Quantcast
Channel: VijayKarnataka
Viewing all articles
Browse latest Browse all 6795

ಟಿಟಿಡಿಯಿಂದ 1,311 ಕೆ.ಜಿ. ಚಿನ್ನ ಡಿಪಾಸಿಟ್‌

$
0
0

ಚೆನ್ನೈ: ಕೇಂದ್ರ ಸರಕಾರದ ಮಹತ್ವಾಕಾಂಕ್ಷೆಯ 'ಚಿನ್ನ ನಗದೀಕರಣ ಯೋಜನೆ' ಅಡಿಯಲ್ಲಿ ತಿರುಪತಿ ತಿರುಮಲ ದೇವಾಲಯ 1,311 ಕೆ.ಜಿ. ಚಿನ್ನವನ್ನು ಸಾರ್ವಜನಿಕ ವಲಯದ ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ನಲ್ಲಿ ಠೇವಣಿ ಇರಿಸಿದೆ.

ದೇವಾಲಯ ಆಡಳಿತ ಮಂಡಳಿ ಮಂಗಳವಾರ ಈ ವಿಷಯ ತಿಳಿಸಿದ್ದು, ನಿಯಮಾವಳಿಗಳ ವಿಚಾರದಲ್ಲಿ ತಮ್ಮ ಬೇಡಿಕೆಗಳಿಗೆ ಒಪ್ಪಿದ್ದಾದರೆ ಮತ್ತಷ್ಟು ಚಿನ್ನವನ್ನು ಡಿಪಾಸಿಟ್‌ ಮಾಡುವ ಇಂಗಿತವನ್ನು ಟಿಟಿಡಿ ವ್ಯಕ್ತಪಡಿಸಿದೆ.

ಮೂರು ವರ್ಷಗಳ ಅಲ್ಪಾವಧಿ ಯೋಜನೆಯಡಿ ವಾರ್ಷಿಕ ಶೇ. 1.75ರ ಬಡ್ಡಿದರದಲ್ಲಿ ಚಿನ್ನವನ್ನು ಠೇವಣಿ ಇರಿಸಲಾಗಿದೆ. ಉತ್ತಮ ಬಡ್ಡಿದರದ ಹಿನ್ನೆಲೆಯಲ್ಲಿ ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ ಆರಿಸಿಕೊಂಡದ್ದಾಗಿ ಟಿಟಿಡಿ ಕಾರ್ಯಕಾರಿ ಅಧಿಕಾರಿ ಸಾಂಬಶಿವ ರಾವ್‌ ತಿಳಿಸಿದ್ದಾರೆ.

ಅಲ್ಪಾವಧಿ ಯೋಜನೆಯಡಿ ಇರಿಸಲಾದ ಚಿನ್ನದ ಠೇವಣಿಗೆ, ನಗದಿನ ಬದಲಿಗೆ ಚಿನ್ನವನ್ನೇ ಬಡ್ಡಿ ರೂಪದಲ್ಲಿ ಪಡೆಯುವ ಅವಕಾಶವಿದೆ. ಆದರೆ, ಮಧ್ಯಮ ಮತ್ತು ದೀರ್ಘಕಾಲೀನ ಠೇವಣಿಗಳ ವಿಚಾರದಲ್ಲೂ ನಿಯಮಗಳನ್ನು ಸಡಿಲಿಸುವಂತೆ ಆರ್‌ಬಿಐ ಹಾಗೂ ಕೇಂದ್ರ ಸರಕಾರಕ್ಕೆ ಟಿಟಿಡಿ ಪತ್ರ ಬರೆದಿದೆ.

''ನಮ್ಮ ಬೇಡಿಕೆಗೆ ಆರ್‌ಬಿಐ ಹಸಿರು ನಿಶಾನೆ ತೋರಿದಲ್ಲಿ, ಈಗಿರುವ ಠೇವಣಿಗಳ ಜತೆಗೆ ಮತ್ತಷ್ಟು ಮಧ್ಯಮಾವಧಿ ಮತ್ತು ದೀರ್ಘಾವಧಿ ಚಿನ್ನ ಠೇವಣಿ ಮಾಡಲಾಗುವುದು,'' ಎಂದು ರಾವ್‌ ತಿಳಿಸಿದ್ದಾರೆ.


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಮುಕೇಶ್ ಅಂಬಾನಿಯವರ ಮೊದಲ ಮನೆ ಹೇಗಿದೆ ಗೊತ್ತಾ?


ಜಮೀನಿನಲ್ಲೇ ಘೋರ ದುರಂತ: ನೀರು ತುಂಬಿದ್ದ ಗುಂಡಿಗೆ ಬಿದ್ದು ಮೂವರು ಸಾವು


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


ವಚನಗಳಿಂದ ಸಂಗೀತ ಲೋಕ ಶ್ರೀಮಂತ


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ತುಳು ತೆರೆಗೆ ಸೋನಿಯಾ ಎಂಟ್ರಿ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್



<script src="https://jsc.adskeeper.com/r/s/rssing.com.1596347.js" async> </script>