ್ಲಿ ರೈತರ ಬಳಿ ಹೋಗುವ, ರೈತರಲ್ಲಿ ಬಲ ತುಂಬುವುದಕ್ಕಾಗಿಯೇ ಈ ಸಮಾವೇಶ ಸಂಘಟಿಸಲಾಗಿದೆ. ಒಟ್ಟಾರೆ ರಾಜ್ಯ ಸರಕಾರದ 3 ವರ್ಷದ ಸಾಧನೆ ಶೂನ್ಯ ಎಂದು ಟೀಕಿಸಿದರು.

ರೈತ ಮುಖಂಡ ಆನೇಕಲ್‌ ನಾಗರಾಜ್‌, ಜಿಲ್ಲಾ ಉಪಾಧ್ಯಕ್ಷ ಶಶಿಕಾಂತ ಬಂಡರಗಲ್‌, ತಾಲೂಕು ಅಧ್ಯಕ್ಷ ಮಲ್ಲನಗೌಡ ತುಂಬದ, ಬಸವರಾಜ ಹುಡೇದಮನಿ, ಮಹಾಂತಪ್ಪ ವಾಲೀಕಾರ, ಮಹಾಲಿಂಗಪ್ಪ ಅವಾರಿ, ಅಶೋಕ ಬಂಡರಗಲ್‌, ಶಂಕ್ರಪ್ಪ ಚಿನ್ನಾಪೂರ, ಪ್ರೊ.ಸಿ.ಎಂ. ಜುಮ್ನಾಳ, ನಾಗೇಶ ನಿಲೂಗಲ್‌ ಹಾಗೂ ಗುರುಗಾಣಿಗೇರ ಮತ್ತಿತರರು ಉಪಸ್ಥಿತರಿದ್ದರು.


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಮುಕೇಶ್ ಅಂಬಾನಿಯವರ ಮೊದಲ ಮನೆ ಹೇಗಿದೆ ಗೊತ್ತಾ?


ಮನವನ್ನು ಮುದಗೊಳಿಸುತ್ತೆ ಪುಟ್ಟ ಕಂದನ ಕ್ಯೂಟ್‌ ವಿಡಿಯೋ


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


ಗುರು ರಾಘವೇಂದ್ರರ ದಿನದ ಭವಿಷ್ಯ ಹಾಗೂ ರಾಶಿ ಫಲ


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ವಿರಾಟ್-ಅನುಷ್ಕಾ ನಡುವಣ ಸಂಭಾಷಣೆ ಊಹಿಸಬಲ್ಲೀರಾ?


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್



<script src="https://jsc.adskeeper.com/r/s/rssing.com.1596347.js" async> </script>