Quantcast
Channel: VijayKarnataka
Viewing all articles
Browse latest Browse all 6795

ದಾರಿ ದೀಪ: ಶುಭ ಗ್ರಹರಿದ್ದರೆ ಮಾತ್ರ ವಿದೇಶಯಾನ ಸುಲಭ

$
0
0

*ಅಣ್ಣನಿಗೆ ಮದುವೆ ಆಗೋದು ತಡ, ತಮ್ಮ ಆಗಬಹುದೇ ಗುರುಗಳೇ? ವಿಜಯ ವಿಕಾಸ್, ದೊಮ್ಮಲೂರು
ಹಿರಿಯ ಸಹೋದರ, ಅಕ್ಕ, ತಂಗಿಯರು ಮದುವೆಗೆ ಬಂದೂ ಆಗಿಲ್ಲದಿದ್ದರೆ, ಕಿರಿಯರಿಗೆ ಮಾಡುವುದು ಸಂಪ್ರದಾಯ ಒಪ್ಪದು. ಆದರೆ ವಯೋ ಕಾರಣ, ಕೌಟುಂಬಿಕ ಕಾರಣಾಂತರ, ಶಾರೀರಿಕ ನ್ಯೂನತೆ ಇತ್ಯಾದಿ ಆಪತ್ ಸ್ಥಿತಿಗಳಲ್ಲಿ ಕಿರಿಯರಿಗೆ ಮಾಡುವುದು (ಮದುವೆ, ಉಪನಯನ) ಸಂಪತ್‌ಕಾರಕ ಎಂದೇ ಶಾಸ್ತ್ರಗಳು ಹೇಳಿವೆ.

*ವಿದೇಶದಲ್ಲಿ ಕೆಲಸ ಮಾಡಬೇಕೆಂದು ಯತ್ನ, ಆಗುವುದೇ ಹೇಳಿ? ಸಂಗಮೇಶ, ಓಂಶುಗರ್
ಕರ್ಮಾಧಿಪ ಶನಿ ಉತ್ತಮನಾಗಿದ್ದು, ಅಥವಾ ಕರ್ಮದಲ್ಲಿ ತುಲಾ, ವೃಶ್ಚಿಕ, ಧನು, ಮಕರಗಳಲ್ಲಿ ಶುಭಗ್ರಹರಿದ್ದರೆ ಮಾತ್ರ ವಿದೇಶಯಾನ, ಕೆಲಸಾದಿಗಳು ಆಗುವುದು. ನಿಮ್ಮ ಸದ್ಯದ ಶನಿ-ನೀಚ ದೆಸೆಯಲ್ಲಿ ಈ ಯತ್ನ ಸುಲಭದಲ್ಲಾಗದು. ಇರುವುದನ್ನು ಶ್ರದ್ಧೆಯಿಂದ ಮುಂದುವರಿಸಿ.

*ಮದುವೆ ಆಗಿ ಸಂಬಂಧ ಸರಿಯಾಗಲಿಲ್ಲ. ಈಗ ಓದು ನಿಂತಿದೆ. ಏನು ಮಾಡಲಿ ಗುರುಗಳೇ? ವಿಭಾಶ್ರೀ, ಕಡೂರು
ಪ್ರಾರಬ್ಧಂ ಹಿ ಬಲವತ್ತರಂ! ಬಹಳ ಜಟಿಲ ಜೀವನದ ನಡೆ. ಮೂರೇ ತಿಂಗಳಲ್ಲಿ ಮದುವೆ ಮುರಿದಿದೆ. ಅದೆಷ್ಟು ಅವಾಂತರ ಮಾಡಿದೆ! ಹಣವಂತ ಕುಟುಂಬ ಹುಡುಗನದ್ದು, ಆದರೆ ಸದ್ಗುಣಿಯಲ್ಲ. ಚಿಂತಿಸಿ ಮಾಡುವುದೇನು? ಅನುಭವವೆಂದು ಮುನ್ನಡೆಯಿರಿ. ಪುನಃ ಸದ್ಯಕ್ಕೆ ಮದುವೆ ಬೇಡ. ಬೇರೆ ಊರಿನಲ್ಲಿ ಉನ್ನತ ಶಿಕ್ಷಣಕ್ಕೆ ಸೇರಿ ಯಶಸ್ವಿಯಾಗುವಿರಿ. ಮುಂದೆ ಗುರು ದೆಸೆ ಬಂದು ಒಳ್ಳೆಯದೇ ಆಗುವುದು.

*ಎಂಕಾಂ ಮಾಡಿದ್ದೇನೆ. ಸರಕಾರಿ ಕೆಲಸಕ್ಕೆ ಯತ್ನ ಬೇಗ ಆಗುತ್ತಿಲ್ಲ. ಕಾರಣ, ಪರಿಹಾರ ಹೇಳಿ. ದೀಕ್ಷಾ, ಬೆಂಗಳೂರು
ಸದ್ಯ ಜನ್ಮ ರಾಹುವಿನ ದೆಸೆಯಿದ್ದು ಕಾರ್ಯ ವಿಳಂಬ. ಅಸಮಾಧಾನಗಳೇ ಹೆಚ್ಚುವವು. ಮದುವೆಗೆ ಏನು ಚಿಂತನೆ ಇದೆ? ಅದನ್ನು ಸ್ಪಷ್ಟ ಮಾಡಿಕೊಂಡು, ಸಿಕ್ಕ ಕೆಲಸ ತಕ್ಕ ಹಾಗೆ ಮಾಡುತ್ತಾ ಸಾಗಿರಿ. ಅಶ್ವತ್ಥ-ಆಂಜನೇಯ ದೇವರ ಪೂಜಾ ಸೇವೆಯಿಂದ ಉನ್ನತಿ.

*ಸ್ಟಾಕ್ ಮಾರ್ಕೆಟ್ ಕೆಲಸ, ಬಹಳ ತ್ರಾಸ ಆಗಿದೆ. ವಿವರ ಕೊಟ್ಟಿರುವೆ. ಪರಿಹಾರ ಹೇಳಿ ಗುರೂಜಿ. ಉತ್ತಮ್ ಕುಮಾರ್, ಬೆಳಗಾವಿ
ನಿಮ್ಮ ಕಾರ್ಯ ಕಲಾಪಗಳಿಗೆ ಬುಧನೂ-ಶನಿಯೂ ಅಧಿಗ್ರಹರಾಗಿ, ಶುಕ್ರ ಬಲವಿದ್ದರೆ ಮಾತ್ರ ಒಳ್ಳೆಯ ಫಲ. ಸದ್ಯ ನಿಮಗೆ ಬಾಧಾ ಶುಕ್ರ ಭುಕ್ತಿಯಿದ್ದು ದೋಷಕರವಾಗಿದೆ. ಶ್ರೀ ನರಸಿಂಹ ಕ್ಷೇತ್ರ ದರ್ಶನ, ಮನೆಯಲ್ಲಿ ದುರ್ಗಾ ಪಾರಾಯಣೆಗಳಿಂದ ಶಾಂತಿ, ಸಮಾಧಾನ.


Viewing all articles
Browse latest Browse all 6795

Trending Articles



<script src="https://jsc.adskeeper.com/r/s/rssing.com.1596347.js" async> </script>