Quantcast
Channel: VijayKarnataka
Viewing all articles
Browse latest Browse all 6795

ಬಿರುಗಾಳಿಗೆ ನೆಲಸಮವಾದ ಬಾಳೆ

$
0
0

ಮಹಾಲಿಂಗಪುರ: ಸಮೀಪದ ಕೆಸರಕೊಪ್ಪ ಗ್ರಾಪಂ ವ್ಯಾಪ್ತಿಯ ಬಿಸನಾಳದಲ್ಲಿ ಬುಧವಾರ ಸಂಜೆ ವೇಗವಾಗಿ ಬೀಸಿದ ಬಿರುಗಾಳಿಗೆ ಅಂದಾಜು ಹತ್ತಾರು ಎಕರೆ ಬಾಳೆ ಬೆಳೆ ನಾಶವಾಗಿ ಲಕ್ಷಾಂತ ರೂ. ಹಾನಿ ಸಂಭವಿಸಿದೆ.

ಈರಪ್ಪ ಗಂಗಪ್ಪ ಬಂದಿ , ಸುರೇಶ ಗುರುಬಸಪ್ಪ ಬಂದಿ, ಮಹಾದೇವಪ್ಪ ಮಲ್ಲಪ್ಪ ಆಲಗೂರ ಅವರ ಜಮೀನಿನಲ್ಲಿ ಬೆಳೆಯಲಾದ ಸಮೃದ್ಧ ಬಾಳೆಗಿಡ ನೆಲಸಮವಾಗಿದ್ದು ಲಕ್ಷಾಂತರ ಹಾನಿ ಸಂಭವಿಸಿದೆ. ವಿಷಯ ತಿಳಿಯುತ್ತಿದ್ದಂತೆ ಗುರುವಾರ ಸಹಾಯಕ ತೋಟಗಾರಿಕಾ ಅಧಿಕಾರಿ ಸ್ಥಳಕ್ಕೆ ಭೇಟಿ ಮಾಡಿದ್ದಾರೆ.

ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ:

ಕಳೆದ ಬಾರಿ ಬಾಳೆಗೆ ಉತ್ತಮ ಬೆಲೆ ಇರಲಿಲ್ಲ. ಈ ಸಲ ಭರವಸೆಯಿಂದ ಬರದಲ್ಲೂ ನೀರಿನ ವ್ಯವಸ್ಥೆ ಮಾಡಿಕೊಂಡು ಎಕರೆಗೆ ಅಂದಾಜು 80 ಸಾವಿರ ರೂ ಖರ್ಚು ಮಾಡಿ ಬಾಳೆ ಬೆಳೆಸಿದ್ದೆವು. ಬಾಳೆ ಗೊನೆಗಟ್ಟಿ ಕಟಾವಿಗೆ ಬಂದಿತ್ತು. ಮಾರುಕಟ್ಟೆಯಲ್ಲೂ ಉತ್ತಮ ಬೇಡಿಕೆ ಬೆಲೆ ಇತ್ತು. ಇನ್ನೇನು ಒಳ್ಳೆಯ ಲಾಭ ಗಳಿಸಬಹುದು ಎಂಬ ಲೆಕ್ಕಾಚಾರದಲ್ಲಿರುವಾಗಲೇ ಬಿರುಗಾಳಿ ಬೀಸಿ ಬಾಳೆಗಿಡ ನಾಶವಾಯಿತು. ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎನ್ನುತ್ತಾರೆ ನೊಂದ ರೈತರಾದ ಈರಪ್ಪ, ಸುರೇಶ ಮತ್ತು ಮಹಾದೇವಪ್ಪ.

------

ಕೆಸರಕೊಪ್ಪ, ಬಿಸನಾಳ ಭಾಗದಲ್ಲಿ ಬೆಳೆ ಪರಿಶೀಲನೆ ಮಾಡಲಾಗಿ ಅಂದಾಜು 20 ಎಕರೆಯಷ್ಟು ಬಾಳೆ ಬೆಳೆ ನಾಶವಾಗಿ ಅಪಾರ ನಷ್ಟವುಂಟಾಗಿದೆ. ಸೂಕ್ತ ಪರಿಹಾರಕ್ಕಾಗಿ ಕಂದಾಯ ಇಲಾಖೆಗೆ ವರದಿ ಕಳಿಸುತ್ತೇನೆ.

ಸಹಾಯಕ ತೋಟಗಾರಿಕಾ ಅಧಿಕಾರಿ ಪ್ರವೀಣ ಪಾಟೀಲ.


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಮುಕೇಶ್ ಅಂಬಾನಿಯವರ ಮೊದಲ ಮನೆ ಹೇಗಿದೆ ಗೊತ್ತಾ?


ಜಮೀನಿನಲ್ಲೇ ಘೋರ ದುರಂತ: ನೀರು ತುಂಬಿದ್ದ ಗುಂಡಿಗೆ ಬಿದ್ದು ಮೂವರು ಸಾವು


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


ವಚನಗಳಿಂದ ಸಂಗೀತ ಲೋಕ ಶ್ರೀಮಂತ


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ತುಳು ತೆರೆಗೆ ಸೋನಿಯಾ ಎಂಟ್ರಿ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್



<script src="https://jsc.adskeeper.com/r/s/rssing.com.1596347.js" async> </script>