Quantcast
Channel: VijayKarnataka
Viewing all articles
Browse latest Browse all 6795

ನೆಲಕಚ್ಚಿದ ಬಾಳೆ, ಬಂದ್‌ ಆದ ಮಗ್ಗ: ಲಕ್ಷಾಂತರ ಹಾನಿ

$
0
0

ರಬಕವಿ/ಬನಹಟ್ಟಿ ವರದಿ: ರಬಕವಿ ಸಮೀಪದ ಯರಗಟ್ಟಿ ಗ್ರಾಮದಲ್ಲಿನ ಹತ್ತಾರು ಎಕರೆ ಪ್ರದೇಶದಲ್ಲಿನ ಬಾಳೆ ಸಂಪೂರ್ಣ ನೆಲಕಚ್ಚಿದ ಪರಿಣಾಮ ಲಕ್ಷಾಂತರ ರೂ. ಹಾನಿಯಾಗಿದೆ.

ಪುಂಡಲೀಕ ಗೋಪಾಳೆ ಹಾಗೂ ದುಂಡಪ್ಪ ಗೋಪಾಳೆ, ಬಸಪ್ಪ ಹಾಗೂ ಯಲ್ಲಪ್ಪ ಗೋಪಾಳೆ, ವಿಜಯಲಕ್ಷ್ಮಿ ರಾಯಪ್ಪ ಹೆಗ್ಗನವರ ಬಾಳೆ ಬೆಳೆ ಸೇರಿದಂತೆ ನಾನಾಕಡೆ ಸುಮಾರು 50 ಲಕ್ಷ ಕ್ಕೂ ಅಧಿಕ ಬೆಲೆ ಬಾಳುವ ಬಾಳೆ ಹಾನಿಯಾಗಿದೆ.

ಇನ್ನೇನು ವಾರದಲ್ಲಿಯೇ ಮಾರುಕಟ್ಟೆಗೆ ತೆರಳಬೇಕಿದ್ದ ಬಾಳೆ ಬಿರುಗಾಳಿಗೆ ಸಿಲುಕಿ ರೈತ ನಲುಗುವಂತಾಗಿದೆ. ಲಕ್ಷಾಂತರ ರೂ. ಸಾಲ ಮಾಡಿ ಬಾಳೆಯನ್ನೇ ನಂಬಿ ಬಾಳ್ವೆ ಮಾಡುತ್ತಿರುವ ಗೋಪಾಳೆ ಕುಟುಂಬಕ್ಕೆ ಬರಸಿಡಿಲು ಬಡಿದಂತಾಗಿದೆ.

ಜನಪ್ರತಿನಿಧಿಗಳಾಗಲಿ, ಅಧಿಕಾರಿಗಳಾಗಲಿ ಸೌಜನ್ಯಕ್ಕಾದರೂ ಭೇಟಿ ನೀಡದಿರುವುದು ಸೋಜಿಗದ ಸಂಗತಿಯಾಗಿದೆ ಎಂದು ಮಾಜಿ ಶಾಸಕ ಸಿದ್ದು ಸವದಿ ಆರೋಪಿಸಿದ್ದಾರೆ.

ಪ್ರಭಾವಿ ಸಚಿವರಾಗಿರುವ ಕ್ಷೇತ್ರದ ಶಾಸಕರು ಸೇಡಿನ ರಾಜಕಾರಣ ಬಿಟ್ಟು ಕ್ಷೇತ್ರದಲ್ಲಿ ಹಾನಿಗೊಳಗಾದ ಕುಟುಂಬಗಳ ಪರಿಶೀಲನೆ ನಡೆಸಿ, ಆರ್ಥಿಕ ಸಹಾಯ ಒದಗಿಸಬೇಕೆಂದು ಸವದಿ ಆಗ್ರಹಿಸಿದ್ದಾರೆ. ಕೆಲ ನೇಕಾರ ಕುಟುಂಬಗಳ ಶೆಡ್‌ ಹಾಗೂ ಕಾರ್ಖಾನೆಗಳ ಚಾವಣಿಗಳು ಹಾರಿ ಹೋಗಿದ್ದು, ಅವರ ಬದುಕಿಗೆ ಸಂಜೀವಿನಿಯಾಗಿರುವ ಮಗ್ಗಗಳ ಬಂದ್‌ ಆಗಿವೆ. ಇವೆಲ್ಲವನ್ನೂ ಜವಳಿ ಇಲಾಖೆ ಪರಿಶೀಲನೆ ನಡೆಸಿ ಪರಿಹಾರ ಒದಗಿಸಬೇಕೆಂದು ಸವದಿ ಒತ್ತಾಯಿಸಿದರು.


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಮುಕೇಶ್ ಅಂಬಾನಿಯವರ ಮೊದಲ ಮನೆ ಹೇಗಿದೆ ಗೊತ್ತಾ?


ಜಮೀನಿನಲ್ಲೇ ಘೋರ ದುರಂತ: ನೀರು ತುಂಬಿದ್ದ ಗುಂಡಿಗೆ ಬಿದ್ದು ಮೂವರು ಸಾವು


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


ವಚನಗಳಿಂದ ಸಂಗೀತ ಲೋಕ ಶ್ರೀಮಂತ


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ತುಳು ತೆರೆಗೆ ಸೋನಿಯಾ ಎಂಟ್ರಿ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್



<script src="https://jsc.adskeeper.com/r/s/rssing.com.1596347.js" async> </script>