Quantcast
Channel: VijayKarnataka
Viewing all articles
Browse latest Browse all 6795

ಕುಂಟುತ್ತಿರುವ ರೈಲ್ವೆ ಯೋಜನೆಗಳು

$
0
0

ವಿಳಂಬದಿಂದ ಯೋಜನೆಗಳ ವೆಚ್ಚ ಏರಿಕೆ / ಇದು ರೈಲ್ವೆ ಸಿಬ್ಬಂದಿಯ ವಾರ್ಷಿಕ ಸಂಬಳಕ್ಕೆ ಸಮ
ಹೊಸದಿಲ್ಲಿ: ರೈಲ್ವೆ ಯೋಜನೆಗಳಲ್ಲಿನ ವಿಳಂಬದ ಪರಿಣಾಮ ಇಲಾಖೆಯ ವೆಚ್ಚದಲ್ಲಿ 1.07 ಲಕ್ಷ ಕೋಟಿ ರೂ. ಏರಿಕೆಯಾಗಿದೆ. ಇದು ರೈಲ್ವೆ ಸಿಬ್ಬಂದಿಯ(30 ಲಕ್ಷ ಉದ್ಯೋಗಿಗಳು) 1 ವರ್ಷದ ವೇತನಕ್ಕೆ ಸಮವಾದ ಮೊತ್ತವಾಗಿದೆ ಎಂದು ನಿಯಂತ್ರಕರು ಮಹಾ ಲೆಕ್ಕ ಪರಿಶೋಧಕರ(ಸಿಎಜಿ) ವರದಿಯಲ್ಲಿ ಹೇಳಲಾಗಿದೆ.

ಈ ಮೊದಲು ಬಜೆಟ್‌ಗಳಲ್ಲಿ ಹೊಸ ಹೊಸ ಯೋಜನೆಗಳನ್ನು ಘೋಷಿಸುತ್ತಾ ಬಂದರೇ ಹೊರತು, ಅವುಗಳ ಕಾರ್ಯರೂಪಕ್ಕೆ ಪ್ರಯತ್ನಗಳು ನಡೆಯಲಿಲ್ಲ. ಆರಂಭವಾದ ಯೋಜನೆಗಳು ಅಪೂರ್ಣವಾಗಿದ್ದು ರೈಲ್ವೆ ಇಲಾಖೆ ಮೇಲೆ ನಷ್ಟದ ಹೊರೆಬಿದ್ದಿದೆ.

ಐದು ವರ್ಷಗಳಲ್ಲಿ(2009-14) ರೈಲ್ವೆ ಇಲಾಖೆಯಲ್ಲಿನ ಯೋಜನೆಗಳ ಸ್ಥಿತಿಗತಿ ಕುರಿತು ಸಿಎಜಿ ವರದಿ ಸಿದ್ಧಪಡಿಸಿದೆ. ವರದಿ ಪ್ರಕಾರ - ಹೊಸ ರೈಲ್ವೆ ಹಳಿಗಳು, ಗೇಜ್ ಪರಿವರ್ತನೆ, ಡಬ್ಲಿಂಗ್ ಸೇರಿದಂತೆ 442 ಅಪೂರ್ಣ ಯೋಜನೆಗಳ ಪೈಕಿ 156 ಯೋಜನೆಗಳಷ್ಟೆ ನಿಗದಿತ ಅವಧಿಯಲ್ಲಿ ಮುಕ್ತಾಯವಾಗಿವೆ. ಆದರೆ, ನಿಗದಿತ ಗುರಿ ಹೊರತಾಗಿಯೂ 75 ಯೋಜನೆಗಳು ಅಪೂರ್ಣವಾಗಿವೆ. ಡೆಡ್‌ಲೈನ್ ಮೀರಿ 15 ವರ್ಷ ಕಳೆದಿದ್ದರೂ ಯೋಜನೆಗಳು ಪೂರ್ಣಗೊಂಡಿಲ್ಲ.

2014ರ ಮಾರ್ಚ್ ಹೊತ್ತಿಗೆ ಈ ಯೋಜನೆಗಳನ್ನು ಪೂರ್ಣಗೊಳಿಸಲು ರೈಲ್ವೆ ಇಲಾಖೆಗೆ 1.86 ಲಕ್ಷ ಕೋಟಿ ರೂ.ಗಳ ಅಗತ್ಯ ಕಂಡು ಬಂದಿತ್ತು. ಸುದೀರ್ಘ ಕಾಲದಿಂದ ಯೋಜನೆಗಳು ನನೆಗುದಿಗೆ ಬಿದ್ದಿರುವ ಕಾರಣ, ಯೋಜನಾ ವೆಚ್ಚ ಹೆಚ್ಚಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಮೂರು ಯೋಜನೆಗಳಂತೂ 30 ವರ್ಷ ಕಳೆದರೂ ಅಪೂರ್ಣವಾಗಿಯೇ ಉಳಿದಿವೆ. 22 ಯೋಜನೆಗಳಿಗೆ 16 ವರ್ಷಗಳ ಹಿಂದೆಯೇ ಅನುಮೋದನೆ ಸಿಕ್ಕಿದ್ದರೂ ಆರಂಭವೇ ಆಗಿಲ್ಲ.

ಕೇವಲ ಶೇ.30 ಯೋಜನೆಗಳಿಗಷ್ಟೆ ಹಣಕಾಸು ಲಭ್ಯವಿದ್ದು, ಉಳಿದ ಯೋಜನೆಗಳಿಗೆ ಹಣವೇ ಇಲ್ಲ. ಆದರೂ ಪ್ರತಿ ವರ್ಷ ಹೊಸ ಯೋಜನೆಗಳನ್ನು ರೈಲ್ವೆ ಇಲಾಖೆ ಘೋಷಿಸುತ್ತಲೇ ಬಂದಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಆಮೆ ವೇಗದ ಯೋಜನೆಗಳಿಗೆ ಒಂದು ಸ್ಯಾಂಪಲ್

ಪಂಜಾಬ್‌ನ ನಂಗಾಲ್ ಅಣೆಕಟ್ಟೆಯಿಂದ ತಲ್ವಾರಗೆ 83.74 ಕಿ.ಮೀನ ರೈಲ್ವೆ ಮಾರ್ಗದ ಕಾಮಗಾರಿಗೆ 34 ವರ್ಷಗಳ ಹಿಂದೆ ಅನುಮೋದನೆ ಸಿಕ್ಕಿತ್ತು. ಈ ಪೈಕಿ 43.91 ಕಿ.ಮೀ ಕಾಮಗಾರಿಯು 9 ವರ್ಷಗಳ ನಂತರ ಪೂರ್ಣಗೊಂಡಿತು. ಎರಡನೇ ಹಂತದ ಕಾಮಗಾರಿಯು ಏಳು ವರ್ಷಗಳ ತರುವಾಯ ಆರಂಭವಾಯಿತು. ಆದರೆ, ಹಣಕಾಸಿನ ಕೊರತೆಯಿಂದಾಗಿ ನನೆಗುದಿಗೆ ಬಿತ್ತು. 2014ರ ಮಾರ್ಚ್‌ನಲ್ಲಿ ಯೋಜನೆಗೆ 383.89 ಕೋಟಿ ರೂ. ಬಿಡುಗಡೆಯಾಗಿದ್ದು, 46 ಕಿ.ಮೀಗಳ ಕಾಮಗಾರಿ ಅಪೂರ್ಣವಾಗಿಯೇ ಉಳಿದಿದೆ.

ಸ್ಪಷ್ಟ ಪರಿಕಲ್ಪನೆ, ನಿರ್ದಿಷ್ಟ ಯೋಜನೆ ಮತ್ತು ಲೆಕ್ಕಾಚಾರ, ಸಿದ್ಧತೆ ಹಾಗೂ ಹಣಕಾಸು ಚೈತನ್ಯವಿಲ್ಲದೆ ರೈಲ್ವೆ ಇಲಾಖೆಯ ಯೋಜನೆಗಳು ಹೇಗೆ ಸೊರಗುತ್ತಿವೆ ಅನ್ನುವುದಕ್ಕೆ ಸಾಕಷ್ಟು ನಿದರ್ಶನಗಳನ್ನು ಸಿಎಜಿ ವರದಿಯಲ್ಲಿ ಪ್ರಸ್ತಾಪಿಸಲಾಗಿದೆ.


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಮುಕೇಶ್ ಅಂಬಾನಿಯವರ ಮೊದಲ ಮನೆ ಹೇಗಿದೆ ಗೊತ್ತಾ?


ಜಮೀನಿನಲ್ಲೇ ಘೋರ ದುರಂತ: ನೀರು ತುಂಬಿದ್ದ ಗುಂಡಿಗೆ ಬಿದ್ದು ಮೂವರು ಸಾವು


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


ವಚನಗಳಿಂದ ಸಂಗೀತ ಲೋಕ ಶ್ರೀಮಂತ


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ತುಳು ತೆರೆಗೆ ಸೋನಿಯಾ ಎಂಟ್ರಿ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್