Quantcast
Channel: VijayKarnataka
Viewing all articles
Browse latest Browse all 6795

ಪದಕದ ನಿರೀಕ್ಷೆಯಲ್ಲಿ ರಾಜ್ಯದ ಅಥ್ಲೀಟ್‌ಗಳು

$
0
0

ಕಂಠೀರವ ಕ್ರೀಡಾಂಗಣದಲ್ಲಿ ಇಂದಿನಿಂದ ಜೂನಿಯರ್‌ ಫೆಡರೇಷನ್‌ ಅಥ್ಲಿಟಿಕ್ಸ್‌ ಚಾಂಪಿಯನ್‌ಷಿಪ್‌

ಬೆಂಗಳೂರು: ಪ್ರಮುಖ ಅಥ್ಲೀಟ್‌ಗಳ ಅನುಪಸ್ಥಿತಿಯಲ್ಲಿ ಕಣಕ್ಕಿಳಿಯುತ್ತಿರುವ ರಾಜ್ಯದ ಅಥ್ಲೀಟ್‌ಗಳು ಇಲ್ಲಿ ಆರಂಭವಾಗಲಿರುವ 14ನೇ ರಾಷ್ಟ್ರೀಯ ಜೂನಿಯರ್‌ ಫೆಡರೇಷನ್‌ ಕಪ್‌ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ನಲ್ಲಿ ಪದಕದ ನಿರೀಕ್ಷೆಯಲ್ಲಿದ್ದಾರೆ.

ಇಲ್ಲಿನ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ಮಂಗಳವಾರದಿಂದ ಮೂರು ದಿನ ಕೂಟ ನಡೆಯಲಿದ್ದು, 24 ರಾಜ್ಯಗಳ 500ಕ್ಕೂ ಅಧಿಕ ಅಥ್ಲೀಟ್‌ಗಳು ವಿವಿಧ ವಿಭಾಗಗಳಲ್ಲಿ ಪದಕಕ್ಕಾಗಿ ಪೈಪೋಟಿ ನಡೆಸಲಿದ್ದಾರೆ.

ರಾಜ್ಯದ ಕೆಲ ಅಥ್ಲೀಟ್‌ಗಳು ಶೈಕ್ಷ ಣಿಕ ಪರೀಕ್ಷೆಯಲ್ಲಿ ನಿರತವಾಗಿರುವ ಕಾರಣ ಈ ಬಾರಿ ಕೇವಲ 26 ಅಥ್ಲೀಟ್‌ಗಳು ಕೂಟಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಬಾಲಕರ ವಿಭಾಗದ 100 ಮೀಟರ್‌ ಓಟದಲ್ಲಿ ಮನೀಶ್‌, 200ಮೀ.ನಲ್ಲಿ ಎಂ. ಕಿರಣ್‌ ಪ್ರಮುಖರೆನಿಸಿದ್ದರೆ, ಬಾಲಕಿಯರ ವಿಭಾಗದಲ್ಲಿ ಸ್ನೇಹಾ ಎಸ್‌.ಎಸ್‌. ಮತ್ತು ಇಂಚಿರಾ 100ಮೀ. ಸ್ಪರ್ಧೆಯಲ್ಲಿ ಪ್ರಮುಖರಾಗಿದ್ದಾರೆ. ಉಳಿದಂತೆ ಕೇರಳ ಅತ್ಯಧಿಕ 71 ಅಥ್ಲೀಟ್‌ಗಳನ್ನು ರನ್ನಿಂಗ್‌, ಹೈಜಂಪ್‌, ಲಾಂಗ್‌ ಜಂಪ್‌, ಶಾಟ್‌ಪುಟ್‌, ಹರ್ಡಲ್ಸ್‌ ,ರಿಲೇ ಮತ್ತು ಜಾವಲಿನ್‌ ಥ್ರೋ ಸೇರಿದಂತೆ ವಿವಿಧ ವಿಭಾಗದಲ್ಲಿ ಕಣಕ್ಕಿಳಿಸಿದ್ದು ಪದಕ ಬೇಟೆಗೆ ಸಜ್ಜಾಗಿದೆ.

ನಾಡಾ ಕಣ್ಗಾವಲು

ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುತ್ತಿರುವ ಅಥ್ಲೀಟ್‌ಗಳ ಮೇಲೆ ನಾಡಾ ಕಣ್ಗಾವಲು ಇಟ್ಟಿದೆ. ಈಗಾಗಲೇ ಕಂಠೀರವದಲ್ಲಿ ಕ್ರೀಡಾಂಗಣದಲ್ಲಿ ಬಿಡುಬಿಟ್ಟಿರುವ ನಾಡಾ ಅಧಿಕಾರಿಗಳು ಕೂಟದಲ್ಲಿ ಪಾಲ್ಗೊಳ್ಳುವ ಅಥ್ಲೀಟ್‌ಗಳನ್ನು ಪರೀಕ್ಷೆಗೆ ಒಳಪಡಿಸಲಿದ್ದಾರೆ. ಬೆಂಗಳೂರಿನಲ್ಲಿ ಬಿರು ಬಿಸಿಲು ಇರುವ ಕಾರಣ ಕ್ರೀಡಾಕೂಟವನ್ನು ಹೊನಲು ಬೆಳಕಿನಲ್ಲಿ ನಡೆಸಲು ನಿರ್ಧರಿಸಲಾಗಿದ್ದು, ಬೆಳಗ್ಗೆ 6ರಿಂದ 9ರವರೆಗೆ ಹಾಗೂ ಸಂಜೆ 4ರಿಂದ 8ರವರೆಗೆ ಕೂಟ ನಡೆಯಲಿದೆ.

ಅಥ್ಲೆಟಿಕ್ಸ್‌ ಬಳಿಕ ಫುಟ್ಬಾಲ್‌ ಪಂದ್ಯ

ಕಂಠೀರವ ಹೊರಾಂಗಣ ಕ್ರೀಡಾಂಗಣದಲ್ಲಿ ನಿಗದಿಯಾಗಿದ್ದ ಬೆಂಗಳೂರು ಎಫ್‌ಸಿ ಮತ್ತು ಐಜ್ವಾಲ್‌ ಎಫ್‌ಸಿ ನಡುವಿನ ಫೆಡರೇಷನ್‌ ಕಪ್‌ ಫುಟ್ಬಾಲ್‌ ಪಂದ್ಯ ನಿಗದಿಯಂತೆ ನಡೆಯಲಿದ್ದು, ಎರಡು ತಾಸು ವಿಳಂಬವಾಗಲಿದೆ. ಅಥ್ಲೆಟಿಕ್ಸ್‌ ಕೂಟ ಮುಗಿದ ಬಳಿಕ ರಾತ್ರಿ 9 ಗಂಟೆಗೆ ಫುಟ್ಬಾಲ್‌ ಪಂದ್ಯ ಆರಂಭವಾಗಲಿದೆ. ಹಿಂದಿನ ವೇಳಾಪಟ್ಟಿ ನಿಗದಿಯಂತೆ ಮೇ 3ರಂದು ರಾತ್ರಿ 7ಕ್ಕೆ ಕಂಠೀರವ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಬೇಕಿತ್ತು. ಆದರೆ ಇದೇ ದಿನ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ ನಡೆಯುತ್ತಿರುವ ಕಾರಣ ಫುಟ್ಬಾಲ್‌ ಪಂದ್ಯಕ್ಕೆ ಅವಕಾಶ ನೀಡಬಾರದು ಎಂದು ರಾಜ್ಯ ಅಮೆಚೂರ್‌ ಅಥ್ಲೆಟಿಕ್ಸ್‌ ಸಂಸ್ಥೆ, ಕ್ರೀಡಾ ಇಲಾಖೆಗೆ ಮನವಿ ಮಾಡಿತ್ತು. ಇದೀಗ ಕ್ರೀಡಾ ಇಲಾಖೆ ಮತ್ತು ಜೆಎಸ್‌ಡಬ್ಲ್ಯು ನಡುವೆ ಮಾತುಕತೆ ನಡೆದಿದ್ದು, ಅಥ್ಲೆಟಿಕ್ಸ್‌ ಮುಗಿದ ಬಳಿಕ ಪಂದ್ಯ ನಡೆಸಲು ಯೋಜಿಸಲಾಗಿದೆ. ಹೀಗಾಗಿ 7 ಗಂಟೆಗೆ ಆರಂಭವಾಗಬೇಕಿದ್ದ ಬೆಂಗಳೂರು ಎಫ್‌ಸಿ ಮತ್ತು ಐಜ್ವಾಲ್‌ ನಡುವಿನ ಪಂದ್ಯ ರಾತ್ರಿ 9ಕ್ಕೆ ಆರಂಭವಾಗಲಿದೆ.

ಈ ಕುರಿತು ಪ್ರತಿಕ್ರಿಯಿಸಿದ ರಾಜ್ಯ ಅಥ್ಲೆಟಿಕ್ಸ್‌ ಸಂಸ್ಥೆ ಕಾರ್ಯದರ್ಶಿ ಎನ್‌. ಚಂದ್ರಶೇಖರ್‌ ರೈ,''ಅಥ್ಲೆಟಿಕ್ಸ್‌ಗೆ ತೊಂದರೆಯಾಗಬಾರೆಂಬ ಕಾರಣಕ್ಕೆ ನಾವು ಫುಟ್ಬಾಲ್‌ ಪಂದ್ಯಕ್ಕೆ ಅವಕಾಶ ನೀಡಬಾರದು ಎಂದು ಹೇಳಿದ್ದವು, ಆದರೆ ರಾಜ್ಯ ಕ್ರೀಡಾ ಇಲಾಖೆ ಜತೆ ಕೇಂದ್ರ ಕ್ರೀಡಾ ಸಚಿವರು ಚರ್ಚಿಸಿದ್ದು, ಪಂದ್ಯಕ್ಕೆ ಅವಕಾಶ ಕಲ್ಪಿಸುವಂತೆ ಸೂಚಿಸಿದ್ದಾರೆ. ಹೀಗಾಗಿ ಅಥ್ಲೆಟಿಕ್ಸ್‌ ಮುಗಿದ ಬಳಿಕ ರಾತ್ರಿ 9ಕ್ಕೆ ಪಂದ್ಯ ಆಯೋಜಿಸಲು ಅವಕಾಶ ಕಲ್ಪಿಸಲಾಗಿದೆ,'' ಎಂದು ವಿಜಯಕರ್ನಾಟಕಕ್ಕೆ ತಿಳಿಸಿದ್ದಾರೆ.

500,

ಕೂಟದಲ್ಲಿ 24 ರಾಜ್ಯಗಳಿಂದ ಪಾಲ್ಗೊಳ್ಳುತ್ತಿರುವ ಒಟ್ಟು ಅಥ್ಲೀಟ್‌ಗಳ ಒಟ್ಟು ಸಂಖ್ಯೆ



Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಮುಕೇಶ್ ಅಂಬಾನಿಯವರ ಮೊದಲ ಮನೆ ಹೇಗಿದೆ ಗೊತ್ತಾ?


ಜಮೀನಿನಲ್ಲೇ ಘೋರ ದುರಂತ: ನೀರು ತುಂಬಿದ್ದ ಗುಂಡಿಗೆ ಬಿದ್ದು ಮೂವರು ಸಾವು


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


ವಚನಗಳಿಂದ ಸಂಗೀತ ಲೋಕ ಶ್ರೀಮಂತ


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ತುಳು ತೆರೆಗೆ ಸೋನಿಯಾ ಎಂಟ್ರಿ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್



<script src="https://jsc.adskeeper.com/r/s/rssing.com.1596347.js" async> </script>