Quantcast
Channel: VijayKarnataka
Viewing all articles
Browse latest Browse all 6795

ಮೇನಲ್ಲಿ ಬಾಸ್ಕೆಟ್‌ಬಾಲ್ ಲೀಗ್ ಆರಂಭ

$
0
0

ರಾಷ್ಟ್ರೀಯ ಟೂರ್ನಿಗಳಲ್ಲಿ ಪ್ರಶಸ್ತಿ ಗೆದ್ದ ರಾಜ್ಯ ಮಹಿಳಾ ತಂಡಗಳಿಗೆ ಸನ್ಮಾನ
ಬೆಂಗಳೂರು: ಮುಂಬರುವ ಮೇ ತಿಂಗಳಲ್ಲಿ ನಲ್ಲಿ ಕರ್ನಾಟಕ ಬಾಸ್ಕೆಟ್‌ಬಾಲ್ ಲೀಗ್(ಕೆಬಿಎಲ್) ಆರಂಭಿಸುವುದಾಗಿ ರಾಜ್ಯ ಬಾಸ್ಕೆಟ್‌ಬಾಲ್ ಸಂಸ್ಥೆಯ ಅಧ್ಯಕ್ಷ ಕೆ.ಗೋವಿಂದರಾಜು ತಿಳಿಸಿದ್ದಾರೆ.

ಇಲ್ಲಿನ ಖಾಸಗಿ ಹೋಟೆಲ್‌ನಲ್ಲಿ ಭಾನುವಾರ ನಡೆದ ಸಂಸ್ಥೆಯ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದ ಗೋವಿಂದರಾಜು, ''ರಾಜ್ಯ ಬಾಸ್ಕೆಟ್‌ಬಾಲ್ ಅಭಿವೃದ್ಧಿಗೆ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದೇವೆ. ರಾಜ್ಯ ಮಟ್ಟದಲ್ಲಿ ಕೆಬಿಎಲ್ ಆರಂಭಿಸುತ್ತಿದ್ದ ಮೇ.10ರ ನಂತರ ಲೀಗ್ ದಿನಾಂಕ ನಿಗದಿಯಾಗಲಿದೆ. ನಾಲ್ಕು ವಲಯಗಳಲ್ಲಿ ಈ ಲೀಗ್ ನಡೆಯಲಿದ್ದು, ವಲಯ ಮಟ್ಟದಲ್ಲಿ ಚಾಂಪಿಯನ್ ಮತ್ತು ರನ್ನರ್‌ಅಪ್ ತಂಡಗಳು ಬೆಂಗಳೂರಿನಲ್ಲಿ ಫೈನಲ್‌ಗಾಗಿ ಸೆಣಸಲಿವೆ,'' ಎಂದು ತಿಳಿಸಿದ್ದಾರೆ.

ರಾಷ್ಟ್ರೀಯ ಮಟ್ಟದಲ್ಲಿ ಐಪಿಎಲ್ ಮಾದರಿಯಲ್ಲಿ ಬಾಸ್ಕೆಟ್ ಲೀಗ್ ಆರಂಭಿಸುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಬಿಎಫ್‌ಎ ಅಧ್ಯಕ್ಷ ಗೋವಿಂದರಾಜು, ಈ ಕುರಿತು ಚಿಂತನೆ ನಡೆದಿದ್ದು, ಡಿಸೆಂಬರ್ ವೇಳೆ ಅಂತಿಮ ನಿರ್ಧಾರಕ್ಕೆ ಬರಲಾಗುವುದು ಎಂದರು.

ಈ ವೇಳೆ 2014ರಲ್ಲಿ ನಡೆದ 31ನೇ ಯೂತ್ ನ್ಯಾಷನಲ್ ಬಾಸ್ಕೆಟ್‌ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಗೆದ್ದ ಕರ್ನಾಟಕ ಮಹಿಳಾ ತಂಡ, ಕೇರಳದಲ್ಲಿ ನಡೆದ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಕಂಚು ಗೆದ್ದ ಮಹಿಳಾ ತಂಡ ಮತ್ತು 2015ರಲ್ಲಿ ಲೂಧಿಯಾನದಲ್ಲಿ ನಡೆದ 65ನೇ ಜೂನಿಯರ್ ನ್ಯಾಷನಲ್ ಬಾಸ್ಕೆಟ್‌ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ ಪದಕ ಗೆದ್ದ ರಾಜ್ಯ ಮಹಿಳಾ ತಂಡಕ್ಕೆ ನಗದು ಪ್ರೋತ್ಸಾಹಧನ ನೀಡಿ ಗೌರವಿಸಲಾಯಿತು.

ಅಲ್ಲದೆ ಚೀನಾದಲ್ಲಿ ನಡೆದ ಫಿಬಾ-ಏಷ್ಯಾ ಕ್ವಾಲಿಫೈಯರ್ ರೌಂಡ್, ಫಿಬಾ-ಏಷ್ಯಾ ಹಿರಿಯರ ಪುರುಷರ ಟೂರ್ನಿಯಲ್ಲಿ ಮತ್ತು 3-3 ಟೂರ್ನಿಯಲ್ಲಿ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸಿದ್ದ ಅರವಿಂದ್, ಫಿಬಾ ಟೂರ್ನಿಯಲ್ಲಿ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸಿದ್ದ ರಾಜೇಶ್ ಉಪ್ಪಾರ ಮತ್ತು 2015ರಲ್ಲಿ ನಡೆದ 16 ವರ್ಷದೊಳಗಿನವರ ಫಿಬಾ ಏಷ್ಯಾ ಟೂರ್ನಿಯಲ್ಲಿ ಪಾಲ್ಗೊಂಡಿದ್ದ ಸ್ನಿಗ್ಧಾ ಅವರನ್ನೂ ಅಭಿನಂದಿಸಲಾಯಿತು.

ಪ್ರಮುಖಾಂಶಗಳು

* ನಾಲ್ಕು ಡಿವಿಜನ್ ಒಳಗೊಂಡ ಲೀಗ್

* ಪ್ರತಿ ತಂಡದಲ್ಲಿ 6ರಿಂದ 8 ತಂಡಗಳಿರುವ ಸಾಧ್ಯತೆ

* ಮೈಸೂರು, ಕೋಲಾರ, ದಾವಣಗೆರೆ, ಮಂಗಳೂರಿನಲ್ಲಿ ಲೀಗ್

* ಬೆಂಗಳೂರಿನಲ್ಲಿ ಫೈನಲ್ ಹಣಾಹಣಿ


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ಅಪಘಾತ ಗಾಯಾಳುಗಳಿಗೆ ನೆರವು ನೀಡಿದವರಿಗೆ ಜೀವರಕ್ಷಕ ಪ್ರಶಸ್ತಿ


ಜಮೀನಿನಲ್ಲೇ ಘೋರ ದುರಂತ: ನೀರು ತುಂಬಿದ್ದ ಗುಂಡಿಗೆ ಬಿದ್ದು ಮೂವರು ಸಾವು


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


ವಚನಗಳಿಂದ ಸಂಗೀತ ಲೋಕ ಶ್ರೀಮಂತ


ಶಿವಸೇನೆ ಬಿಗಿಪಟ್ಟು: ದೇಶ ಗೆದ್ದ ಬಿಜೆಪಿ ವಿಲವಿಲ


ಶುಭ ಫಲಕ್ಕಾಗಿ ಮನೆಯಲ್ಲಿ ಗಾಳಿ ಗಂಟೆ ಹಾಕುವ ಮುನ್ನ ಈ ವಿಚಾರ ತಿಳಿಯಿರಿ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ತುಳು ತೆರೆಗೆ ಸೋನಿಯಾ ಎಂಟ್ರಿ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್



<script src="https://jsc.adskeeper.com/r/s/rssing.com.1596347.js" async> </script>