*ಭಾರಿ ಮಳೆ, ಬಿರುಗಾಳಿ ಉಜ್ಜಯಿನಿ: ಮಧ್ಯ ಪ್ರದೇಶದ ಉಜ್ಜಯಿನಿಯಲ್ಲಿ ಏಪ್ರಿಲ್ 22ರಿಂದ ಆರಂಭವಾಗಿರುವ ಸಿಂಹಾಸ್ಥ ಕುಂಭಮೇಳದ ಸಂದರ್ಭದಲ್ಲಿ ಗುರುವಾರ ಸಂಜೆ ಭಾರಿ ಬಿರುಗಾಳಿ, ಮಳೆ ಮತ್ತು ಸಿಡಿಲಿನಿಂದ ಯಾತ್ರಿಗಳ ನೆರೆದಿದ್ದ ತಾತ್ಕಾಲಿಕ ಟೆಂಟ್ಗಳು ನೆಲಸಮಗೊಂಡ ಪರಿಣಾಮ ಆರು ಜನ ಮೃತಪಟ್ಟಿದ್ದು, ಇತರೆ 40 ಮಂದಿ ಗಾಯಗೊಂಡಿದ್ದಾರೆ. ಈ ವಿಷಯವನ್ನು ಉಜ್ಜಯಿನಿ ಜಿಲ್ಲಾಧಿಕಾರಿ ಕವೀಂದ್ರ ಕಿಯಾವತ್ ದೃಢಪಡಿಸಿದ್ದಾರೆ. ಉಜ್ಜಯಿನಿಯಲ್ಲಿ ನಿರ್ಮಿಸಲಾಗಿದ್ದ ತಾತ್ಕಾಲಿಕ ಆಶ್ರಯ ತಾಣಗಳ ಪೈಕಿ ಮೂರನೇ ಒಂದರಷ್ಟು ಟೆಂಟ್ಗಳು ತೀವ್ರ ಹಾನಿಗೊಂಡಿವೆ. ಕುಂಭಮೇಳ ನಡೆಯುತ್ತಿರುವ ಇಡೀ ಪ್ರದೇಶದಲ್ಲಿ ವಿದ್ಯುತ್ ಸಂಪರ್ಕ ಕಡಿದುಹಾಕಿ, ರಕ್ಷಣಾ ಕಾರ್ಯಾಚರಣೆ ನಡೆಸಲಾಗಿದ್ದು, ಟೆಂಟ್ಗಳಡಿ ಸಿಲುಕಿದ್ದ ಭಕ್ತರನ್ನು ರಕ್ಷಿಸಲಾಗಿದೆ. ಟೆಂಟ್ಗಳು ಹರಿದು ಬಿದ್ದಿರುವ ಹಾಗೂ ಇಡೀ ಪ್ರದೇಶ ಜಲಾವೃತವಾಗಿರುವ ದೃಶ್ಯ ಎಲ್ಲೆಡೆ ಕಾಣುತ್ತಿದೆ. ಏಪ್ರಿಲ್ 22ರಿಂದ ಆರಂಭವಾಗಿರುವ ಕುಂಭಮೇಳ ಒಂದು ತಿಂಗಳ ಕಾಲ ನಡೆಯಲಿದೆ. ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಸುಮಾರು 5 ಕೋಟಿ ಭಕ್ತರು ಪಾಲ್ಗೊಳ್ಳುವ ನಿರೀಕ್ಷೆ ಇದೆ.
↧
ಕುಂಭಮೇಳದಲ್ಲಿ ಟೆಂಟ್ ಕುಸಿದು 7 ಸಾವು
↧