Quantcast
Channel: VijayKarnataka
Viewing all articles
Browse latest Browse all 6795

ನವಗ್ರಹಗಳಲ್ಲಿದೆ 'ಪುಷ್ಪದ ಚಮತ್ಕಾರ'

$
0
0

* ಡಾ.ಅನಸೂಯಾ ಎಸ್. ರಾಜೀವ್

ವಸಂತ ಋತುವು ನಳನಳಿಸುವ ಬಣ್ಣ ಬಣ್ಣದ ಹೂಗಳಿಂದ ಕೂಡಿರುವ ಸುಂದರವಾದ ಋತು. ಕಣ್ಣಿಗೆ ಹಬ್ಬ ಉಂಟುಮಾಡುವ ಈ ಋತುವು ಮನಸ್ಸಿಗೆ ಹಿತವನ್ನೂ ದೇಹಕ್ಕೆ ಉಲ್ಲಾಸವನ್ನೂ ಕೊಡುತ್ತದೆ. ಪ್ರಕೃತಿಯಲ್ಲಿ ಅರಳತಕ್ಕಂತಹ ಅನೇಕ ಬಗೆಯ ಹೂಗಳ ಉಪಯೋಗವನ್ನು ಯಥೇಚ್ಛವಾಗಿ ಈ ಋತುವಿನಲ್ಲಿ ಮಾಡಬಹುದು. ಅಷ್ಟು ಅದ್ಭುತ ಅವಕಾಶ!

ಹೂವೂ ಚೆಲುವೆಲ್ಲ ನಂದೆಂದಿತು ಎಂಬಂತೆ ಹೂವು ಸೌಂದರ್ಯವರ್ಧಕವೂ ಹೌದು, ಪೂಜಾರ್ಹವೂ ಹೌದು, ಸುಗಂಧ ಚಿಕಿತ್ಸೆಯ ಕಾರಣಕರ್ತೃವೂ ಹೌದು. ಋತುಮಾನಕ್ಕೆ ಅನುಗುಣವಾಗಿ ಸುವಾಸನೆಯುಳ್ಳ ಪುಷ್ಪಗಳನ್ನು ಮುಡಿಯುವುದರಿಂದ ಕೂದಲು ಬೇಗ ಬೆಳ್ಳಗಾಗುವುದಿಲ್ಲ. ಹೂವಿನ ಸುವಾಸನೆಯು ಕೂದಲಿಗೆ ರಕ್ಷಣೆ ನೀಡುತ್ತದೆ. ಇದರಿಂದ ತಲೆಯಲ್ಲಿ ಹೊಟ್ಟು ಸೇರುವುದಿಲ್ಲ. ಹೂವು ಮುಡಿಯುವುದು ಬ್ರಹ್ಮರಂಧ್ರವಿರುವ ಸಹಸ್ರಾರ ಚಕ್ರವಿರುವ ಜಾಗದಲ್ಲಿ. ಇದು ಬ್ರಹ್ಮರಂಧ್ರವನ್ನು ಪೂಜಿಸುವುದರ ಸಂಕೇತ.

ಹೂವು ಮುಡಿಯುವುದರಿಂದ ನಮ್ಮಲ್ಲಿನ ಋಣಾತ್ಮಕ ಅಂಶಗಳು ಹೊರಹೋಗಿ ಧನಾತ್ಮಕ ಶಕ್ತಿಗಳು ಉತ್ಪತ್ತಿಯಾಗುತ್ತವೆ. ದೇವರಿಗೆ ಮುಡಿಸುವ ಪುಷ್ಪಗಳು ನೇರವಾಗಿ ನಮಗೆ ಧನಾತ್ಮಕ ಶಕ್ತಿ ಕೊಡುತ್ತವೆ ಎಂದರೆ ವಿಸ್ಮಯವೆನಿಸುತ್ತದೆಯಾದರೂ ಅದು ಸತ್ಯ. ಆಯಾ ದೇವರಿಗೆ ಆಯಾ ಹೂವುಗಳನ್ನು ಸಮರ್ಪಿಸುವುದರಿಂದ ಆ ದೇವರ ಅನುಗ್ರಹ ನಮಗೆ ದೊರೆಯುತ್ತದೆ. ನಮ್ಮ ದೇಹದ ಚಕ್ರಗಳನ್ನು ಉದ್ದೀಪಿಸಲು ವಿವಿಧ ರೀತಿಯ ಸುಗಂಧ ಧೂಪಗಳು ಸಹಾಯಕಾರಿ.

ಹೂವು ಸುಗಂಧ ಚಿಕಿತ್ಸೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಹೂಗಳನ್ನು ಕಷಾಯ, ಚೂರ್ಣ, ಮಾಲೀಶು ತೈಲ, ಸುಗಂಧದ್ರವ್ಯ ಮುಂತಾದ ರೂಪದಲ್ಲಿ ಬಳಸಬಹುದು. ಮನುಷ್ಯನ ಮಿದುಳು ಸುಮಾರು ಒಂದು ಲಕ್ಷ ವಿವಿಧ ರೀತಿಯ ವಾಸನೆಗಳನ್ನು ಗ್ರಹಿಸಬಲ್ಲ ಹಾಗೂ ನೆನಪಿಟ್ಟುಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ. ಪ್ರತಿಯೊಂದು ವಾಸನೆಯೂ ನಮ್ಮ ಮಿದುಳಲ್ಲಿ ಸಂಗ್ರಹವಾಗುತ್ತದೆ ಹಾಗೂ ಅದು ಪ್ರತಿಕ್ರಿಯಿಸುತ್ತದೆ.

ಈ ಆಧುನಿಕ ಯುಗದಲ್ಲಿ ಪರಿಸರ ಮಾಲಿನ್ಯದಿಂದ ನಮಗೆ ಉಂಟಾಗುವ ಹಾನಿ, ದೇಹಕ್ಕೆ ದೈನಂದಿನ ಕೆಲಸ ಕಾರ್ಯಗಳ ಒತ್ತಡದಿಂದ ಉಂಟಾಗುವ ಹಾನಿ, ಇವುಗಳಿಂದ ನಮ್ಮ ದೇಹದಲ್ಲಿ ವಿಷವಸ್ತುಗಳು ಉತ್ಪತ್ತಿಯಾಗಿ ಹೊರಹೋಗಲಾರದೆ ರಕ್ತದಲ್ಲಿ ಸೇರಿ ರಕ್ತಸಂಚಾರದಲ್ಲಿ ತೊಂದರೆಯನ್ನು ಉಂಟುಮಾಡಿ ರೋಗಕ್ಕೆ ಕಾರಣವಾಗುತ್ತದೆ. ನಮ್ಮ ಪಾದಗಳಲ್ಲಿ 2000 ಕ್ಕಿಂತಲೂ ಹೆಚ್ಚು ರಂಧ್ರಗಳಿರುತ್ತವೆ. ನಾವು ನಮ್ಮ ಪಾದಗಳನ್ನು ಜೈವಿಕ ಶಕ್ತಿಯುತ ದ್ರಾವಣದಲ್ಲಿ ಅದ್ದಿಟ್ಟುಕೊಂಡಿದ್ದರೆ ನಮ್ಮ ದೇಹದಲ್ಲಿರುವ ವಿಷಪೂರಿತ ವಸ್ತುಗಳು ನಮ್ಮ ದೇಹದಿಂದ ವಿಸರ್ಜಿಸಲ್ಪಡುತ್ತಾ ಹೋಗುತ್ತದೆ. ಈ ನಿಟ್ಟಿನಲ್ಲಿ ಹೂವುಗಳಿಂದ ತಯಾರಿಸಲ್ಪಡುವ ಜೈವಿಕ ಶಕ್ತಿಯುತ ದ್ರಾವಣಗಳಿಂದ ನಮ್ಮ ದೇಹದಲ್ಲಿರುವ ವಿಷಪೂರಿತ ವಸ್ತುಗಳು ಹೊರಹೋಗುವುದಲ್ಲದೆ ನಮಗೆ ಆರೋಗ್ಯವನ್ನೂ ಕೊಟ್ಟು ಉಲ್ಲಸಿತರನ್ನಾಗಿ ಮಾಡುತ್ತದೆ.

ಇಂತಹ ಹಲವಾರು ರೀತಿಯ ಪುಷ್ಪ ಚಿಕಿತ್ಸೆಗಳು ನಮ್ಮ ಆರೋಗ್ಯವನ್ನು ಕಾಪಾಡುವಲ್ಲಿ ಸಹಾಯ ಮಾಡುತ್ತವೆ.

ಜ್ಯೋತಿಷ್ಯಾಸ್ತ್ರದಲ್ಲಿ ನವಗ್ರಹಗಳಿಗೆ ಅದರದೇ ಆದ ಪುಷ್ಪಗಳಿವೆ. ಆಯಾ ಪುಷ್ಪಗಳ ಸಮರ್ಪಣೆಯಿಂದ ಆಯಾ ಗ್ರಹಗಳಿಂದ ಉಂಟಾಗುವ ದೋಷವು ನಿವಾರಣೆಯಾಗುತ್ತವೆ. ರವಿಗೆ ಕೆಂದಾವರೆ, ದಾಸವಾಳ,

ಚಂದ್ರನಿಗೆ ಬಿಳಿ ಲಿಲ್ಲಿ, ಸುಗಂಧರಾಜ, ತುಂಬೆ,

ಕುಜನಿಗೆ ಸಂಪಿಗೆ, ಕೆಂಪು ಕಣಗಲೆ

ಬುಧನಿಗೆ ಮಲ್ಲಿಗೆ, ಗರಿಕೆ

ಗುರುವಿಗೆ ತೆಳುಮಲ್ಲಿಗೆ, ಜಾಜಿ, ಸೇವಂತಿಗೆ

ಶುಕ್ರನಿಗೆ ಬಿಳಿ ತಾವರೆ, ಗುಲಾಬಿ, ಕನಕಾಂಬರ

ಶನಿಗೆ ನೀಲಾಂಬರ, ಶಮೀ ಪುಷ್ಪ

ರಾಹುವಿಗೆ ಮಂದಾರ, ಕೇದಿಗೆ

ಕೇತುವಿಗೆ ಕೆಂಪು ಲಿಲ್ಲಿ, ಚೆಂಡು ಹೂವು

ಹೀಗೆ ಒಂದೊಂದು ಹೂವೂ ದೇವತೆಗಳಿಗೆ ಗ್ರಹಗಳಿಗೆ ಪ್ರಿಯವಾಗುವುದಲ್ಲದೆ ಆಯಾ ಪುಷ್ಪಗಳ ಸಮರ್ಪಣೆಯಿಂದ ಆಯಾ ದೇವತೆಗಳ ಕೃಪಾ ಕಟಾಕ್ಷಕ್ಕೆ ಪಾತ್ರರಾಗುವುದೂ ಅಲ್ಲದೆ ರೋಗಗಳ ನಿವಾರಣೆಗೂ ಪರಿಹಾರ ಪುಷ್ಪವಾಗಿ ಪರಿಣಮಿಸುವಲ್ಲಿ ಮಹತ್ತರ ಪಾತ್ರ ವಹಿಸುತ್ತವೆ.


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಮುಕೇಶ್ ಅಂಬಾನಿಯವರ ಮೊದಲ ಮನೆ ಹೇಗಿದೆ ಗೊತ್ತಾ?


ಜಮೀನಿನಲ್ಲೇ ಘೋರ ದುರಂತ: ನೀರು ತುಂಬಿದ್ದ ಗುಂಡಿಗೆ ಬಿದ್ದು ಮೂವರು ಸಾವು


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


ವಚನಗಳಿಂದ ಸಂಗೀತ ಲೋಕ ಶ್ರೀಮಂತ


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ತುಳು ತೆರೆಗೆ ಸೋನಿಯಾ ಎಂಟ್ರಿ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್



<script src="https://jsc.adskeeper.com/r/s/rssing.com.1596347.js" async> </script>