Quantcast
Channel: VijayKarnataka
Viewing all articles
Browse latest Browse all 6795

ಸುದೀಪ್‌ಗೆ ಕೈಕೊಟ್ಟ ವರ್ಮಾ

$
0
0

ನಿರ್ದೇಶಕ ರಾಮ್‌ಗೋಪಾಲ್‌ ವರ್ಮಾ ಅವರ ಅಪ್ಪ ಸಿನಿಮಾ ಮತ್ತೆ ಸುದ್ದಿ ಮಾಡಿದೆ. ಅಂದುಕೊಂಡಂತೆ ಆಗಿದ್ದರೆ ಈ ಚಿತ್ರಕ್ಕೆ ಸುದೀಪ್‌ ಹೀರೋ ಆಗಬೇಕಿತ್ತು. ಹಾಗಂತ ಸ್ವತಃ ವರ್ಮಾ ಅವರೇ ಹೇಳಿಕೊಂಡಿದ್ದರು. ಸುದೀಪ್‌ ಬರ್ತ್ ಡೇ ದಿನದಂದೇ ಈ ಚಿತ್ರಕ್ಕೆ ಅಪ್ಪ ಎಂದು ಹೆಸರಿಟ್ಟಿದ್ದರು. ಈಗ ಸುದೀಪ್‌ರನ್ನು ಕೈಬಿಟ್ಟು ಆ ಸ್ಥಾನಕ್ಕೆ ವಿವೇಕ್‌ ಒಬೆರಾಯ್‌ ಅವರನ್ನು ಕರೆತಂದಿದ್ದಾರೆ. ಈ ಕುರಿತು ವರ್ಮಾ ಸ್ಪಷ್ಟನೆಯನ್ನೂ ಕೊಟ್ಟಿದ್ದಾರೆ.

'ಈ ಮೊದಲು ಲೀಡ್‌ ರೋಲ್‌ ಅನ್ನು ಸುದೀಪ್‌ ಅವರಿಂದ ಮಾಡಿಸಬೇಕು ಅಂದುಕೊಂಡಿದ್ದೆ. ಅವರು ಕೂಡ ಒಪ್ಪಿಕೊಂಡಿದ್ದರು. ಹಲವು ಕಾರಣಗಳಿಂದಾಗಿ ಸದ್ಯ ಅವರ ಜತೆ ಕೆಲಸ ಮಾಡಲು ಆಗುತ್ತಿಲ್ಲ. ಹೀಗಾಗಿ ಟೈಟಲ್‌ ರೋಲ್‌ ಅನ್ನು ವಿವೇಕ್‌ ಒಬೆರಾಯ್‌ ನಿರ್ವಹಿಸುತ್ತಿದ್ದಾರೆ. ಈ ಚಿತ್ರಕ್ಕೆ ಮೇ 1ರಿಂದ ಚಾಲನೆ ಸಿಗಲಿದೆ' ಅಂದಿದ್ದಾರೆ ವರ್ಮಾ.

ಇದು ಮುತ್ತಪ್ಪ ರೈ ಜೀವನವನ್ನು ಆಧರಿಸಿದ ಚಿತ್ರ ಎನ್ನಲಾಗುತ್ತಿದೆ. ಹೀಗಾಗಿಯೇ ರೈ ಅವರನ್ನು 'ದಿ ಗ್ರೇಟೆಸ್ಟ್‌ ಗ್ಯಾಂಗ್‌ಸ್ಟರ್‌ ಎವರ್‌' ಎಂದು ಕರೆದಿದ್ದಾರೆ ವರ್ಮಾ. ಅಲ್ಲದೇ ಕನಸಿನ ಸಿನಿಮಾದ ಬಗ್ಗೆ ಹಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ. ಅಚ್ಚರಿಯೆಂದರೆ ವರ್ಮಾ ಅವರ ಈ ನಡೆಗೆ ಸುದೀಪ್‌ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇದರಿಂದಾಗಿ ಸಹಜವಾಗಿಯೇ ಸುದೀಪ್‌ ಅಭಿಮಾನಿಗಳಿಗೆ ಬೇಸರವಾಗಿದೆ.


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಬಿಗ್‌ ನ್ಯೂಸ್: ದ್ವಿತೀಯ ಪಿಯು ಪರೀಕ್ಷೆ ಫಲಿತಾಂಶ ಪ್ರಕಟ -‌ ಈ ಬಾರಿಯೂ...


 ಕೌಟುಂಬಿಕ ಕಲಹ ಹಿನ್ನೆಲೆ; ಬುದ್ದಿವಾದ ಹೇಳಿದ ತಂಗಿಯನ್ನೇ ಕೊಂದ ಅಣ್ಣ…


ಗುರು ರಾಘವೇಂದ್ರರ ದಿನದ ಭವಿಷ್ಯ ಹಾಗೂ ರಾಶಿ ಫಲ


‘ಒಡಕು ಮೂಡಿಸಿದ ಸಿದ್ಧರಾಮಯ್ಯ’


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ತುಳು ತೆರೆಗೆ ಸೋನಿಯಾ ಎಂಟ್ರಿ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್



<script src="https://jsc.adskeeper.com/r/s/rssing.com.1596347.js" async> </script>