Quantcast
Channel: VijayKarnataka
Viewing all articles
Browse latest Browse all 6795

ಕಳುವಾದ ಕಳಸ ವಾಪಸ್‌ !

$
0
0

ಗುಳೇದಗುಡ್ಡ: ಪಟ್ಟಣದ ಗ್ರಾಮದೇವತೆ ಶ್ರೀ ಮೂಕೇಶ್ವರಿ ಗುಡ್ಡದ ಮೇಲೆ ಇರುವ ಶ್ರೀ ಮೂಕೇಶ್ವರಿ ದೇವಸ್ಥಾನದ ಕಳಸ ಸೋಮವಾರ ಕಳ್ಳತನವಾಗಿತ್ತು. ಆದರೆ ಬುಧವಾರ ರಾತ್ರಿ ಸಮಯದಲ್ಲಿ ಮರಳಿ ಗುಡಿಯ ಗೋಪುರದ ಮೇಲೆ ಕಳ್ಳರು ಕಳಸ ಅಳವಡಿಸಿ ಹೋಗಿದ್ದಾರೆ.

ಗುರುವಾರ ಬೆಳಗ್ಗೆ ಗುಡ್ಡದ ಮೇಲಿರುವ ದೇವಸ್ಥಾನದ ಗೋಪುರದ ಮೇಲೆ ತುರಾಯಿ ಹಾರಾಡುತ್ತಿದ್ದನ್ನು ನೋಡಿದ ಅಲ್ಲಿಯ ಕೆಲ ಜನರಿಗೆ ಕಳಸ ಕಂಡಿದೆ. ಆಗ ಕಳ್ಳತನವಾದ ಕಳಸವನ್ನು ವಾಪಸ್‌ ಕಳ್ಳರು ತಂದು ಇಟ್ಟು ಪರಾರಿಯಾಗಿದ್ದಾರೆಂದು ಜನರು ಅರಿತು ಎಲ್ಲರಿಗೂ ವಿಷಯ ತಿಳಿಸಿದ್ದಾರೆ. ಗ್ರಾಮದೇವತೆ ಶ್ರೀ ಮೂಕೇಶ್ವರಿ ದೇವಿ ಜಾತ್ರೆ ನಿಮಿತ್ತ ಉಡಿ ತುಂಬುವ ಹಿಂದಿನ ದಿನ (ಸೋಮವಾರ ಬೆಳಗ್ಗೆ) ಕಳವು ಆಗಿತ್ತು. ಅದು ಮಂಗಳವಾರ ಭಕ್ತರ ಗಮನಕ್ಕೆ ಬಂದಿದೆ. ಪರ್ವತಿ ಗ್ರಾಮದ ಶೆಡ್ಲಿ ಅವರ ಮನೆಯಿಂದ ಮೆರವಣಿಗೆ ಮೂಲಕ ಕಳಸ ತಂದು ಗೋಪುರಕ್ಕೆ ಕೂಡ್ರಿಸಲಾಗಿತ್ತು. ಮತ್ತೆ ಕಳಸ ಮರಳಿ ತಂದು ಅಳವಡಿಸಿರುವುದು ಭಕ್ತರು ನಿಟ್ಟುಸಿರುಬಿಡುವಂತೆ ಮಾಡಿದೆ.



Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಮುಕೇಶ್ ಅಂಬಾನಿಯವರ ಮೊದಲ ಮನೆ ಹೇಗಿದೆ ಗೊತ್ತಾ?


ಮನವನ್ನು ಮುದಗೊಳಿಸುತ್ತೆ ಪುಟ್ಟ ಕಂದನ ಕ್ಯೂಟ್‌ ವಿಡಿಯೋ


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


ಗುರು ರಾಘವೇಂದ್ರರ ದಿನದ ಭವಿಷ್ಯ ಹಾಗೂ ರಾಶಿ ಫಲ


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ತುಳು ತೆರೆಗೆ ಸೋನಿಯಾ ಎಂಟ್ರಿ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್