Quantcast
Channel: VijayKarnataka
Viewing all articles
Browse latest Browse all 6795

ಜೈಲು ಹಕ್ಕಿಯ ಅಸ್ವಿತ್ವದ ಹೋರಾಟ

$
0
0

ಕೃಷ್ಣನ್‌ ಮ್ಯಾರೇಜ್‌ ಸ್ಟೋರಿ ಮೂಲಕ ಭರವಸೆ ಮೂಡಿಸಿದ್ದ ನಿರ್ದೇಶಕ ನೂತನ್‌ ಉಮೇಶ್‌, ಈ ಬಾರಿ ಥ್ರಿಲ್ಲರ್‌ ಮರ್ಡರ್‌ ಮಿಸ್ಟರಿ ಚಿತ್ರಕ್ಕೆ ಕೈಹಾಕಿದ್ದಾರೆ. ಇವರ ನಿರ್ದೇಶನದ ಅಸ್ತಿತ್ವ ಸಿನಿಮಾ ಹಲವು ಕಾರಣಗಳಿಂದಾಗಿ ನಿರೀಕ್ಷೆ ಮೂಡಿಸಿದೆ.

- ಶರಣು ಹುಲ್ಲೂರು

ಅಸ್ತಿತ್ವದ ಹೊಸ ಪ್ರಶ್ನೆಯನ್ನು ಎತ್ತುವ ಮೂಲಕ ಕುತೂಹಲ ಮೂಡಿಸಿದ್ದಾರೆ ನಿರ್ದೇಶಕ ನೂತನ್‌ ಉಮೇಶ್‌. ಇದು ಯಾವುದರ ಅಸ್ತಿತ್ವ, ಯಾರ ಅಸ್ತಿತ್ವ ಎಂಬ ಪ್ರಶ್ನೆಗೆ ಅವರಲ್ಲಿ ಸ್ಪಷ್ಟವಾದ ಉತ್ತರವಿದೆ. ಹೀಗಾಗಿ ಇವರ ಅಸ್ತಿತ್ವ ಚಿತ್ರ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದೆ.

ಇದು ಥ್ರಿಲ್ಲರ್‌ ಮರ್ಡರ್‌ ಮಿಸ್ಟರಿ ಸಿನಿಮಾ. ಹೀಗಾಗಿ ಕ್ಯಾಮೆರಾ, ಮ್ಯೂಸಿಕ್‌ ಮತ್ತು ಸ್ಕ್ರೀನ್‌ ಪ್ಲೇಗೆ ತುಂಬಾ ಮಹತ್ವ ಕೊಟ್ಟಿದ್ದಾರೆ. ಒಂದೊಂದು ಪಾತ್ರಕ್ಕೂ ಇಂಟರೆಸ್ಟಿಂಗ್‌ ಹಿನ್ನೆಲೆ ಇದೆ. ಇದು ಈ ನಿರ್ದೇಶಕರ ಎರಡನೇ ಚಿತ್ರ. 'ಕೃಷ್ಣನ್‌ ಮ್ಯಾರೇಜ್‌ ಸ್ಟೋರಿ' ಮೂಲಕ ಚಿತ್ರರಂಗಕ್ಕೆ ಪರಿಚಯವಾದ ಉಮೇಶ್‌, ಮೊದಲ ಚಿತ್ರದಲ್ಲೇ ಗೆಲುವು ಸಾಧಿಸಿದ್ದರು. ಅದುವೇ ಇವರನ್ನು ಮತ್ತೊಂದು ಚಿತ್ರಕ್ಕೆ ಕರೆದೊಯ್ದಿದೆ.

ಅಸ್ತಿತ್ವ ಅಂದಾಕ್ಷಣ ಇದು ಕಲಾತ್ಮಕ ಸಿನಿಮಾನಾ ಅನ್ನುವ ಅನುಮಾನ ಮೂಡುತ್ತದೆ. ಆದರೆ, ಇದು ಪಕ್ಕಾ ಕಮರ್ಷಿಯಲ್‌ ಚಿತ್ರ. ಇಲ್ಲಿನ ಪ್ರತಿ ಪಾತ್ರಗಳೂ ತಮ್ಮ ಅಸ್ತಿತ್ವಕ್ಕಾಗಿ ಹೋರಾಟ ಮಾಡುವುದರಿಂದ ಇಂಥದ್ದೊಂದು ಟೈಟಲ್‌ ಆಯ್ಕೆ ಮಾಡಿಕೊಂಡಿದ್ದಾರಂತೆ.

ಸಿನಿಮಾದ ಸ್ಟೋರಿಯೇ ವಿಭಿನ್ನ. ನಾಯಕನ ತುಮುಲ, ಬದುಕಿಗಾಗಿ ಆತನ ಹೋರಾಟ ಮತ್ತು ತನ್ನ ಅಸ್ತಿತ್ವ ಕಂಡುಕೊಳ್ಳಲು ಆತ ಏನೆಲ್ಲ ಮಾಡುತ್ತಾನೆ ಅನ್ನುವ ಕತೆ ಇಲ್ಲಿದೆ. ನಾಯಕನ ಹೋರಾಟ ಇಲ್ಲಿ ಎಲ್ಲರಿಗಿಂತ ಭಿನ್ನ.

ಈ ಕುರಿತು ನಿರ್ದೇಶಕರನ್ನೇ ಕೇಳಿದಾಗ, 'ಇದು ಪಕ್ಕಾ ಸ್ಕ್ರೀನ್‌ ಪ್ಲೇ ಚಿತ್ರ. ಥ್ರಿಲ್ಲರ್‌ ಅನಿಸಿದರೂ, ಎಮೋಷನ್‌ ತುಂಬಾ ಇದೆ. ಇಂಟರ್‌ಲಿಂಕ್‌ ದೃಶ್ಯಗಳಿಂದಾಗಿ ಚಿತ್ರಕತೆ ವಿಭಿನ್ನ ಅನಿಸುತ್ತದೆ. ಸಿಚ್ಯುವೇಷನ್‌ಗೆ ತಕ್ಕಂತೆ ಹಾಡುಗಳು ಇರುವುದರಿಂದ, ಸಂಗೀತವೂ ಕೂಡ ಕತೆ ಹೇಳುತ್ತದೆ. ದೃಶ್ಯ ಯಾವುದೇ ಆಗಿರಲಿ, ಅದು ಎಲ್ಲಿಯೂ ಸಿನಿಮಾಗಾಗಿ ತೆಗೆದದ್ದು ಅಂತ ಅನಿಸುವುದಿಲ್ಲ. ನಮ್ಮ ಕಣ್ಮುಂದೆಯೇ ಆ ಘಟನೆ ನಡೆಯುತ್ತಿದೆ ಅನ್ನುವ ಫೀಲ್‌ ಕೊಡುತ್ತದೆ. ಹೀಗಾಗಿ ಸಿನಿಮಾದ ಬಗ್ಗೆ ಭರವಸೆ ಇದೆ' ಅಂತಾರೆ.

ಚಿತ್ರಕ್ಕೆ ಯುವರಾಜ್‌ ನಾಯಕ. ಸಾಫ್ಟ್‌ವೇರ್‌ ಉದ್ಯೋಗಿ ಆಗಿರುವ ಇವರು, ಇದೇ ಮೊದಲ ಬಾರಿಗೆ ಕ್ಯಾಮೆರಾ ಮುಂದೆ ನಿಂತಿದ್ದಾರೆ. ಚೊಚ್ಚಲು ಚಿತ್ರದಲ್ಲೇ ಮೂರು ಶೇಡ್‌ ಪಾತ್ರ ನಿರ್ವಹಿಸಿದ್ದು ವಿಶೇಷ. ಸಿನಿಮಾ ದ್ವಿತೀಯಾರ್ಧದಲ್ಲಿ ಮಧುಸೂದನ್‌ ನಟಿಸಿದ್ದು, ಇವರು ಶ್ರೀಮಂತ ಹುಡುಗನ ಪಾತ್ರ ಮಾಡಿದ್ದಾರೆ. ಪ್ರಜ್ಜು ಪೂವಯ್ಯ ನಾಯಕಿ. ಇದು ಬಬ್ಲಿ ರೀತಿಯ ಪಾತ್ರವಾದರೂ,ಆಕ್ಟಿಂಗ್‌ಗೆ ತುಂಬಾನೇ ಸ್ಕೋಪ್‌ ಇದೆಯಂತೆ.

ಸೋನು ಗೌಡ, ದುನಿಯಾ ರಶ್ಮಿ, ಎಡಕಲ್ಲು ಗುಡ್ಡದ ಖ್ಯಾತಿಯ ಚಂದ್ರಶೇಖರ್‌. ರಾಜೇಶ್‌ ನಟರಂಗ, ಸಿದ್ಲಿಂಗು ಶ್ರೀಧರ್‌ ಸೇರಿದಂತೆ ಅನೇಕ ಕಲಾವಿದರು ತಾರಾಗಣದಲ್ಲಿದ್ದಾರೆ.

ಮೊದಲ ಬಾರಿಗೆ ಇಂಥ ಪಾತ್ರ ಪೋಷಿಸಿದ್ದೇನೆ. ಬಜಾರಿ ರೀತಿಯ ಕ್ಯಾರೆಕ್ಟರ್‌ ಆಗಿದ್ದರೂ, ಆಕೆ ಸಿನ್ಸಿಯರ್‌ ಹುಡುಗಿ. ನಿರ್ದೇಶಕರು ಮೊದಲೇ ತರಬೇತಿ ನೀಡಿದ್ದರು. ಹೀಗಾಗಿ ಸಲೀಸಾಗಿ ಪಾತ್ರದಲ್ಲಿ ಇಳಿಯೋಕೆ ಸಹಾಯ ಆಯಿತು. ಈ ಸಿನಿಮಾ ನನಗೊಂದು ಬ್ರೇಕ್‌ ನೀಡುತ್ತೆ ಎನ್ನುತ್ತಾರೆ ನಟಿ ಪ್ರಜ್ಜು ಪೂವಯ್ಯ.

ಕತೆ ಫ್ರೆಶ್‌ ಆಗಿದೆ. ಈ ಸ್ಟೋರಿಗೆ ಹೊಸ ಹುಡುಗರೇ ಬೇಕಿತ್ತು. ಹೀಗಾಗಿ ಅಸ್ತಿತ್ವವವನ್ನು ಪ್ರತಿಭಾವಂತ ಹುಡುಗರ ಜತೆ ಕಟ್ಟಿದ್ದೇನೆ. ಯಾವ ಪಾತ್ರವೂ ಕೂಡ ಸಿಲ್ಲಿ ಅನಿಸುವುದಿಲ್ಲ. ಪ್ರತಿ ಪಾತ್ರ ಬಂದಾಗಲೂ ಕತೆಗೆ ಹೊಸ ಟ್ವಿಸ್ಟ್‌ ಸಿಗುತ್ತದೆ. ಇದೇ ಸಿನಿಮಾದ ಪ್ಲಸ್‌ ಪಾಯಿಂಟ್‌ ಎನ್ನುತ್ತಾರೆ ನಿರ್ದೇಶಕ ನೂತನ ಉಮೇಶ್‌.

ನಾಯಕ ಚಿಕ್ಕ ವಯಸ್ಸಿನಲ್ಲೇ ಜೈಲಿಗೆ ಹೋಗಿಬರುತ್ತಾನೆ. ಆಚೆ ಬಂದ ನಂತರ ತನ್ನ ಅಸ್ತಿತ್ವಕ್ಕಾಗಿ ಯಾವ ದಾರಿ ಹಿಡಿಯುತ್ತಾನೆ ಅನ್ನುವ ಸ್ಟೋರಿ ಇಲ್ಲಿದೆ. ಈ ಪಯಣದಲ್ಲಿ ಅವನು ಅನುಭವಿಸುವ ಯಾತನೆ ವಿಭಿನ್ನವಾಗಿದೆ. ನೋಡುಗರ ಹೃದಯವನ್ನು ಇದು ತಟ್ಟುತ್ತದೆ ಎನ್ನುತ್ತಾರೆ ನಾಯಕ ಯುವರಾಜ್‌.


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ಅಪಘಾತ ಗಾಯಾಳುಗಳಿಗೆ ನೆರವು ನೀಡಿದವರಿಗೆ ಜೀವರಕ್ಷಕ ಪ್ರಶಸ್ತಿ


ಜಮೀನಿನಲ್ಲೇ ಘೋರ ದುರಂತ: ನೀರು ತುಂಬಿದ್ದ ಗುಂಡಿಗೆ ಬಿದ್ದು ಮೂವರು ಸಾವು


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


ವಚನಗಳಿಂದ ಸಂಗೀತ ಲೋಕ ಶ್ರೀಮಂತ


ಶಿವಸೇನೆ ಬಿಗಿಪಟ್ಟು: ದೇಶ ಗೆದ್ದ ಬಿಜೆಪಿ ವಿಲವಿಲ


ಶುಭ ಫಲಕ್ಕಾಗಿ ಮನೆಯಲ್ಲಿ ಗಾಳಿ ಗಂಟೆ ಹಾಕುವ ಮುನ್ನ ಈ ವಿಚಾರ ತಿಳಿಯಿರಿ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ತುಳು ತೆರೆಗೆ ಸೋನಿಯಾ ಎಂಟ್ರಿ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್



<script src="https://jsc.adskeeper.com/r/s/rssing.com.1596347.js" async> </script>