'ನನಗೆ ಈ ಬಗ್ಗೆ ಸರಿಯಾದ ಮಾಹಿತಿ ಇಲ್ಲ. ಆದರೆ, ಬಾಳಾ ಠಾಕ್ರೆ ಅವರನ್ನು ಕೊಲ್ಲುವ ಯತ್ನ ನಡೆದಿದ್ದು ನಿಜ. ಕೊಲೆ ಮಾಡಬೇಕಿದ್ದ ವ್ಯಕ್ತಿ ಬಂಧಿತನಾದರೂ, ಪೊಲೀಸ್ ವಶದಿಂದ ಪರಾರಿಯಾಗುವಲ್ಲಿ ಆತ ಯಶಸ್ವಿಯಾದ,'ಎಂದು ಅಮೆರಿಕದ ಗುಪ್ತ ಸ್ಥಳದಿಂದ ವಿಡಿಯೊ ಕಾನ್ಫರೆನ್ಸ್ ಮೂಲಕ ಮುಂಬಯಿ ನ್ಯಾಯಾಲಯದ ವಿಚಾರಣೆಗೆ ಹಾಜರಾದ ಹೆಡ್ಲಿ ಗುರುವಾರ ತಿಳಿಸಿದ್ದಾನೆ.
ಸೇನಾ ಭವನಕ್ಕೂ ಎರಡು ಭಾರಿ ಭೇಟಿ ನೀಡಿದ್ದಾಗಿ ತಿಳಿಸಿರುವ ಹೆಡ್ಲಿ, ಯಾವಾಗ ಮತ್ತು ಯಾವ ಉದ್ದೇಶಕ್ಕೆ ಎಂದು ತಿಳಿಸಿಲ್ಲ. 'ಶಿವಸೇನೆ ಮುಖ್ಯಸ್ಥರನ್ನು ಮುಗಿಸಬೇಕೆಂದು ಸಂಚು ರೂಪಿಸಲಾಗಿತ್ತು. ಅದಕ್ಕಾಗಿ ಹೊಂಚು ಹಾಕುತ್ತಿದ್ದೆವು. ಠಾಕ್ರೆ ಅಲ್ಲದೇ ಬೇರೆ ಯಾರೆನ್ನಲ್ಲಾ ಎಲ್ಇಟಿ ಕೊಲ್ಲಲು ಬಯಸಿತ್ತು ಎಂಬ ವಿಷಯ ತಿಳಿದಿಲ್ಲ,'ಎಂದೂ ಹೆಡ್ಲಿ ಹೇಳಿದ್ದಾನೆ.
ಎಲ್ಇಟಿಗೆ ದೇಣಿಗೆ:
ಹಿಂದೊಮ್ಮೆ ಪಾಕಿಸ್ತಾನಕ್ಕೆ ಪ್ರವಾಸ ಕೈಗೊಳ್ಳಲು ಅಮೆರಿಕವೇ ನನಗೆ ಹಣಕಾಸು ನೆರವು ನೀಡಿತ್ತು. 2006ರಲ್ಲಿ ಮುಂಬಯಿ ದಾಳಿಗೆ ಎರಡು ವರ್ಷ ಮೊದಲು ಲಷ್ಕರೆತಯ್ಬಾಗೆ ನಾನೇ 70 ಲಕ್ಷ ದೇಣಿಗೆ ನೀಡಿದ್ದೆ. ಲಷ್ಕರ್ನಿಂದ ನಾನು ಹಣ ಪಡೆದಿದ್ದೇನೆ ಎನ್ನುವುದೆಲ್ಲ ತೀರಾ ಅಸಂಬದ್ಧ ಎಂದು ಬುಧವಾರದ ವಿಚಾರಣೆಯಲ್ಲಿ ಹೆಡ್ಲಿ ತಿಳಿಸಿದ್ದ.
'ನ್ಯೂಯಾರ್ಕ್ನಲ್ಲಿ ನಾನು ನಡೆಸುತ್ತಿದ್ದ ಉದ್ಯಮದಿಂದ ಆದಾಯ ಗಳಿಸಿದ್ದೆ ಹಾಗೂ ಪಾಕಿಸ್ತಾನದಲ್ಲಿ ಆಸ್ತಿ ಮಾರಾಟ ಮತ್ತು ಖರೀದಿಯಿಂದ ಗಳಿಸಿದ ಹಣದಿಂದ ಈ ದೇಣಿಗೆ ನೀಡಿದ್ದೇನೆ. ಕೊನೆಯ ಬಾರಿಗೆ ಲಷ್ಕರ್ಗೆ ದೇಣಿಗೆ ನೀಡಿದ್ದು 2006ರಲ್ಲಿ,' ಎಂದು ಹೇಳಿದ್ದ.
ಮುಂಬಯಿ: ಶಿವಸೇನೆ ನಾಯಕ ಬಾಳಾ ಠಾಕ್ರೆ ಹತ್ಯೆಗೆ ಲಷ್ಕರೆ ತಯ್ಬಾ ಸಂಚು ರೂಪಿಸಿತ್ತು. ಆದರೆ, ಕೊಲೆ ಮಾಡಬೇಕಿದ್ದವ ಬಂಧಿತನಾಗಿ ಸಂಚು ವಿಫಲವಾಯಿತು ಎಂದು ಪಾಕ್ ಮೂಲದ ಅಮೆರಿಕದ ಉಗ್ರ ಡೇವಿಡ್ ಹೇಡ್ಲಿ ಹೇಳಿದ್ದಾನೆ.