Quantcast
Channel: VijayKarnataka
Viewing all articles
Browse latest Browse all 6795

ಆಹಾರದಲ್ಲಿದೆ ವ್ಯಕ್ತಿತ್ವ

$
0
0

ನಿಮ್ಮ ಆಹಾರ ಸೇವಿಸುವ ಹವ್ಯಾಸ ಮತ್ತು ಗ್ರಹಗಳ ದೌರ್ಬಲ್ಯವು ಪರಸ್ಪರ ಸಂಬಂಧ ಹೊಂದಿದೆ. ನಿಮ್ಮ ಸೆಳವಿನಲ್ಲಿ ದೌರ್ಬಲ್ಯತೆ ಇರುವುದರಿಂದಲೇ ಜನರು ನಿರ್ದಿಷ್ಟ ಬಣ್ಣಗಳನ್ನು ಇಷ್ಟಪಡುವುದು.

ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ಕೆಂಪು ಮತ್ತು ಕಪ್ಪು ಬಣ್ಣದ ಡ್ರೆಸ್‌ಗಳನ್ನು ಅಧಿಕವಾಗಿ ಧರಿಸುತ್ತಿರುವುದನ್ನು ನಾವು ಗಮನಿಸಬಹುದು. ಕೆಂಪು ಬಣ್ಣ ಉತ್ತಮ ನಿರ್ದೇಶನ ನೀಡಿದರೆ, ಕಪ್ಪು ಬಣ್ಣ ಸೋಂಕನ್ನು ಆಳುತ್ತದೆ. ಇಂದು ಯುವ ಪೀಳಿಗೆಯು ನಿರ್ದೇಶನ ಮಾಡುವ ಸಾಮರ್ಥ್ಯ ಹೊಂದಿಲ್ಲ ಮತ್ತು ದೋಷಯುಕ್ತ ಆಹಾರ ಸೇವಿಸುವುದರಿಂದ ದೇಹ ಪೂರ್ತಿ ಸೋಂಕಿನಿಂದ ತುಂಬಿದೆ. ಇಂದಿನ ಯುವ ಜನರು ತಿನ್ನುವ ಆಹಾರಗಳಿಂದಲೇ ಅವರ ಬಗ್ಗೆ ತಿಳಿದುಕೊಳ್ಳಬಹುದು. ವ್ಯಕ್ತಿಯ ತಿನ್ನುವ ಹವ್ಯಾಸವನ್ನು ಗಮನಿಸಿ ಅವರ ಬಗ್ಗೆ ಅನೇಕ ವಿಷಯಗಳನ್ನು ಹೇಳಬಹುದು. ಅದು ಹೇಗೆ ಎಂಬುದು ಇಲ್ಲಿದೆ ವಿವರ.

*ಸೂರ್ಯ:

ಯಾರಲ್ಲಿ ಸೂರ್ಯ ದುರ್ಬಲವಾಗಿರುತ್ತಾನೋ ಅಂಥವರು ತಮ್ಮ ಆಹಾರದಲ್ಲಿ ಉಪ್ಪನ್ನು ಹೆಚ್ಚಿಗೆ ಸೇರಿಸಿಕೊಳ್ಳುತ್ತಾರೆ. ಇದರಿಂದಾಗಿ ಇವರ ಮೂಳೆ ದುರ್ಬಲವಾಗಿರುತ್ತದೆ, ಬೊಕ್ಕತಲೆ, ಹೃದಯ ಮತ್ತು ಹೊಟ್ಟೆಯ ಸಮಸ್ಯೆ ಇರುತ್ತದೆ.

*ಚಂದ್ರ:

ಯಾರಲ್ಲಿ ಚಂದ್ರ ದುರ್ಬಲವಾಗಿರುತ್ತಾನೋ ಅವರು ಅನ್ನ ಇಷ್ಟಪಡುತ್ತಾರೆ. ತಮ್ಮ ಆಹಾರದೊಂದಿಗೆ ಜ್ಯೂಸ್‌ಗಳು ಇರಬೇಕು. ಇದು ದುರ್ಬಲತೆ, ಭಾವನೆ ಮತ್ತು ವಯಸ್ಕ ಮಹಿಳೆಯರ ಸಮಸ್ಯೆಯನ್ನು ಬಗೆಹರಿಸುತ್ತದೆ.

*ಮಂಗಳ :

ಯಾರಲ್ಲಿ ಮಂಗಳ ದುರ್ಬಲವಾಗಿರುತ್ತದೋ ಇವರು ಖಾರ ಮತ್ತು ಸ್ಪೈ ಆಹಾರವನ್ನು ಇಷ್ಟಪಡುತ್ತಾರೆ. ಇವರು ಹಲ್ವ ಸೇವಿಸಲು ಬಯಸುತ್ತಾರೆ. ಇವರು ಸಾಮಾನ್ಯವಾಗಿ ಮಧುಮೇಹದಿಂದ ಬಳಲುತ್ತಾರೆ. ಸಹೋದರರಿಂದ ಬೆಂಬಲ ಕೂಡ ಕಡಿಮೆ ಇರುತ್ತದೆ.

*ಬುಧ :

ಬುಧ ದುರ್ಬಲವಾಗಿದ್ದರೆ ಮೊಟ್ಟೆ ಸೇವಿಸಲು ಬಯಸುತ್ತಾರೆ. ಇವರ ನೆನಪಿನಶಕ್ತಿ ಮತ್ತು ನರಗಳು ದುರ್ಬಲವಾಗಿರುತ್ತದೆ.

*ಶುಕ್ರ :

ಶುಕ್ರ ದುರ್ಬಲವಾಗಿದ್ದರೆ ಮೊಸರು ಮತ್ತು ದೇಸಿ ತುಪ್ಪದಲ್ಲಿ ಮಾಡಿದ ಆಹಾರವನ್ನು ಇಷ್ಟಪಡುತ್ತಾರೆ. ಲೈಂಗಿಕ ವಿಷಯದಲ್ಲಿ ಆಸಕ್ತಿ ಕಡಿಮೆ ಮತ್ತು ಒಪಸಿಟ್ ಸೆಕ್ಸ್‌ನೊಂದಿಗೆ ಸಮಸ್ಯೆಗಳು ಇರುತ್ತವೆ.

*ಗುರು:

ಗುರು ದುರ್ಬಲವಾಗಿದ್ದರೆ ಚನ್ನ ದಾಲ್ ಮತ್ತು ಕಡ್ಲೆಹಿಟ್ಟಿನಲ್ಲಿ ಮಾಡಿದ ಆಹಾರವನ್ನು ಇಷ್ಟಪಡುತ್ತಾರೆ. ಇವರಿಗೆ ಹಿರಿಯರಿಂದ ಬೆಂಬಲ ಸಿಗುವುದು ಮಾತ್ರ ಕಡಿಮೆ.

*ಶನಿ:

ಶನಿ ದುರ್ಬಲವಾಗಿದ್ದರೆ ಉದ್ದಿನಬೇಳೆ ಇಷ್ಟಪಡುತ್ತಾರೆ. ಇವರು ಕಹಿ ಮತ್ತು ತಣ್ಣಗಿನ ಆಹಾರ ಬಯಸುತ್ತಾರೆ. ಇವರಿಗೆ ಮದ್ಯ ಮತ್ತು ತಂಬಾಕು ಜಗಿಯುವುದೆಂದರೆ ಅಚ್ಚುಮೆಚ್ಚು. ಕಾಲು ಮತ್ತು ಪಾದಗಳ ಭಾಗ ದುರ್ಬಲವಾಗಿರುತ್ತದೆ.

*ರಾಹು:

ರಾಹು ದುರ್ಬಲವಾಗಿದ್ದರೆ ಧೂಮಪಾನವನ್ನು ಇಷ್ಟಪಡುತ್ತಾರೆ. ಶಾರೀರಿಕವಾಗಿ ತುಂಬಾ ಸಮಸ್ಯೆಯನ್ನು ಹೊಂದಿರುತ್ತಾರೆ. ಇವರಲ್ಲಿ ತಾರತಮ್ಯದ ಕೊರತೆ ಮತ್ತು ದುರ್ಬಲ ಇಚ್ಛಾಶಕ್ತಿಯನ್ನು ಇರುತ್ತದೆ.

*ಕೇತು:

ಕೇತು ದುರ್ಬಲವಾಗಿದ್ದರೆ ಪನ್ನೀರು ಇಷ್ಟಪಡುತ್ತಾರೆ. ನರಗಳಿಗೆ ಸಂಬಂಧಿಸಿದಂತೆ ಸಮಸ್ಯೆಯನ್ನು ಹೊಂದಿರುತ್ತಾರೆ. ಇವರು ಪೈಲ್ಸ್ ಮತ್ತು ಆ್ಯಸಿಡಿಟಿಯಿಂದ ಬಳಲುತ್ತಿರುತ್ತಾರೆ.


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ಮಲಗಿದ್ದ ಮಹಿಳೆ ಬೆದರಿಸಿ ಬೆತ್ತಲೆ ಫೋಟೋ ತೆಗೆದ ಕಳ್ಳ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್


‘ವ್ಯಾಪಾರ’ದಲ್ಲಿ ವೃದ್ಧಿಯಾಗಲು ಹೀಗೆ ಮಾಡಿ….


ಅಪ್ಪ ಅಮ್ಮ ಬೈಯ್ತಾರೆ ಅಂತ ಬೆಂಗಳೂರಿಂದ ಚಳ್ಳಕೆರೆಗೆ ಹೋದ ಮಕ್ಕಳು


Indira Canteen : ‘ಇಂದಿರಾ ಕ್ಯಾಂಟೀನ್’ನಲ್ಲಿ ಮಾಂಸ ಸೇವನೆಗೂ ಅವಕಾಶವಿದೆ : ಸಚಿವ...


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


Namaskāra नमस्कार (salutation)


ತುಳು ತೆರೆಗೆ ಸೋನಿಯಾ ಎಂಟ್ರಿ



<script src="https://jsc.adskeeper.com/r/s/rssing.com.1596347.js" async> </script>