Quantcast
Channel: VijayKarnataka
Viewing all articles
Browse latest Browse all 6795

ಕಷ್ಟಗಳಿಗೆ ಪ್ರಾರಬ್ಧಗಳೇ ಕಾರಣ

$
0
0

*ಡಿಗ್ರಿ ಓದುತ್ತಿದ್ದು, ಅನೇಕ ಗೊಂದಲ ಕಾಡುವುದು. ಪರಿಹಾರ ಹೇಳಿ.

ನಿಂಗರಾಜು ಆರ್, ತಿನರಸೀಪುರ

ಬಿಲ್ಲು ಎಂದಿಗೂ ಒಂಟಿಯೇ, ಬಾಣ-ಶುತ್ರಗಳನೇಕ ! ಅದನ್ನು ನಿಭಾಯಿಸುವ ಕಲೆ ಮನವೆಂಬ ಬಿಲ್ಲಿಗೆ ಇರಬೇಕು. ಇಲ್ಲವಾದರೆ ನಿಮ್ಮಂತೆ ಅನಗತ್ಯ, ಸಂಬಂಧವೇ ಇಲ್ಲದ ಸಮಸ್ಯೆಗಳನ್ನು ಹೊತ್ತು ತಿರುಗಬೇಕಾಗುವುದು. ನಾಮ ನಕ್ಷತ್ರ ಒಳ್ಳೆಯದಾ? ಹೆಸರು ಸರಿ ಇದೆಯಾ? ಗುರಿ ಮುಟ್ಟು ವೆನಾ?!... ಹೀಗೇ ನಿಮ್ಮ ಅಸಂಬದ್ಧ ವೇದನೆ ಓಡುತ್ತಿದೆ! ಇದೆಲ್ಲ ಕಸವನ್ನು ಹೊರಗೆ ಹಾಕಿ-ಓದಿನ ಕಡೆ, ಆರೋಗ್ಯಕರ ನಿತ್ಯ ಜೀವನಶೈಲಿ ಕಡೆ ಗಮನ ಕೇಂದ್ರೀಕರಿಸಿ.

*ನನ್ನ ಎರಡೂ ಹೆಣ್ಣುಮಕ್ಕಳ ವಿದ್ಯೆ, ಆರೋಗ್ಯ, ಚಿಂತೆ. ದಯವಿಟ್ಟು ಪರಿಶೀಲಿಸಿ.

ಉಷಾ ಆರ್, ರಾಜಾಜಿನಗರ

ಸಂಗೀತ, ಸಾಹಿತ್ಯ, ನೃತ್ಯ ಕಲಿಕೆ, ತದ್ವಿರುದ್ಧ ಸಿ.ಎ ಮಾಡಬೇಕೆಂಬ ಬಯಕೆ! ಇದು ಜಾತಕದಲ್ಲೇ ವೈರುಧ್ಯವಿರುವ ಸೂಚನೆ. ಕಲಾ ಪ್ರಕಾರದಲ್ಲಿ ಉತ್ತಮ ಭವಿಷ್ಯ ಕಷ್ಟವೇ ಸರಿ. ಅದನ್ನು ಕೇವಲ ಅಭ್ಯಾಸದಲ್ಲಿರಿಸಿ ಓದಿನ ಕಡೆ ಕೇಂದ್ರಿತವಾಗಲಿ. ಸಿ.ಎ ಮಾಡಲಾಗದು, ಯೋಗವಿಲ್ಲ. ಆಡಳಿತಾತ್ಮಕ ಪರೀಕ್ಷೆಗೆ ಅನುಕೂಲವಿದೆ. ಇನ್ನೊಬ್ಬ ಮಗಳಿಗೂ ಇದೇ ಏಕ ನಕ್ಷತ್ರ, ಸಮದಶಾದಿಗಳು ಇದೆ. ಹೆಚ್ಚಿನ ವಿವರ ಬೇರೆ ಬೇರೆ ಈಗೇನೂ ಹೇಳಲು ಇಲ್ಲ.

*ನಮ್ಮ ಮನೆಗೆ ದೇವಸ್ಥಾನದ ಗೋಪುರ ನೆರಳು ಬೀಳುತ್ತದೆ. ಅನೇಕ ಕಷ್ಟಗಳಿಗೆ ಇದೇ ಕಾರಣವಾ ಗುರೂಜಿ?

ಮಂಜುಳಾ, ಕಡೂರು

ಜನರ ದೃಷ್ಟಿಯಲ್ಲಿ ದೇವರು ಎಂದರೆ ಭಯಾನಕ ವಸ್ತು! ಎಂದಾಗಿಬಿಟ್ಟಿದೆ. ಇಂಥ ಮನೋಭಾವ ನೋಡಿದಾಗ! ಹಾಗೆ ನಂಬಿ ನೋಡಿದರೂ ದೇವರ ನೆರಳು ನಮ್ಮ ಮೇಲಿರಲಿ ಎಂದೇ ನಾವು ಕೈ ಮುಗಿಯುವುದು ಅಲ್ಲವೆ?! ನಿಮ್ಮ ಕಷ್ಟಗಳಿಗೆ ಬೇರೆ ಕರ್ಮ ಪ್ರಾರಬ್ಧಗಳು ಕಾರಣವೇ ಹೊರತು ದೇವಳದ ನೆರಳು ಅಲ್ಲ. ಸೂಕ್ತ ಜ್ಯೋತಿಷಿಯಲ್ಲಿ ಜಾತಕ-ಪ್ರಶ್ನೆಯಿಟ್ಟು ಪರಿಹಾರದತ್ತ ನಡೆಯಿರಿ.

*ಅಣ್ಣನಿಗೆ ನೌಕರಿಯಲ್ಲಿ ಯಾವುದೇ ಪ್ರಗತಿಯಿಲ್ಲ. ಮದುವೆಯೂ ಇಲ್ಲ. ಕಾರಣ, ಪರಿಹಾರ ಹೇಳಿ.

ಕಾವ್ಯಾ (ಅಣ್ಣ ಪ್ರಶಾಂತ್), ಬೆಂಗಳೂರು

ಅಣ್ಣನ ಬಗ್ಗೆ ನಿಮ್ಮ ಕಾಳಜಿ ವಿವರ ಬಹಳ ಒಳ್ಳೆಯದು. ತಾಳ್ಮೆಯಿರಲಿ. ಮುಂದೆ ಒಳ್ಳೆಯದಾಗುವುದು. ಈ ಹಿಂದೆ ತಪ್ಪಿ ಹೋದ ಸಂಬಂಧ ನೆನೆದು ಈಗೇಕೆ ಕಳವಳ? ಅದೆಲ್ಲ ಬಿಟ್ಟು ಬೇರೆ ಕಡೆ ನೋಡಿ, ಆಗುವುದು. ದುರ್ಗಾಕ್ಷೇತ್ರ ದರ್ಶನ, ಹರಕೆ ಸೇವೆಯಿಂದ ಅಭೀಷ್ಟ ನೆರವೇರುವುದು.

*ವೈದ್ಯಕೀಯ ವಿದ್ಯಾ ಯತ್ನದಲ್ಲಿರುವೆ. ಅದಕ್ಕೆ ಪೂರಕ ಭವಿಷ್ಯವಿದೆಯೇ ತಿಳಿಸಿ.

ಪೂರ್ವಿ ಯು, ಬೆಳಗಾವಿ

ನಿಮ್ಮ ಪ್ರಯತ್ನಕ್ಕೆ ಪೂರಕ ಯೋಗವೂ, ಕೆಲ ಗಂಭೀರ ದೋಷವೂ ಇಬ್ಬಗೆ ನೀತಿಯಲ್ಲಿದೆ! ದೇವ ಗುರುವಿನ ಬಲವೂ ಇದೆ. ಹೀಗಾಗಿ ಇನ್ನೂ ಕೇಂದ್ರಿತ ಮನಸ್ಕರಾಗಿ ಓದು ಮುಂದುವರಿಸಿ ನೆರವೇರುವುದು. ಹಾಗೆಯೇ ಆಂಜನೇಯ ಸ್ತೋತ್ರ, ನಮಸ್ಕಾರ, ಗುರುರಾಯರ ಸೇವಾದಿಗಳು ನಡೆಯಲಿ.


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ಮಲಗಿದ್ದ ಮಹಿಳೆ ಬೆದರಿಸಿ ಬೆತ್ತಲೆ ಫೋಟೋ ತೆಗೆದ ಕಳ್ಳ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್


‘ವ್ಯಾಪಾರ’ದಲ್ಲಿ ವೃದ್ಧಿಯಾಗಲು ಹೀಗೆ ಮಾಡಿ….


ಅಪ್ಪ ಅಮ್ಮ ಬೈಯ್ತಾರೆ ಅಂತ ಬೆಂಗಳೂರಿಂದ ಚಳ್ಳಕೆರೆಗೆ ಹೋದ ಮಕ್ಕಳು


Indira Canteen : ‘ಇಂದಿರಾ ಕ್ಯಾಂಟೀನ್’ನಲ್ಲಿ ಮಾಂಸ ಸೇವನೆಗೂ ಅವಕಾಶವಿದೆ : ಸಚಿವ...


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


Namaskāra नमस्कार (salutation)


ತುಳು ತೆರೆಗೆ ಸೋನಿಯಾ ಎಂಟ್ರಿ



<script src="https://jsc.adskeeper.com/r/s/rssing.com.1596347.js" async> </script>