Quantcast
Channel: VijayKarnataka
Viewing all articles
Browse latest Browse all 6795

'ದಾನದ' ಫಲವೇ ಶ್ರೇಷ್ಠ

$
0
0

* ಎಸ್.ಎನ್.ಶೈಲೇಶ್ ಬಾಣಾವರ
ಸಾಮಾನ್ಯವಾಗಿ ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬ ಮನುಷ್ಯನೂ ಯಾವುದಾದರೊಂದು ತೊಂದರೆ ತಾಪತ್ರೆಯಗಳಿಂದ ಒದ್ದಾಡುತ್ತಿರುತ್ತಾನೆ. ಇಂಥ ಸಂದರ್ಭದಲ್ಲಿ ಜಾತಕದ ಕುಂಡಲಿಯನ್ನು ಪರೀಕ್ಷಿಸಿ, ಅದರಲ್ಲಿರುವ ತೊಂದರೆಗಳನ್ನು ವಿಮರ್ಶೆ ಮಾಡಿ ಸಂಬಂಧಪಟ್ಟ ತೊಂದರೆಗಳಿಗೆ ಯಾವ ದಾನ ಮಾಡಿದರೆ ಅದರಿಂದ ಯಾವ ಪರಿಹಾರ ಸಿಗುತ್ತದೆ ಹಾಗೂ ದಾನದಿಂದ ಪ್ರಯೋಜನವೇನು ಎಂಬ ವಿಚಾರಗಳನ್ನು ತಿಳಿದುಕೊಳ್ಳೋಣ.

ಮೊದಲನೆಯದಾಗಿ ಸೂರ್ಯ, ಚಂದ್ರ, ಮಂಗಳ, ಬುಧ, ಗುರು, ಶುಕ್ರ, ಶನೇಶ್ವರ, ರಾಹು ಹಾಗೂ ಕೇತು ಈ ನವಗ್ರಹಗಳ ಪೈಕಿ ಯಾವ ಗ್ರಹದಿಂದ ತೊಂದರೆ ಇದೆ ಎಂದು ಜಾತಕ ಪರಿಶೀಲಿಸಿ ನಂತರ ಯಾವ ಧಾನ್ಯ ಹಾಗೂ ವಸ್ತ್ರ ದಾನ ಮಾಡಬೇಕೆಂದು ತಿಳಿದುಕೊಳ್ಳಬೇಕು.

*ಜಾತಕದಲ್ಲಿ ಸೂರ್ಯನಿಂದ ತೊಂದರೆ ಇದ್ದಾಗ ಗೋಧಿ ಅಥವಾ ರವೆಯ ಜತೆ ಕೆಂಪು ವಸ್ತ್ರ ದಾನ ಮಾಡಬೇಕು.

*ಜಾತಕದಲ್ಲಿ ಚಂದ್ರನಿಂದ ತೊಂದರೆ ಇದ್ದಾಗ ಅಕ್ಕಿ ಹಾಗೂ ಶ್ವೇತವಸ್ತ್ರ (ಬಿಳಿ) ದಾನ ಕೊಡಬೇಕು.

*ಮಂಗಳ (ಕುಜ, ಅಂಗಾರಕ)ನ ತೊಂದರೆ ಇದ್ದಾಗ ತೊಗರಿಬೇಳೆ ಅಥವಾ ಕಾಳಿನ ಜತೆ ಅರೆ ಕೆಂಪು ವಸ್ತ್ರ ದಾನ ಮಾಡಬೇಕು.

*ಬುಧನಿಂದ ತೊಂದರೆ ಇದ್ದಾಗ ಹೆಸರುಕಾಳು ಹಾಗೂ ಹಸಿರು ಬಣ್ಣದ ವಸ್ತ್ರ ದಾನ ಕೊಡಬೇಕು.

*ಗುರುವಿನಿಂದ ತೊಂದರೆ ಇದ್ದಾಗ ಕಡಲೆಕಾಳು ಹಾಗೂ ಹಳದಿ ಬಣ್ಣದ ವಸ್ತ್ರ ದಾನ ಮಾಡಬೇಕು.

*ಶುಕ್ರನಿಂದ ತೊಂದರೆ ಇದ್ದಾಗ ಅವರೆಕಾಳು ಹಾಗೂ ಬಿಳಿ ಹಾಗೂ ಹಸಿರು ಮಿಶ್ರಿತ ಬಣ್ಣದ ವಸ್ತ್ರ ದಾನ ಮಾಡಬೇಕು.

*ಶನೇಶ್ವರನಿಂದ ತೊಂದರೆ ಇದ್ದಾಗ ಕರಿ ಎಳ್ಳು ಹಾಗೂ ನೀಲಿ ಬಣ್ಣದ ವಸ್ತ್ರ ದಾನ ಕೊಡಬೇಕು.

*ರಾಹುವಿನ ತೊಂದರೆ ಇದ್ದಾಗ ಉದ್ದಿನಕಾಳು ಅಥವಾ ಬೇಳೆಯ ಜತೆ ಬೂದು ಬಣ್ಣದ ವಸ್ತ್ರ ದಾನ ಮಾಡಬೇಕು.

*ಕೇತುವಿನಿಂದ ತೊಂದರೆ ಇದ್ದಾಗ ಹುರುಳಿಕಾಳು ಹಾಗೂ ಮಿಶ್ರ ವರ್ಣದ ಬಟ್ಟೆಗಳನ್ನು ದಾನ ಮಾಡಬೇಕು.

*ಏಳೂವರೆ ವರ್ಷ ಶನಿ ಕಾಟವಿದ್ದಾಗ ಕರಿಎಳ್ಳು, ಎಳ್ಳೆಣ್ಣೆ, ಕಬ್ಬಿಣದ ಬಾಣಲೆ, ಬಾಳೆಹಣ್ಣು, ವೀಳ್ಯದೆಲೆ, ಅಡಕೆ, ದಕ್ಷಿಣೆ, ಕರಿ ಬಟ್ಟೆ ಸಮೇತ ದಾನ ಮಾಡಬೇಕು.

*ಜಲ ದಾನ ಮಾಡಿದರೆ ಮನುಷ್ಯನಿಗೆ ಆತ್ಮತೃಪ್ತಿ ಸಿಗುತ್ತದೆ.

*ಅನ್ನ ದಾನ ಮಾಡಿದರೆ ಯಾವುದೇ ಕಾಲಕ್ಕೂ ದರಿದ್ರ ಇರುವುದಿಲ್ಲ. ಸುಖ, ಶಾಂತಿ, ನೆಮ್ಮದಿ ದೊರೆಯುತ್ತದೆ.

*ಎಳ್ಳಿನ ದಾನದಿಂದ ದರಿದ್ರ ಕಳೆದು ಸಂತಾನ ಭಾಗ್ಯ ದೊರಕುತ್ತದೆ.

*ಸುವರ್ಣ ದಾನ ಮಾಡಿದರೆ ಆಯಸ್ಸು ವೃದ್ಧಿಯಾಗಿ ನೆಮ್ಮದಿ, ಶಾಂತಿ, ಸದ್ಗತಿ ಪ್ರಾಪ್ತಿ.

*ಕುದುರೆ ದಾನ ಮಾಡಿದರೆ ಅಶ್ವಿನಿ ದೇವತೆಗಳಿಂದ ಸಂತೃಪತ್ತರಾಗಿ ಸಾನಿಧ್ಯ ಪ್ರಾಪ್ತಿ.

*ಬೆಳ್ಳಿ ದಾನ ಮಾಡಿದರೆ ಶುಕ್ರನ ಕೃಪಾ ದೃಷ್ಟಿ ಸದಾ ಇದ್ದು ಸುಂದರ ರೂಪ ಪ್ರಾಪ್ತಿ ಹಾಗೂ ಇಷ್ಟ ದೇವತೆಗಳು ತೃಪ್ತಿ ಹೊಂದುತ್ತಾರೆ.

*ದೀಪ ದಾನ ಮಾಡಿದರೆ ಕಣ್ಣಿಗೆ ಸಂಬಂಧಿಸಿದ ವ್ಯಾಧಿಯಿಂದ ಪರಿಹಾರವಾಗಿ ದೃಷ್ಟಶಕ್ತಿ ನಾಶ.

*ವಸ್ತ್ರ ದಾನ ಮಾಡಿದರೆ ದಾರಿದ್ರ್ಯದಿಂದ ಮುಕ್ತಿ.

*ಎತ್ತುಗಳನ್ನು ದಾನ ಮಾಡಿದರೆ ಐಶ್ವರ್ಯ ಪ್ರಾಪ್ತಿ.

*ಗೋ ದಾನ ಮಾಡಿದರೆ ಸೂರ್ಯಲೋಕ ಪ್ರಾಪ್ತಿ ಹಾಗೂ ವೈತರಣೆ ನದಿಯಲ್ಲಿ ಮುಳುಗುವುದಿಲ್ಲ.

*ಭೂ ದಾನ ಮಾಡಿದರೆ ದಾನ ಮಾಡಿದ ವ್ಯಕ್ತಿ ಬೇರೆ ಭೂಮಿಯಿಂದ ಲಾಭ ಪಡೆಯುವನು.

*ಹಾಸಿಗೆ, ವಾಹನ ದಾನದಿಂದ ಸುಶೀಲವಂತ ಅನುರೂಪ ಪತ್ನಿ ಪ್ರಾಪ್ತಿ.

*ಶ್ರೀಗಂಧವನ್ನು ದೇವರಿಗೆ ದಾನ ಮಾಡಿದರೆ ಮನಸು ಸದಾ ಹರ್ಷ, ಉಲ್ಲಾಸ, ಶಾಂತಿ ಹಾಗೂ ದೇವರ ಧ್ಯಾನದಲ್ಲಿ ಆಸಕ್ತಿ ಪ್ರಾಪ್ತಿ.

*ತಾಂಬೂಲ ದಾನ ಮಾಡಿದರೆ ಶ್ರೀ ಮಹಾಲಕ್ಷ್ಮೀ ಕೃಪಾಕಟಾಕ್ಷ ಪ್ರಾಪ್ತಿ.

*ಕೆಂಪು ಅಕ್ಷತೆಯ ದಾನದಿಂದ ಕೆಟ್ಟ ಜನರಿಂದ ಹಾಗೂ ಕಳ್ಳರಿಂದ ದೂರವಾಗಿ ಸುಖ ಪ್ರಾಪ್ತಿ.

*ಅರಿಶಿನ ದಾನದಿಂದ ಸುಮಂಗಲಿಯರಾಗಿ ಬಾಳಿ ನೆಮ್ಮದಿ, ಶಾಂತಿ ಪ್ರಾಪ್ತಿ.

*ಕುಂಕುಮ ದಾನದಿಂದ ಹಿತ ಶತ್ರುಗಳಿಂದ ಮುಕ್ತಿ.

*ಹೂವು ಹಾಗೂ ಹೂವಿನ ಹಾರ ದಾನ ಮಾಡಿದರೆ ಗೌರವ, ಕೀರ್ತಿ, ಆಯುಸ್ಸು ವೃದ್ಧಿ.

*ಕಸ್ತೂರಿ ದಾನದಿಂದ ಸಂಸಾರದಲ್ಲಿ ಸುಖ, ಅನ್ಯೋನತೆ, ನೆಮ್ಮದಿ ಜೀವನ ಪ್ರಾಪ್ತಿ.

*ಪರಿಮಳ ದ್ರವ್ಯದ ದಾನದಿಂದ ತೊಂದರೆ ಕೊಡುವವರು, ಕಾಡಿಸುವವರು, ಪೀಡಿಸುವವರಿಂದ ಮುಕ್ತಿ.

ಯಾವುದೇ ಕಾರಣಕ್ಕೂ ಹಣದ ಗರ್ವದಿಂದ ಹಾಗೂ ಭಕ್ತಿ ಇಲ್ಲದೆ ಕಾಟಾಚಾರಕ್ಕೆ ದಾನ ಮಾಡಬೇಡಿ. ಇದರಿಂದ ಯಾವುದೇ ರೀತಿಯ ಪ್ರಯೋಜನ ಸಿಗುವುದಿಲ್ಲ. ಭಕ್ತಿ ಪೂರ್ವಕವಾಗಿ ದಾನ ಮಾಡಿದರೆ ಖಂಡಿತ ಪರಿಪೂರ್ಣ ಫಲ ದೊರಕುತ್ತದೆ. ಎಲ್ಲವನ್ನೂ ನಾವೇ ತಿನ್ನುವುದಕ್ಕಿಂತ ಹಂಚಿ ತಿಂದಾಗ ತೃಪ್ತಿಯೇ ಬೇರೆ.


Viewing all articles
Browse latest Browse all 6795

Trending Articles


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್


ಪ್ರಜ್ಞಾ ಪ್ರವಾಹ, ಕರ್ನಾಟಕ “ದೇಶಿ ಚಿಂತನೆ” ಪ್ರಬಂಧ ಸ್ಪರ್ಧೆ


ತುಳು ತೆರೆಗೆ ಸೋನಿಯಾ ಎಂಟ್ರಿ


‘ವ್ಯಾಪಾರ’ದಲ್ಲಿ ವೃದ್ಧಿಯಾಗಲು ಹೀಗೆ ಮಾಡಿ….


ಅಪ್ಪ ಅಮ್ಮ ಬೈಯ್ತಾರೆ ಅಂತ ಬೆಂಗಳೂರಿಂದ ಚಳ್ಳಕೆರೆಗೆ ಹೋದ ಮಕ್ಕಳು


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


Indira Canteen : ‘ಇಂದಿರಾ ಕ್ಯಾಂಟೀನ್’ನಲ್ಲಿ ಮಾಂಸ ಸೇವನೆಗೂ ಅವಕಾಶವಿದೆ : ಸಚಿವ...


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


Namaskāra नमस्कार (salutation)



<script src="https://jsc.adskeeper.com/r/s/rssing.com.1596347.js" async> </script>