Quantcast
Channel: VijayKarnataka
Viewing all articles
Browse latest Browse all 6795

ಭೂಕಂಪನಕ್ಕೆ ಕುಜ ಗ್ರಹ ಕಾರಣ

$
0
0

* ಪ್ರಕಾಶ ಬಾಬು ಕೆ.ಆರ್
ಚಂಡಮಾರುತ, ಸುಂಟರಗಾಳಿ, ಜ್ವಾಲಾಮುಖಿ ಮೊದಲಾದ ನೈಸರ್ಗಿಕ ಪ್ರಕೋಪಗಳ ಪೈಕಿ ಭೂಕಂಪ ಕೂಡ ಒಂದು ಪ್ರಕೋಪವೇ.

ಆದರೆ ಭೂಕಂಪ ಯಾಕಾಗುತ್ತದೆ ಎಂದು ಹುಡುಕಲು ಹೊರಟರೆ ಭೂಮಿಯ ಉಗಮದ ಹಿಂದೆ ಹೋಗಬೇಕು. ಹಿಂದೆ ಈ ಭೂಮಿ ಇರುವ ಭಾಗವೆಲ್ಲ ಗೊಂಡ್ವಾನ ಎಂಬ ಒಂದೇ ಖಂಡವಾಗಿತ್ತು. ಕಾಲಾಂತರದಲ್ಲಿ ಇವೆಲ್ಲ ತುಂಡು ತುಂಡಾಗಿ ಅತ್ತಿತ್ತ ಚಲಿಸಿದ ಕಾರಣ ಇಂದಿನ ಖಂಡಗಳ ರೂಪ ಪಡೆದಿದೆ. ಭಾರತ ಇರುವ ಭೂಭಾಗ ಅಂದು ಈಗ ಅಂಟಾರ್ಕಟಿಕಾ ಖಂಡವಿರುವ ಭಾಗದಿಂದ ನೇರ ಉತ್ತರಕ್ಕೆ ಚಲಿಸಿ ರಷ್ಯಾ ಇರುವ ಭಾಗಕ್ಕೆ ಡಿಕ್ಕಿ ಹೊಡೆಯಿತು. ಈ ಡಿಕ್ಕಿಯ ಪರಿಣಾಮ ಹಿಮಾಲಯ ಪರ್ವತ ಶ್ರೇಣಿ ಉಗಮವಾಯಿತು. ಈ ಚಲನೆ ಭೂಪದರಗಳು ಒಂದರ ಮೇಲೊಂದು ಜಾರುತ್ತಾ ಹೋದಂತೆ ಇರುತ್ತದೆ. ಭೂಮಿಯಾಳದಲ್ಲಿ ಈ ಚಲನೆ ಇಂದಿಗೂ ಜೀವಂತವಾಗಿದೆ. ಈ ಪದರಗಳು ನಯವಾಗಿದ್ದು, ತಡೆಯಿಲ್ಲದಿದ್ದರೆ ತೊಂದರೆಯಿಲ್ಲ. ಜಾರುತ್ತಾ ಮುನ್ನಡೆಯುತ್ತದೆ. ಆದರೆ ಕೆಲವೆಡೆ ಈ ಚಲನೆಗೆ ತಡೆಯಾಗುತ್ತದೆ. ಆದರೆ ನಿಧಾನವಾಗಿ ಒತ್ತಡ ಹೆಚ್ಚುತ್ತಾ ಒಂದು ದಿನ ತಾಳಿಕೊಳ್ಳುವ ಮಿತಿಮೀರಿ ಒಂದು ಪದರ ಮೇಲೇಳುತ್ತದೆ.ಇದೇ ಕ್ಷಣದಲ್ಲಿ ಸಂಭವಿಸಿದ ಅದುರುವಿಕೆಗೆ ಎಷ್ಟೋ ಕಿ.ಮೀ ಮೇಲಿರುವ ಭೂಮಿಯ ಮೇಲ್ಮೈ ಸಹ ಅದುರತ್ತದೆ. ಇದೇ ಭೂಕಂಪ. ಯಾವುದೇ ಭೂಕಂಪ ಒಂಟಿಯಾಗಿ ಬರುವುದಿಲ್ಲ. ದೊಡ್ಡ ಭೂಕಂಪ ಸಂಭವಿಸುವ ಮೊದಲು ಹಲವು ಚಿಕ್ಕ ಚಿಕ್ಕ ಕಂಪನಗಳೂ ಸಂಭವಿಸುತ್ತವೆ.

ರವಿ ಮತ್ತು ಚಂದ್ರ ಗ್ರಹ:

ಭೂಕಂಪನಕ್ಕೆ ಚಂದ್ರ ಮತ್ತು ರವಿಯ ಗುರುತ್ವಾಕರ್ಷಣೆಯೂ ಕಾರಣವಾಗಿದೆ. ಸಮುದ್ರದ ಅಲೆಗಳಿಗೆ ಕಾರಣವಾಗುವ ಈ ಶಕ್ತಿಯೇ ಭೂಮಿಯ ಮೇಲ್ಮೈ ಮೇಲೆ ಅದುರುವಿಕೆಯ ಅಲೆಯನ್ನು ಸೃಷ್ಟಿಸಬಹುದು. ಆದರೆ ಆ ಅಲೆಗಳು ಅತಿ ಸೂಕ್ಷ್ಮ ಕಂಪನಗಳನ್ನು ಗ್ರಹಿಸುವ ಉಪಕರಣಗಳಿಗೆ ಮಾತ್ರ ಗೋಚರವಾಗುವುದರಿಂದ ನಮ್ಮ ಅರಿವಿಗೆ ಬರುವುದೇ ಇಲ್ಲ.

ಕುಜ ಗ್ರಹ ಭೂಮಿಗೆ ಸಂಬಂಧಪಟ್ಟ ಗ್ರಹ. ಕುಜ ಮತ್ತು ರಾಹು ಸಮ ರೇಖೆಯಲ್ಲಿ ಬಂದಾಗ ಭೂಕಂಪ ಸಂಭವಿಸಬಹುದು. ಕುಜ ಗ್ರಹ ನೀಚ ಸ್ಥಾನದಲ್ಲಿ ಬಂದಾಗ ಭೂಕಂಪ ಸಂಭವ. ರವಿಯ ಮೇಲೆ ಕುಜನ ದೃಷ್ಟಿ ಬಂದಾಗ ಭೂಕಂಪ ಸಂಭವ. 2004 ರ ಡಿಸೆಂಬರ್ 26 ರಂದು ಸಂಭವಿಸಿದ ಭೂಕಂಪದ ಸಮಯದಲ್ಲಿ ಕುಜ, ರಾಹು, ರವಿ ಒಂದೇ ರಾಶಿಯಲ್ಲಿ ಒಂದೇ ಸಮಾನಾಂತರದಲ್ಲಿ ಚಲಿಸುತ್ತಿದ್ದವು. ಈ ಕಾರಣದಿಂದ ಭರಿ ಭೂಕಂಪ ಸಂಭವಿಸಿತು.

ಭೂಕಂಪ ಸಂಭವಿಸುವ ಮೊದಲು ಕೆಲವೆಡೆ ಭೂಮಿಯ ಬಿರುಕಿನಿಂದ ಕೆಲವು ಅನಿಲಗಳು ಹೊರ ಸೂಸಿ ಅಂತರ್ಜಲದ ಮೂಲಕ ಕೊಳ ಮತ್ತು ಕೆರೆಗಳಿಗೆ ತಲುಪುತ್ತದೆ. ಅದು ಕೆಟ್ಟ ವಾಸನೆ ಇರುತ್ತದೆ. ಇರುವೆಗಳು ಭೂಮಿಯ ಒಳಗಿನಿಂದ ಹೊರ ಬರುತ್ತದೆ. ಆಗ ಭೂಕಂಪ ಉಂಟಾಗಬಹುದು ಎಂದು ತಿಳಿಯಬಹುದು.


Viewing all articles
Browse latest Browse all 6795

Trending Articles


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್


ಪ್ರಜ್ಞಾ ಪ್ರವಾಹ, ಕರ್ನಾಟಕ “ದೇಶಿ ಚಿಂತನೆ” ಪ್ರಬಂಧ ಸ್ಪರ್ಧೆ


ತುಳು ತೆರೆಗೆ ಸೋನಿಯಾ ಎಂಟ್ರಿ


‘ವ್ಯಾಪಾರ’ದಲ್ಲಿ ವೃದ್ಧಿಯಾಗಲು ಹೀಗೆ ಮಾಡಿ….


ಅಪ್ಪ ಅಮ್ಮ ಬೈಯ್ತಾರೆ ಅಂತ ಬೆಂಗಳೂರಿಂದ ಚಳ್ಳಕೆರೆಗೆ ಹೋದ ಮಕ್ಕಳು


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


Indira Canteen : ‘ಇಂದಿರಾ ಕ್ಯಾಂಟೀನ್’ನಲ್ಲಿ ಮಾಂಸ ಸೇವನೆಗೂ ಅವಕಾಶವಿದೆ : ಸಚಿವ...


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


Namaskāra नमस्कार (salutation)



<script src="https://jsc.adskeeper.com/r/s/rssing.com.1596347.js" async> </script>