Quantcast
Channel: VijayKarnataka
Viewing all articles
Browse latest Browse all 6795

ಪ್ರಶಸ್ತಿ ಆಯ್ಕೆಗೆ ಅಪಸ್ವರ

$
0
0

ಕರ್ನಾಟಕ ರಾಜ್ಯ ಸರಕಾರದಿಂದ ನೀಡಲಾಗುವ 2015ನೇ ಸಾಲಿನ ಚಲನಚಿತ್ರ ಪ್ರಶಸ್ತಿಗಳು ಪ್ರಕಟಗೊಂಡಿವೆ. ಪ್ರತಿ ವರ್ಷದಂತೆ ಈ ವರ್ಷ ಆಯ್ಕೆ ಬಗ್ಗೆ ಹೆಚ್ಚಿನ ಆಕ್ಷೇಪಣೆ ಕೇಳಿಬರದಿದ್ದರೂ, ಬೇರೊಂದು ಕಾರಣದಿಂದಾಗಿ ವಿವಾದ ಸೃಷ್ಟಿಯಾಗಿದೆ. ಸ್ಪರ್ಧಿಸಲು ಇರಬೇಕಾದ ಅರ್ಹತೆಗೆ ಸಂಬಂಧಿಸಿದ ನಿಯಮಗಳ ಉಲ್ಲಂಘನೆ ಆಗಿದೆ ಎಂದಿರುವ ನಿರ್ದೇಶಕ ಲಿಂಗದೇವರು ಕೋರ್ಟ್‌ ಮೆಟ್ಟಿಲೇರಿದ್ದಾರೆ.

- ಪದ್ಮಾ ಶಿವಮೊಗ್ಗ

ನಿರೀಕ್ಷೆಯಂತೆ 2015ನೇ ಸಾಲಿನ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳ ಆಯ್ಕೆಗೆ ವಿರೋಧ ವ್ಯಕ್ತವಾಗಿದೆ. ಈ ಆಯ್ಕೆಯನ್ನು ಪ್ರಶ್ನಿಸಿ ಕೋರ್ಟ್‌ ಮೆಟ್ಟಿಲು ಹತ್ತಲು ಹೊರಟವರು ನಿರ್ದೇಶಕ ಲಿಂಗದೇವರು.

ಈ ಮೊದಲು ಆಯ್ಕೆ ಪ್ರಕ್ರಿಯೆ ಸಂದರ್ಭದಲ್ಲಿಯೇ ನಿರ್ದೇಶಕ ಲಿಂಗದೇವರು ಟೆಕ್ನಿಕಲ್‌ ಎರರ್‌ ಎತ್ತಿಹಿಡಿದು ಪ್ರಶ್ನಿಸಿದ್ದರು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಇದನ್ನು ಪರಿಗಣಿಸಿಲ್ಲ ಎಂದಿರುವ ಅವರು ಕೋರ್ಟ್‌ನಲ್ಲಿ ಪ್ರಶ್ನಿಸಲು ಮುಂದಾಗಿದ್ದಾರೆ.

ನಿಯಮಾವಳಿಯ ಪ್ರಕಾರ, ರಾಜ್ಯ ಪ್ರಶಸ್ತಿಗೆ ಸಲ್ಲಿಸುವ ಚಲನಚಿತ್ರಗಳು ಡಿಜಿಬೀಟಾ ಫಾಮ್ರ್ಯಾಟ್‌ನಲ್ಲಿರಬೇಕು. ಆದರೆ, ಬ್ಲ್ಯೂರೇ ಫಾಮ್ರ್ಯಾಟ್‌ನಲ್ಲಿ ಸಲ್ಲಿಸಿರುವ ಚಿತ್ರಗಳೂ ಆಯ್ಕೆ ಪಟ್ಟಿಯಲ್ಲಿದ್ದವು. ಹೀಗಾಗಿ ತಾಂತ್ರಿಕ ಲೋಪ ಉಂಟಾಗಿದೆ ಎಂದು ಆಕ್ಷೇಪವನ್ನೆತ್ತಿದ್ದಾರೆ ಲಿಂಗದೇವರು. ಸಿನಿಮಾ ಚಿತ್ರೀಕರಣದಲ್ಲಿ ಡಿಜಿಟಲ್‌ ತಂತ್ರಜ್ಞಾನ ಬಂದಿರುವುದರಿಂದ ನಿಖರವಾಗಿ ಒಂದು ಫಾಮ್ರ್ಯಾಟ್‌ನಲ್ಲೇ ಇರುವುದು ನ್ಯಾಯ ಎನ್ನುತ್ತಾರೆ ಅವರು.

ಸ್ಪರ್ಧೆಗೆ ಬಂದ ಚಿತ್ರಗಳ ವಿವರವನ್ನು ಕೋರಿ ಲಿಂಗದೇವರು ವಾರ್ತಾ ಇಲಾಖೆಗೆ ಆರ್‌ಟಿಐ ಸಲ್ಲಿಸಿದ್ದರು. ಆದರೆ, ಅವರಿಗೆ ಇಲ್ಲಿಯವರೆಗೆ ವಿವರ ಸಿಕ್ಕಿಲ್ಲ.

'ಮೋಷನ್‌ ಪಿಕ್ಚರ್‌ಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಒಂದು ಮಾನದಂಡ ನಿರ್ಧರಿಸಲಾಗಿದೆ. ಇದರ ಪ್ರಕಾರ ನಡೆಯಬೇಕು ಎನ್ನುವುದಷ್ಟೇ ನಮ್ಮ ಒತ್ತಾಯ. ಸಾಮಾನ್ಯವಾಗಿ ಎಲ್ಲರೂ ನಿಗದಿತ ಫಾಮ್ರ್ಯಾಟ್‌ನಲ್ಲೇ ಕೊಡಲು ಸಿದ್ಧರಿರುತ್ತಾರೆ. ಎಲ್ಲೋ ಕೆಲವರು ಲೋ ಕ್ವಾಲಿಟಿಯಲ್ಲಿ ನೀಡಿ ಸಬ್ಸಿಡಿ ಮತ್ತಿತರ ಸವಲತ್ತುಗಳನ್ನು ಪಡೆಯಲು ಪ್ರಯತ್ನಿಸುತ್ತಾರೆ. ಇದಕ್ಕೆ ಅವಕಾಶ ಕೊಟ್ಟರೆ, ಲಾಬಿ ನಡೆಯುವ ಸಾಧ್ಯತೆಗಳಿವೆ' ಎನ್ನುತ್ತಾರೆ ಅವರು.

'ಜೀವಮಾನ ಸಾಧನೆಗೆ ನೀಡುವ ವಿಶೇಷ ಪ್ರಶಸ್ತಿಗಳಿಗೆ ಪ್ರತ್ಯೇಕ ಸಮಿತಿ ನೇಮಿಸಬೇಕು ಎಂಬ ನಮ್ಮ ಒತ್ತಾಯಕ್ಕೆ ಮನ್ನಣೆ ಸಿಕ್ಕಿದೆ. ಇದು ಸಮಾಧಾನ ತಂದಿದೆ' ಎಂದಿದ್ದಾರೆ ಈ ನಿರ್ದೇಶಕ. ಒಟ್ಟಾರೆ, ಇದು ಬಗೆಹರಿಯುವವರೆಗೆ ಪ್ರಶಸ್ತಿ ಪ್ರದಾನ ಮಾಡುವಂತಿಲ್ಲ. ಪ್ರಶಸ್ತಿ ಪಡೆದವರಿಗೂ ಅತಂತ್ರ ಮನಸ್ಥಿತಿ ಉದ್ಭವಿಸಿದೆ.

ಪ್ರತ್ಯೇಕ ಸಮಿತಿ

ರಾಜ್ಯ ಪ್ರಶಸ್ತಿ ನೀಡುವುದರ ಜತೆ ಚಿತ್ರರಂಗದಲ್ಲಿ ಜೀವಮಾನದ ಸಾಧನೆ ಮಾಡಿದವರಿಗೆ ನೀಡುವ ರಾಜ್‌ಕುಮಾರ್‌ ಪ್ರಶಸ್ತಿ, ವಿಷ್ಣುವರ್ಧನ್‌ ಪ್ರಶಸ್ತಿ ಮತ್ತು ಪುಟ್ಟಣ್ಣ ಕಣಗಾಲ್‌ ಪ್ರಶಸ್ತಿಗಳಿಗೆ ಆರ್ಹರನ್ನು ಆಯ್ಕೆ ಮಾಡಲು ಪ್ರತ್ಯೇಕ ಸಮಿತಿ ನೇಮಿಸಬೇಕು ಎಂದು ಲಿಂಗದೇವರು ಆಗ್ರಹಿಸಿದ್ದು ಲವಲವಿಕೆಯಲ್ಲಿ ವರದಿಯಾಗಿತ್ತು. ಅದರಂತೆ 2015ನೇ ಸಾಲಿನ ಈ ಪ್ರಶಸ್ತಿಗಳ ಆಯ್ಕೆಗೆ ಪ್ರತ್ಯೇಕ ಸಮಿತಿ ನೇಮಿಸಲಾಗಿದೆ. ಇದರಲ್ಲಿ ಹಂಸಲೇಖ, ಪತ್ರಕರ್ತ ಗಂಗಾಧರ ಮೊದಲಿಯಾರ್‌ ಮತ್ತು ನಿರ್ದೇಶಕ ದೊರೆ ಭಗವಾನ್‌ ಇದ್ದಾರೆ. ಈ ಸಮಿತಿ ಇನ್ನೂ ಅರ್ಹರನ್ನು ಆಯ್ಕೆ ಮಾಡಬೇಕಿರುವುದರಿಂದ ಈ ಬಾರಿ ಜೀವಮಾನ ಸಾಧಕರ ಪ್ರಶಸ್ತಿಗಳು ಪ್ರಕಟಗೊಂಡಿಲ್ಲ.


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಬಿಗ್‌ ನ್ಯೂಸ್: ದ್ವಿತೀಯ ಪಿಯು ಪರೀಕ್ಷೆ ಫಲಿತಾಂಶ ಪ್ರಕಟ -‌ ಈ ಬಾರಿಯೂ...


 ಕೌಟುಂಬಿಕ ಕಲಹ ಹಿನ್ನೆಲೆ; ಬುದ್ದಿವಾದ ಹೇಳಿದ ತಂಗಿಯನ್ನೇ ಕೊಂದ ಅಣ್ಣ…


ಗುರು ರಾಘವೇಂದ್ರರ ದಿನದ ಭವಿಷ್ಯ ಹಾಗೂ ರಾಶಿ ಫಲ


‘ಒಡಕು ಮೂಡಿಸಿದ ಸಿದ್ಧರಾಮಯ್ಯ’


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ತುಳು ತೆರೆಗೆ ಸೋನಿಯಾ ಎಂಟ್ರಿ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್



<script src="https://jsc.adskeeper.com/r/s/rssing.com.1596347.js" async> </script>