ರಾಯ್ಪುರ: ಛತ್ತೀಸ್ಗಢದ ಬಲರಾಮಪುರದಲ್ಲಿರುವ ರಾಮಾನುಜನ್ ಆಸ್ಪತ್ರೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ದರ್ಪದಿಂದ ವರ್ತಿಸಿದ ಐಎಎಸ್ ಅಧಿಕಾರಿ ಜಗದೀಶ್ ಸೋನಕರ್ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.
ರೋಗಿಗಳು ಮತ್ತು ಅವರ ಸಂಬಂಧಿಕರೊಂದಿಗೆ ಮಾತನಾಡುವಾಗ ಸೋನಕರ್ ಅವರ ರೋಗಿಗಳು ಮಲಗಿದ್ದ ಮಂಚದ ಮೇಲೆ ಶೂ ಹಾಕಿದ್ದ ಕಾಲು ಇರಿಸಿ, ಅಧಿಕಾರ ಮದದಿಂದ ವರ್ತಿಸಿದ್ದರು. ಈ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ಸಿಎಂ ರಮಣ್ ಸಿಂಗ್ ಅವರು ಸೋನಕರ್ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಆದೇಶಿಸಿದ್ದಾರೆ.
ಅಷ್ಟೇ ಅಲ್ಲ ಎಲ್ಲ ಹೊಸ ಅಧಿಕಾರಿಗಳಿಗೆ ಸಾಮಾಜಿಕ ನಡತೆ ಹೇಗಿರಬೇಕೆಂಬ ತರಬೇತಿ ನೀಡುವಂತೆ ಆಡಳಿತ ವಿಭಾಗಕ್ಕೆ ಸೂಚನೆ ನೀಡಿದ್ದಾರೆ.
↧
ರೋಗಿಗಳೊಂದಿಗೆ ದರ್ಪದಿಂದ ವರ್ತಿಸಿದ ಅಧಿಕಾರಿ ಅಮಾನತು
↧