Quantcast
Channel: VijayKarnataka
Viewing all articles
Browse latest Browse all 6795

ಪ್ರೀತಿ, ದ್ವೇಷಕ್ಕೆ ವಿವೇಚನೆ ಇರದು

$
0
0

- ದಾರಿದೀಪ: ಹರೀಶ್‌ ಕಾಶ್ಯಪ್

*ಪಿತೃ ಕಾರ್ಯದ ಬಗ್ಗೆ ಸಲಹೆ ನೀಡಿದ್ದೀರಿ-ಯಾವಾಗ, ಎಲ್ಲಿ ಮಾಡಬೇಕು ದಯವಿಟ್ಟು ತಿಳಿಸಿ. ಹೇಮಂತ್ ಕೆ, ವಿಜಾಪುರ ನಿಮಗೆ ಉತ್ತರಿಸಿ ಮೂರು ತಿಂಗಳೇ ಆಯ್ತು. ಈಗ ಇನ್ನೂ ವಿವರ ಕೇಳುತ್ತಿರುವಿರಿ! ಸತ್ಕರ್ಮಗಳೇ ಹಾಗೆ, ತಿಳಿವುದು ಕಷ್ಟ. ತಿಳಿದವರು ಸಿಗುವುದು ಕಷ್ಟ, ಸಿಕ್ಕರೂ ಮಾಡುವುದು ಇನ್ನೂ ಕಷ್ಟ! ಆದರೆ ಯಾರು ಕಷ್ಟಕ್ಕೆ ಅಂಜುವುದಿಲ್ಲವೋ ಅವರು ಕರ್ಮ ಜಯಿಸುವುದು, ಇತರರಲ್ಲ. ಜನವರಿ ಉತ್ತರಾಯಣದ ಒಳಗೆ ಯಾವುದೇ ಕೃಷ್ಣ ಪಕ್ಷ ಕೊನೆಯಲ್ಲಿ ನಿಮ್ಮ ಊರಿನ ಹತ್ತಿರದ ಕ್ಷೇತ್ರದಲ್ಲಿ ಉತ್ತಮ ಪುರೋಹಿತರಿಂದ ಮಾಡಿಸಿ. ಏನು, ಎತ್ತ ಎಂದು ಆಗಲೇ ಹೇಳಿ ಆಗಿದೆ.

*ಮನೆಯಲ್ಲಿ ಅತ್ತೆ-ಸೊಸೆಗೆ ಆಗಿ ಬರುವುದಿಲ್ಲ. ನನಗೆ ಏನು ಮಾಡುವುದು ತೋಚುತ್ತಿಲ್ಲ. ಶ್ರೀಧರ್ ದಂಪತಿ, ಕೋಲಾರ ವಿವರ ಬಹಳ ಬರೆದಿರುವಿರಿ! ಅದನ್ನೇ ತುಸು ಧೈರ್ಯ ಮಾಡಿ ಪತ್ನಿ, ತಾಯಿಯೊಂದಿಗೆ ಪ್ರತ್ಯೇಕ ಮಾತನಾಡಿ. ಸ್ವಲ್ಪ ನಿಷ್ಠುರವಾಗಿ, ಒಳ್ಳೆಯದೇ! ನಿಮ್ಮದು ಹೊರತಾಗಿ, ಮಕ್ಕಳು-ಅತ್ತೆ-ಸೊಸೆ ಎಲ್ಲರದೂ ಪಾಪ ದೆಸೆ ಬೇರೆ ನಡೆದು, ಕೆಲ ದೋಷಗಳಿವೆ. ಆಪ್ತ ಸಲಹೆ, ಕೆಲ ಪ್ರಾಯಶ್ಚಿತ್ತ ಪೂಜಾ-ಜಪಗಳ ಮಾಡಬೇಕು.

*ಟ್ರಾಕ್ ರೆಕಾರ್ಡ್ ಸರಿಯಲ್ಲದವನನ್ನು ಪ್ರೀತಿಸಿ, ಈಗ ಮದುವೆಗೆ ಹೊಯ್ದಾಟ ನಡೆದಿದೆ. ಏನು ಮಾಡಲಿ? ಮೀನಾ, ಭದ್ರಾವತಿ ಪ್ರೀತಿ-ದ್ವೇಷ-ಎರಡಕ್ಕೂ ವಿವೇಚನೆ ಎಂಬುದಿರದು. ಆದ ಮೇಲೆ ಎರಡರಲ್ಲೂ ಪಶ್ಚಾತ್ತಾಪವೇ ಅನುಭವಕ್ಕೆ ಬರುವುದು. ನಡತೆ ಸರಿಯಿಲ್ಲ ಎಂದರೆ ಏನೇನು?! ಎಂದು ವಿವರ ತಿಳಿಸಿಲ್ಲ. ಆತನಿಗೆ ಪ್ರತ್ಯೇಕ ಆಪ್ತ ಸಲಹೆಯ ಅವಶ್ಯಕತೆ ಇದೆ. ಹಿರಿಯರೊಂದಿಗೆ ಮಾತನಾಡಿ, ಜಗಳವಿಲ್ಲದೇ ಕಾರ್ಯ ಸಾಧಿಸುವ ಬುದ್ಧಿಮತ್ತೆ ನಿಮಗಿದ್ದು ಮುಂದುವರಿಯಿರಿ.

*ನನ್ನ ಕುಟುಂಬದ ಜಾತಕ ಹೇಗಿದೆ. ಏನು, ಎತ್ತ ಎಂದು ತಿಳಿಸಬೇಕಾಗಿ ವಿನಂತಿ. ಹೇಮಾ ಬಾಯಿ, ಬೆಂಗಳೂರು ನೀರಿಗಿಳಿಯದೆ ಆಳ ಎಷ್ಟಿದೆ ಎಂದು ಲೆಕ್ಕ ಹಾಕಿದಂತೆ! ನಿಮ್ಮ ಪ್ರಶ್ನೆ. ನಿರ್ದಿಷ್ಟ ವ್ಯಕ್ತಿ-ಸಮಸ್ಯೆ-ಜ್ಯೋತಿಷ್ಯ ಜಿಜ್ಞಾಸೆಗೆ ಮಾತ್ರ ಉತ್ತರ ಪಡೆಯಬಹುದೇ ಹೊರತು ಗ್ರೂಪ್ ಚಾಟ್‌ನಂತೆ ಅಲ್ಲ.

*ಬಹಳ ಅಪಮಾನ, ಹಣಕಾಸಿನ ತೊಂದರೆ ಗುರುಗಳೇ. ದಾರಿ ತೋರಿ. ರವಿಕುಮಾರ್ ಎನ್, ಬೆಂಗಳೂರು ಲಗ್ನಾ ಗುರುವೂ, ಶನಿ ಭಾಗ್ಯ ಯೋಗವೂ, ಅಧಿಯೋಗ ಕುಜನೂ ಸೇರಿ, ಅನೇಕ ಸಾಮರ್ಥ್ಯದ ವ್ಯಕ್ತಿ ನೀವು. ನಿಮ್ಮ ಸಮಕ್ಕೆ ಜನರು ಹಾತೊರೆವರೇ ಹೊರತು, ಸಹಕರಿಸರು! ಅದೇ ಸಮಸ್ಯೆ. ಶನಿ ದೆಸೆಯ ಕೊನೆ ವರ್ಷ ನಡೆದು, ಹಂತ ಹಂತವಾಗಿ ಪರಿಹಾರ ಆಗುವುದು. ದೇವರಾಯನ ದುರ್ಗ-ನರಸಿಂಹ ದೇವರ ದರ್ಶನ-ಮನೆಯಲ್ಲಿ ಮೂಲಮಂತ್ರ ಹೋಮಗಳಿಂದ ಪ್ರಗತಿ.


Viewing all articles
Browse latest Browse all 6795

Trending Articles


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಬಿಗ್‌ ನ್ಯೂಸ್: ದ್ವಿತೀಯ ಪಿಯು ಪರೀಕ್ಷೆ ಫಲಿತಾಂಶ ಪ್ರಕಟ -‌ ಈ ಬಾರಿಯೂ...


‘ಬಾಹುಬಲಿ’ಅಭಿಮಾನಿಗಳಿಗೆ ಗುಡ್ ನ್ಯೂಸ್ ಸುದ್ದಿ ! ಬರ್ತಿದೆ ‘ಪಾರ್ಟ್-3’


ಕಳ್ಳತನ ಮಾಡುವಾಗ ಮನೆಯೊಡತಿ ನೋಡಿದ್ದಕ್ಕೆ ಕೊಂದೇ ಬಿಟ್ಟ ಅರ್ಚಕ!


ಭಾಷಾಭಿಮಾನ ಬೆಳೆಸುವ ಪ್ರಯತ್ನ ತುಳು ಕ್ಯಾಲೆಂಡರ್‌ ‘ಕಾಲಕೋಂದೆ’


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ಪ್ರಜ್ಞಾ ಪ್ರವಾಹ, ಕರ್ನಾಟಕ “ದೇಶಿ ಚಿಂತನೆ” ಪ್ರಬಂಧ ಸ್ಪರ್ಧೆ


ತುಳು ತೆರೆಗೆ ಸೋನಿಯಾ ಎಂಟ್ರಿ



<script src="https://jsc.adskeeper.com/r/s/rssing.com.1596347.js" async> </script>