Quantcast
Channel: VijayKarnataka
Viewing all articles
Browse latest Browse all 6795

ದಾರಿ ದೀಪ: ಆಪ್ತ ಸಲಹೆಯಿಂದ ಪರಿಹಾರ

$
0
0

*ದಾಂಪತ್ಯದಲ್ಲಿ ಇತರೆ ವಿಷಯದಲ್ಲಿ ನೆಮ್ಮದಿ ಏಳಿಗೆಯಿಲ್ಲ. ನನ್ನ ಕಾಲುಗುಣ ಸರಿಯಿಲ್ಲವೇ ಗುರುಗಳೇ?

ಜ್ಯೋತಿ, ತುಮಕೂರು

ಮಹಾ ಭಾರತದ ಮೂಲ ಸ್ತ್ರೀಯರಾದ ಸತ್ಯವತಿ, ಕುಂತಿ, ಮಾದ್ರಿ, ದ್ರೌಪದೀಯವರೆಲ್ಲ ಮದುವೆ, ಮಕ್ಕಳು, ಸಾಮ್ರಾಜ್ಯವನ್ನೇ ಕಳೆದುಕೊಂಡರು! ಅವರ ಕಾಲುಗುಣ ಸರಿಯಿರಲಿಲ್ಲವೋ? ಅಥವಾ ವ್ಯಸನಿ, ಯುದ್ಧ, ಗರ್ವ ಪೀಡಿತರಾದ ಪುರುಷರ ನಡೆ-ಗುಣ ಸರಿಯಿರಲಿಲ್ಲವೋ? ಅಥವಾ ಪ್ರಾರಬ್ಧ ಕರ್ಮವೋ?! ಜನಕ್ಕೆ ಉತ್ತಮ ಉಪದೇಶ-ಸಂಸ್ಕಾರಗಳ ಕೊರತೆಯಿಂದ ನಿಮ್ಮಂಥ ಸ್ತ್ರೀಯರನ್ನು ಹೀಗೆ ಹೀಯಾಳಿಸುವರು, ನೀವು ತಲೆ ಕೆಡಿಸಿಕೊಳ್ಳುವ ಕಾರಣವಿಲ್ಲ. ಸಮಾಧಾನ ಹೊಂದಿರಿ, ಪ್ರತಿ ಮಂಗಳವಾರ-ಶುಕ್ರವಾರ ಬರಿದೇ ಹಾಲು-ಹಣ್ಣು ಸೇವಿಸುತ್ತ. ಶ್ರೀ ನರಸಿಂಹ ದೇವರ ದರ್ಶನ ಪೂಜೆ ಮಾಡಿ (ಪ್ರಾರ್ಥನೆ) 12 ಸುತ್ತು ಪ್ರದಕ್ಷಿಣೆ ಸೇವೆ ನಡೆಯಲಿ. ಮುಂದೆ ತಾನೇ ಸರಿಯಾಗುವುದು.

*ಮದುವೆಗೆ ಎಲ್ಲ ಪ್ರಯತ್ನಗಳೂ ವಿಫಲವಾಗಿದೆ. ನೀವೇ ದಾರಿ ತೋರಬೇಕು.

ಜಗದೀಶ್ ಕೆ.ಎಲ್, ರಾಣೆಬೆನ್ನೂರು

ಸದ್ಯ ರಾಹುವಿನ ಗೋಚಾರ ಸರಿಯಿಲ್ಲ ಮತ್ತು ಅದೇ ದೆಸೆಯಲ್ಲಿ ಭಾಗ್ಯದ ದುಸ್ಥ ಶನಿ-ಕುಜ ಸಂಚಾರವಿದೆ. ವರ್ಷಾಂತ್ಯದಲ್ಲಿ ಆಗುವುದು. ಪ್ರಯತ್ನದಲ್ಲಿರಿ. ತಿರುಮಲ ಬೆಟ್ಟ ನಡಿಗೆ ಹತ್ತಿ ಸ್ವಾಮಿ ದರ್ಶನ ಮಾಡಿ, ಹಾಗೇ ಬರುವಾಗ ಕಾಳಹಸ್ತಿಯಲ್ಲಿ ರಾಹು ಶಾಂತಿ ಪೂಜೆ ಮಾಡಿಸಿ.

*ಆದ ಮದುವೆಯಿಂದ ಸರಿ ಹೊಂದುತ್ತಿಲ್ಲ. ಏನು ಮಾಡಲಿ ತಿಳಿಯುತ್ತಿಲ್ಲ.

ಶೀತಲ್ ಪಾಟೀಲ್, ಧಾರವಾಡ

ಜಾತಕಗಳ ಪರಿಶೀಲಿಸಿ ಆಪ್ತ ಸಲಹೆಯನ್ನು ಕುಟುಂಬದ ಹಿರಿಯರು ಮಾಡಿಸಬೇಕು. ಅವರಲ್ಲಿ ನಿಮ್ಮ ವೇದನೆ ಮಾತುಕತೆ ಮೂಲಕ ವಿನಿಮಯ ಮಾಡಬೇಕು. ಜಗಳ ಆಡೋದರಿಂದ ಪ್ರಯೋಜನವಿಲ್ಲ. ಹಾಗೆಯೇ ಉತ್ತಮ ಮನೋ ವೈದ್ಯರನ್ನೂ ಕಾಣುವ ಅಗತ್ಯವಿದೆ.

*ಎಂಜಿನಿಯರ್ ಆಗೋ ಆಸೆ ನೆರವೇರುತ್ತಿಲ್ಲ. ಮುಂದೆ ಏನು ಮಾಡಲಿ ಗುರುಗಳೇ?
ಶಿಲ್ಪಾ ಎಂ.ಎನ್‌. ರೋಣ
ಎಂಜಿನಿಯರಿಂಗ್ ಮಾಡದಿರಲು ನಿಮ್ಮ ಆರ್ಥಿಕತೆ ಕಾರಣವಲ್ಲ. ನೀವು ಅದಕ್ಕೆ ಸಿದ್ಧತೆ ನಡೆಸಿರುವುದು ಸಾಕಾಗೋಲ್ಲ! ಈಗಲೂ ಸಮಯವಿದೆ. ಚೆನ್ನಾಗಿ ಪ್ರಿಪೇರ್ ಆಗಿ-ಬ್ಯಾಂಕ್‌ನಿಂದ ಶಿಕ್ಷಣ ಸಾಲ ಪಡೆಯಬಹುದು, ಇತರೆ ವ್ಯವಸ್ಥೆಯೂ ಆಗುವುದು. ಗುರು-ಬುಧರ ವಿರುದ್ಧಾವಸ್ಥೆಯ ಜಾತಕ ನಿಮ್ಮದು. ಹೆಚ್ಚಿನ ಪ್ರಯತ್ನ, ವಿಶ್ವಾಸ ಬೆಳೆಸಿಕೊಳ್ಳಿ. ಪ್ರತಿ ಗುರುವಾರ ಶ್ರೀ ದತ್ತ ಚರಿತ್ರೆ ಓದಿ (ಉಪವಾಸವಿದ್ದು) ಹಾಗೆ ಪ್ರತಿ ತಿಂಗಳ ಒಂದು ಗುರುವಾರ ಗಾಣಗಾಪುರ ದರ್ಶನ ಸೇವೆ ಮಾಡುತ್ತಿರಿ. ದಾರಿಯಾದ ಮೇಲೂ ಆ ದತ್ತನ ಮರೆಯದಿರಿ!


Viewing all articles
Browse latest Browse all 6795

Trending Articles



<script src="https://jsc.adskeeper.com/r/s/rssing.com.1596347.js" async> </script>