Quantcast
Channel: VijayKarnataka
Viewing all articles
Browse latest Browse all 6795

ಹೀರೋ ಆದ ರವಿಶಂಕರ್‌

$
0
0

ಕನ್ನಡದಲ್ಲಿ ವಿಲನ್‌ ಆಗಿ ಹೆಸರು ಮಾಡಿರುವ ನಟ ರವಿಶಂಕರ್‌ ಈಗ ಹೀರೋ. ಹಲವು ವರ್ಷಗಳಿಂದ ನಾಯಕನಾಗುವ ಕನಸು ಹೊತ್ತುಕೊಂಡಿದ್ದ ಅವರನ್ನು ಹೀರೋ ಮಾಡುತ್ತಿರುವುದು ನಿರ್ದೇಶಕ ಶ್ರೀನಿವಾಸ ರಾಜು.

ಇತ್ತೀಚೆಗೆ ಕತೆ, ಚಿತ್ರಕತೆ, ನಿರ್ದೇಶನ ಪುಟ್ಟಣ್ಣ ಚಿತ್ರದಿಂದ ಯಶಸ್ಸನ್ನು ಕಂಡ ನಿರ್ದೇಶಕ ಶ್ರೀನಿವಾಸ ರಾಜು ಈಗ ಇನ್ನೊಂದು ವಿಭಿನ್ನ ಸಿನಿಮಾ ಕೈಗೆತ್ತಿಕೊಂಡಿದ್ದಾರೆ. ಈ ಹಿಂದಿನ ಸಿನಿಮಾದಂತೆಯೇ ಇದಕ್ಕೂ ಉದ್ದ ಹೆಸರನ್ನು ಆಯ್ಕೆ ಮಾಡಿರುವುದು ವಿಶೇಷ. ಹೊಸ ಚಿತ್ರಕ್ಕೆ 'ಸುರಭಿ.. ಕೇರ್‌ ಆಫ್‌ ಸುಬ್ಬು ಡ್ರಾಮಾ ಕಂಪನಿ' ಎಂದು ಹೆಸರಿಟ್ಟಿದ್ದು, ಹೀರೋ ಆಗಿ ರವಿಶಂಕರ್‌ ನಟಿಸಲಿದ್ದಾರೆಂದು ಗೊತ್ತಾಗಿದೆ.

ನಟ ಸಾಯಿ ಕುಮಾರ್‌ ಸಹೋದರರಾದ ರವಿಶಂಕರ್‌ ಡಬ್ಬಿಂಗ್‌ ಆರ್ಟಿಸ್ಟ್‌ ಆಗಿ ಖ್ಯಾತಿ ಗಳಿಸಿದ ನಂತರ ಪೋಷಕ ಪಾತ್ರಗಳಲ್ಲಿ ಮಿಂಚತೊಡಗಿದ್ದರು. ಇವರಿಗೆ ಬ್ರೇಕ್‌ ನೀಡಿದ್ದು ಕೆಂಪೇಗೌಡ ಚಿತ್ರ. ಈಗ ತಮ್ಮ 50ನೇ ವಯಸ್ಸಿನಲ್ಲಿ ನಾಯಕ ಆಗುವ ಕನಸನ್ನು ನನಸು ಮಾಡಿಕೊಳ್ಳುತ್ತಿದ್ದಾರೆ ರವಿಶಂಕರ್‌.

ಮೊದಲು ಖಳನಾಯಕರಾಗಿ ಬಂದು ನಂತರ ಹೀರೋ ಆದವರ ದೊಡ್ಡ ಪಟ್ಟಿಯೇ ಇದೆ. ಈಗ ಈ ಲಿಸ್ಟಿಗೆ ರವಿಶಂಕರ್‌ ಕೂಡ ಸೇರಲಿದ್ದಾರೆ.


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಮುಕೇಶ್ ಅಂಬಾನಿಯವರ ಮೊದಲ ಮನೆ ಹೇಗಿದೆ ಗೊತ್ತಾ?


ಜಮೀನಿನಲ್ಲೇ ಘೋರ ದುರಂತ: ನೀರು ತುಂಬಿದ್ದ ಗುಂಡಿಗೆ ಬಿದ್ದು ಮೂವರು ಸಾವು


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


ವಚನಗಳಿಂದ ಸಂಗೀತ ಲೋಕ ಶ್ರೀಮಂತ


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ತುಳು ತೆರೆಗೆ ಸೋನಿಯಾ ಎಂಟ್ರಿ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್



<script src="https://jsc.adskeeper.com/r/s/rssing.com.1596347.js" async> </script>