Quantcast
Channel: VijayKarnataka
Viewing all articles
Browse latest Browse all 6795

ಸಮೃದ್ಧಿಗೆ ನವಿಲುಗರಿ

$
0
0

ನವಿಲುಗರಿ ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ? ಶಾಲೆಗೆ ಹೋಗುವಾಗ ಆ ಮೃದುವಾದ ಗರಿಯನ್ನು ಪುಸ್ತಕದೊಳಗೆ ಇಡುವುದು, ಆಗಾಗ ಅದನ್ನು ತೆಗೆದು ಮುಖಕ್ಕೆ ಸವರಿಕೊಳ್ಳುವ ಖುಷಿಯನ್ನು ಎಲ್ಲರೂ ಅನುಭವಿಸಿರುತ್ತಾರೆ. ನಮ್ಮ ಬಾಲ್ಯ, ಯೌವನದಲ್ಲಿ ಒಂದು ರೀತಿಯ ಪ್ರೇಮದ ಅನುಭೂತಿ ಉಂಟು ಮಾಡುವ ನವಿಲುಗರಿ ಮನೆ ಅಲಂಕಾರ ಮತ್ತು ಸೌಂದರ್ಯ ಸಾಧನದ ರೂಪದಲ್ಲಿಯೂ ಬಳಕೆಯಾಗುತ್ತದೆ. ಇದರ ಮಹತ್ವ ಇಷ್ಟಕ್ಕೆ ಮುಗಿಯುವುದಿಲ್ಲ. ನವಿಲುಗರಿ ತುಂಬಾ ಪವಿತ್ರವಾದ ವಸ್ತುವೂ ಹೌದು. ಇದರಿಂದ ಮನೆಯ ಹಲವಾರು ದೋಷಗಳನ್ನೂ ನಿವಾರಿಸಬಹುದು. ಇದರ ಇನ್ನಿತರ ಪ್ರಯೋಜನಗಳು ಇಂತಿವೆ.

ವಾಸ್ತು ದೋಷ ನಿವಾರಣೆ: ಎಂಟು ನವಿಲುಗರಿಗಳನ್ನು ಒಟ್ಟು ಮಾಡಿ ಬಿಳಿ ದಾರದಿಂದ ಕಟ್ಟಿ, ಓಂ ಸೋಮಾಯ ನಮಃ ಎಂಬ ಮಂತ್ರವನ್ನು ಜಪಿಸಿಸಿದರೆ ವಾಸ್ತು ದೋಷ ನಿವಾರಣೆಯಾಗುತ್ತದೆ.

ಶನಿ ದೋಷ ನಿವಾರಣೆ: ಮೂರು ನವಿಲುಗರಿಗಳನ್ನು ಒಟ್ಟು ಮಾಡಿ ಕಪ್ಪು ದಾರದಿಂದ ಕಟ್ಟಿ. ಇದರ ಮೇಲೆ ಸ್ವಲ್ಪ ಅಡಿಕೆ ತುಂಡುಗಳನ್ನು ಇಟ್ಟು, ನೀರು ಚಿಮುಕಿಸಿ ಓಂ ಶನಿಶ್ವರಾಯ ನಮಃ ಎಂಬ ಮಂತ್ರವನ್ನು 21 ಬಾರಿ ಪಠಿಸಿ.

ಸಮೃದ್ಧಿ ಹೆಚ್ಚಳ: ಲಾಕರ್‌ನ ಬಳಿ ನವಿಲುಗರಿಯನ್ನು ಇಟ್ಟರೆ ಮನೆಯಲ್ಲಿ ಸಮೃದ್ಧಿ ಮತ್ತು ಸ್ಥಿರತೆ ಮನೆ ಮಾಡುತ್ತದೆ ಎಂಬ ನಂಬಿಕೆಯೂ ಇದೆ.

ಮನೆ ಅಲಂಕಾರ: ಸೌಂದರ್ಯ ವರ್ಧನೆಯಲ್ಲೂ ನವಿಲುಗರಿಯ ಪಾತ್ರ ಮಹತ್ವದ್ದು. ನರ್ತಿಸುವ ಭಂಗಿಯಲ್ಲಿರುವ ನವಿಲುಗರಿಯ ಚಿತ್ರವನ್ನು ಲಿವಿಂಗ್ ರೂಮ್‌ನಲ್ಲಿಟ್ಟರೆ ಆ ಕೋಣೆಗೆ ವಿಶೇಷ ಕಳೆ ಬರುತ್ತದೆ.

ನೆಗೆಟಿವ್ ಎನರ್ಜಿ ದೂರವಾಗಿಸುತ್ತದೆ: ಮನೆಯಲ್ಲಿರುವ ನೆಗೆಟಿವ್ ಎನರ್ಜಿಯನ್ನು ಹೋಗಲಾಡಿಸಲು ನವಿಲುಗರಿ ತುಂಬಾ ಸಹಕಾರಿಯಾಗಿದೆ. ಇದನ್ನು ಮನೆಯ ಪ್ರವೇಶ ದ್ವಾರದಲ್ಲಿಟ್ಟರೆ ತುಂಬಾ ಒಳ್ಳೆಯದು.

ಉತ್ಪಾದನೆ ಹೆಚ್ಚಳ: ಆಫೀಸ್ ಅಲಂಕಾರಕ್ಕೂ ನವಿಲುಗರಿ ಉತ್ತಮ. ನವಿಲುಗರಿಯ ಪೇಂಟಿಂಗ್ ಅಥವಾ ಶೋಪೀಸ್‌ಗಳನ್ನು ಆಫೀಸ್‌ನಲ್ಲಿ ತೂಗು ಹಾಕಿದರೆ ಉತ್ಪಾದನೆ ಹೆಚ್ಚುತ್ತದೆ.

ಆರೋಗ್ಯ ವರ್ಧನೆ: ಹಿಂದಿನ ಕಾಲದಲ್ಲಿ ವ್ಯಕ್ತಿಗಳ ದೇಹದಲ್ಲಿ ಸೇರಿಕೊಂಡಿರುವ ವಿಷವನ್ನು ತೆಗೆಯುವ ಔಷಧಿಯನ್ನಾಗಿ ನವಿಲುಗರಿಯನ್ನು ಬಳಸುತ್ತಿದ್ದರು. ಇದರಲ್ಲಿ ಕೆಲವು ಔಷಧೀಯ ಗುಣಗಳೂ ಇವೆ.

ಕೀಟ ಬಾಧೆ ನಿವಾರಣೆ: ಮನೆಯ ಸ್ವಚ್ಛತೆಗೂ ನವಿಲುಗರಿ ಸಹಕಾರಿಯಾಗಿದೆ. ವಿಶೇಷವಾಗಿ ಹಲ್ಲಿಗಳ ಬಾಧೆ ಹೆಚ್ಚಿದ್ದರೆ ನವಿಲುಗರಿಗಳನ್ನು ಇಡಿ. ಇದರಿಂದ ಹಲ್ಲಿಗಳ ಉಪಟಳ ಕಡಿಮೆಯಾಗುತ್ತದೆ.

ಪ್ರಣಯ ಭಾವ: ಮಲಗುವ ಕೋಣೆಯಲ್ಲಿ ನವಿಲುಗರಿಯ ಚಿತ್ರವನ್ನು ತೂಗು ಹಾಕಿದರೆ ದಂಪತಿಗಳ ನಡುವೆ ಪ್ರೇಮ ಭಾವನೆ ಮತ್ತು ಪರಸ್ಪರ ಅರ್ಥೈಸಿಕೊಳ್ಳುವ ಗುಣ ಹೆಚ್ಚುತ್ತದೆ.

ಸೂಕ್ತ ನಿರ್ವಹಣೆ ಮಾಡಿ

ಮನೆಯ ವಾಸ್ತು ದೋಷ ನಿವಾರಣೆಗೆ ನವಿಲುಗರಿಯನ್ನು ಇಟ್ಟರೆ ಅದನ್ನು ಸೂಕ್ತವಾಗಿ ನಿರ್ವಹಣೆ ಮಾಡುವುದು ಕೂಡಾ ಮುಖ್ಯ. ಇದರ ಮೇಲೆ ಧೂಳು ಶೇಖರವಾಗದಂತೆ ಎಚ್ಚರಿಕೆ ವಹಿಸಿ.


Viewing all articles
Browse latest Browse all 6795

Trending Articles


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಪ್ರಜ್ಞಾ ಪ್ರವಾಹ, ಕರ್ನಾಟಕ “ದೇಶಿ ಚಿಂತನೆ” ಪ್ರಬಂಧ ಸ್ಪರ್ಧೆ


ತುಳು ತೆರೆಗೆ ಸೋನಿಯಾ ಎಂಟ್ರಿ


BIG NEWS : ಶಾಲೆಗಳ ಪ್ರಥಮ ಮಾನ್ಯತೆ, ಮಾನ್ಯತೆ ನವೀಕರಣದ ಕುರಿತು ‘ಶಿಕ್ಷಣ ಇಲಾಖೆ’ಯಿಂದ...


ನಾಳೆ ಮೈಸೂರು ನಗರದ ಈ  ಭಾಗದಲ್ಲಿ ವಿದ್ಯುತ್ ವ್ಯತ್ಯಯ


ಕಳ್ಳತನ ಮಾಡುವಾಗ ಮನೆಯೊಡತಿ ನೋಡಿದ್ದಕ್ಕೆ ಕೊಂದೇ ಬಿಟ್ಟ ಅರ್ಚಕ!


Indira Canteen : ‘ಇಂದಿರಾ ಕ್ಯಾಂಟೀನ್’ನಲ್ಲಿ ಮಾಂಸ ಸೇವನೆಗೂ ಅವಕಾಶವಿದೆ : ಸಚಿವ...


ಭಾಷಾಭಿಮಾನ ಬೆಳೆಸುವ ಪ್ರಯತ್ನ ತುಳು ಕ್ಯಾಲೆಂಡರ್‌ ‘ಕಾಲಕೋಂದೆ’


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!



<script src="https://jsc.adskeeper.com/r/s/rssing.com.1596347.js" async> </script>