Quantcast
Channel: VijayKarnataka
Viewing all articles
Browse latest Browse all 6795

ಫ್ರೀ ಕ್ವಾರ್ಟರ್‌ ಫೈನಲ್ಸ್‌ಗೆ ಪಳಂಗಂಡ, ಕೂತಂಡ

$
0
0

ಶಾಂತೆಯಂಡ ಕಪ್‌ ಹಾಕಿ ಹಬ್ಬ

- ಐತಿಚಂಡ ರಮೇಶ್‌ ಉತ್ತಪ್ಪ ಮಡಿಕೇರಿ

ಕೊಡವ ಹಾಕಿ ಹಬ್ಬ ಶಾಂತೆಯಂಡ ಕಪ್‌ನ ಫ್ರೀಕ್ವಾರ್ಟ್‌ರ್‌ ಫೈನಲ್ಸ್‌ಗೆ ಚಾಂಪಿಯನ್‌ ಪಳಂಗಂಡ, ಮಾಜಿ ಚಾಂಪಿಯನ್ನರಾದ ಕೂತಂಡ, ಕಲಿಯಂಡ, ಮಂಡೇಪಂಡ ತಂಡಗಳು ಪ್ರವೇಶಿಸಿವೆ.

ಹಾಲಿ ಚಾಂಪಿಯನ್ನರಾದ ಪಳಂಗಂಡ ತಂಡ 4-0 ಗೋಲುಗಳಿಂದ ಉದ್ದಪಂಡ ತಂಡವನ್ನು ಮಣಿಸಿತು. ಪಂದ್ಯ ಏಕಪಕ್ಷೀಯವಾಗಿತ್ತು. ನಿರಂತರ ದಾಳಿ ನಡೆಸಿದ ಪಳಂಗಂಡ ತಂಡಕ್ಕೆ ರಾಜ್ಯ ಆಟಗಾರ ಅಜಯ್‌ ಅಯ್ಯಪ್ಪ ಮೊದಲ ಮುನ್ನಡೆ ತಂದುಕೊಟ್ಟರು. ನಂತರ ಕಾಳಪ್ಪ ಎರಡು ಗೋಲು ಬಾರಿಸಿದರೆ, ಮುತ್ತಣ್ಣ ನಾಲ್ಕನೇ ಗೋಲು ಬಾರಿಸಿ ಎದುರಾಳಿಗಳಿಗೆ ಚೇತರಿಸಿಕೊಳ್ಳಲಾಗದ ಪೆಟ್ಟು ನೀಡಿದರು.

ಅತ್ಯಂತ ರೋಚಕತೆಯಿಂದ ನಡೆದ ದಿನದ ಪ್ರಮುಖ ಪಂದ್ಯದಲ್ಲಿ ಕೂತಂಡ ತಂಡ ಏಕೈಕ ಗೋಲಿನಿಂದ ಮೇಕೇರಿರ ತಂಡವನ್ನು ಮಣಿಸಿತು. ಅಂತಾರಾಷ್ಟ್ರೀಯ ಆಟಗಾರ ನಿತಿನ್‌ ತಿಮ್ಮಯ್ಯ ನೇತೃತ್ವದ ಮೇಕೇರಿರ ತಂಡ ಪ್ರೇಕ್ಷಕರ ಬೆಂಬಲದೊಂದಿಗೆ ಅತ್ಯುತ್ತಮ ಆಟ ಪ್ರದರ್ಶಿಸಿದರೂ ಗೋಲು ಗಳಿಸಲು ಸಾಧ್ಯವಾಗಲಿಲ್ಲ. ಅತ್ಯುತ್ತಮ ಪಾಸ್‌ನೊಂದಿಗೆ ಗಮನ ಸೆಳೆದ ಕೂತಂಡ ತಂಡದ ಪರ ಸಂತೋಷ್‌ ವಿಜಯದ ಗೋಲು ಬಾರಿಸಿದರು. ನಿತಿನ್‌ ತಿಮ್ಮಯ್ಯ ಒಬ್ಬರೇ ಚೆಂಡನ್ನು ಮೈದಾನದ ಒಂದು ಮೂಲೆಯಿಂದ ಮತ್ತೊಂದು ಮೂಲೆಗೆ ಕೊಂಡೊಯ್ದು ಗೋಲು ಹೊಡೆಯಲು ನಡೆಸಿದ ಯತ್ನ ಸಫಲವಾಗಲಿಲ್ಲ.

ಕಲಿಯಂಡ ತಂಡ 4-0 ಗೋಲುಗಳಿಂದ ಮಚ್ಚಾರಂಡ ತಂಡದ ವಿರುದ್ಧ ಜಯ ಸಾಧಿಸಿತು. ಈ ಪಂದ್ಯ ಕೂಡ ಏಕಪಕ್ಷೀಯವಾಗಿತ್ತು. ಕಲಿಯಂಡ ಕಾರ್ಯಪ್ಪ, ಸಂಪನ್‌, ದೇವಯ್ಯ ಹಾಗೂ ಬಿದ್ದಪ್ಪ ಒಂದೊಂದು ಗೋಲು ಬಾರಿಸಿದರು.

ಸಮಬಲದಿಂದ ಕೂಡಿದ ಪಂದ್ಯದಲ್ಲಿ ಆಪ್ಪಚ್ಚಿರ ತಂಡ ಟೈ ಬ್ರೇಕರ್‌ನಲ್ಲಿ 6-4 ಗೋಲುಗಳಿಂದ ಶಿವಚಾಳಿಯಂಡ ತಂಡವನ್ನು ಮಣಿಸಿತು. ನಿಗದಿತ ಅವಧಿಯಲ್ಲಿ 2-2 ಗೋಲುಗಳಿಂದ ಸಮಸ್ಥಿತಿಯಲ್ಲಿತ್ತು. ಆಪ್ಪಚ್ಚಿರ ಆಶಿಕ್‌, ಜಾಶೀನ್‌ ಹಾಗೂ ಶಿವಚಾಳಿಯಂಡ ವಿಜು, ಪ್ರಸಾದ್‌ ಗೋಲು ಬಾರಿಸಿದರು.

ಕಳ್ಳಿಚಂಡ ತಂಡ 4-1 ಗೋಲುಗಳಿಂದ ಕಡೇಮಾಡ ತಂಡವನ್ನು ಸೋಲಿಸಿ ಮುನ್ನಡೆಯಿತು. ಕಡೇಮಾಡ ರಚನ್‌ ಗೋಲು ಬಾರಿಸಿ ಮುನ್ನಡೆ ಸಾಧಿಸಿದರು. ಆದರೆ, ನಂತರ ಎಚ್ಚೆತ್ತ ಕಳ್ಳಿಚಂಡ ತಂಡ ನಾಲ್ಕು ಗೋಲುಗಳನ್ನು ಬಾರಿಸಿ ಜಯಗಳಿಸಿತು. ಕಳ್ಳಿಚಂಡ ಕಾವೇರಪ್ಪ ಮೂರು ಗೋಲು ಬಾರಿಸಿ ಗಮನ ಸೆಳೆದರೆ, ಸಾವನ್‌ 1 ಬಾರಿ ಚೆಂಡನ್ನು ಗುರಿಮುಟ್ಟಿಸಿದರು.

ಮಂಡೇಪಂಡ ತಂಡ 3-0 ಗೋಲುಗಳಿಂದ ಬೇಪಡಿಯಂಡ ತಂಡದ ವಿರುದ್ಧ ಜಯ ಸಾಧಿಸಿತು. ಮಂಡೇಪಂಡ ಸಜನ್‌, ಚಂದನ್‌ ಹಾಗೂ ಸಿದ್ದು ಅತ್ಯುತ್ತಮ ಆಟದ ಪ್ರದರ್ಶನ ನೀಡಿ ತಂಡಕ್ಕೆ ಗೆಲುವು ತಂದುಕೊಟ್ಟರು.

ಸಡನ್‌ ಡೆತ್‌ನಲ್ಲಿ ಕಾಂಡಂಡ ತಂಡ ಬಲ್ಲಚಂಡ ತಂಡವನ್ನು ಸೋಲಿಸಿತು. ನಿಗದಿತ ಅವಧಿಯಲ್ಲಿ ತಲಾ 1-1 ಗೋಲುಗಳು ಬಂದವು. ಅಂತಾರಾಷ್ಟ್ರೀಯ ಡ್ರ್ಯಾಗ್‌ ಫ್ಲಿಕ್‌ ತಜ್ಞ ಲೆನ್‌ ಅಯ್ಯಪ್ಪ ಟೈಬ್ರೇಕರ್‌ನಲ್ಲಿ ಪ್ಯಾಡ್‌ ಕಟ್ಟಿ ಗೋಲ್‌ಕೀಪಿಂಗ್‌ ನಡೆಸಿದರೂ, ತಂಡವನ್ನು ಸೋಲಿನಿಂದ ರಕ್ಷಿಸಲು ಸಾಧ್ಯವಾಗಲಿಲ್ಲ.

ಮುರುವಂಡ ತಂಡ 4-0 ಗೋಲುಗಳಿಂದ ಐನಂಡ ತಂಡವನ್ನು ಮಣಿಸಿತು. ಮುರುವಂಡ ಪರ ಮಿಥುನ್‌ ಅಣ್ಣಯ್ಯ, ಅಪ್ಪಣ್ಣ, ಚರಣ್‌, ಕಾರ್ಯಪ್ಪ ಫಲಿತಾಂಶ ತಂದರು.


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಮುಕೇಶ್ ಅಂಬಾನಿಯವರ ಮೊದಲ ಮನೆ ಹೇಗಿದೆ ಗೊತ್ತಾ?


ಮನವನ್ನು ಮುದಗೊಳಿಸುತ್ತೆ ಪುಟ್ಟ ಕಂದನ ಕ್ಯೂಟ್‌ ವಿಡಿಯೋ


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


ಗುರು ರಾಘವೇಂದ್ರರ ದಿನದ ಭವಿಷ್ಯ ಹಾಗೂ ರಾಶಿ ಫಲ


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ವಿರಾಟ್-ಅನುಷ್ಕಾ ನಡುವಣ ಸಂಭಾಷಣೆ ಊಹಿಸಬಲ್ಲೀರಾ?


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್



<script src="https://jsc.adskeeper.com/r/s/rssing.com.1596347.js" async> </script>