Quantcast
Channel: VijayKarnataka
Viewing all articles
Browse latest Browse all 6795

ಅಪಘಾತ: ಮೃತರ ಕುಟುಂಬಕ್ಕೆ 1.76 ಕೋಟಿ ರೂ. ಪರಿಹಾರ

$
0
0

ಚೆನ್ನೈ: ಅಪಘಾತವೊಂದರಲ್ಲಿ ಮಡಿದ ಕಾರ್ಪೋರೇಟ್ ಎಗ್ಸಿಕ್ಯೂಟಿವ್ ಅವರ ಕುಟುಂಬಕ್ಕೆ ಎರಡು ಖಾಸಗಿ ವಿಮಾ ಕಂಪನಿಗಳು 1.76 ಕೋಟಿ ರೂ. ವಿಮಾ ಪರಿಹಾರ ನೀಡಿದ್ದು, ಇದು ರಾಜ್ಯದಲ್ಲಿ ಇಂಥ ಪ್ರಕರಣವೊಂದಕ್ಕೆ ಸಿಕ್ಕಿರುವ ಅತ್ಯಂತ ಹೆಚ್ಚಿನ ಮೊತ್ತದ ಪರಿಹಾರವಾಗಿದೆ.

ಮದ್ರಾಸ್ ಹೈ ಕೋರ್ಟ್ ಇತ್ತೀಚೆಗೆ ಆಯೋಜಿಸಿದ್ದ ಲೋಕ್ ಅದಾಲತ್‌ನಲ್ಲಿ ಮೃತರ ಕುಟುಂಬ ಹಾಗೂ ವಿಮಾ ಕಂಪನಿಗಳು ಈ ಒಪ್ಪಂದಕ್ಕೆ ಬಂದವು.

ತಮ್ಮ ಬಂಧವೊಬ್ಬರ ಅಂತ್ಯ ಸಂಸ್ಕಾರಕ್ಕೆಂದು ಪೆರಂಬಲೂರಿಗೆ ಹೋಗುತ್ತಿರುವಾಗ ಇಲ್ಲಿನ ಏರ್‌ಸೆಲ್‌ನಲ್ಲಿ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ತೈಗರಾಜನ್ (48) ಕಾರು ಲಾರಿಯೊಂದಕ್ಕೆ ಡಿಕ್ಕಿ ಹೊಡೆದ ಪರಿಣಾಮ ಅಪಘಾತವೊಂದರಲ್ಲಿ ಮೃತಪಟ್ಟಿದ್ದರು.

ವಾರ್ಷಿಕ ಸುಮಾರು 24 ಲಕ್ಷ ರೂ.ವೇತನ ಪಡೆಯುತ್ತಿದ್ದ ತೈಗರಾಜನ್‌ ಸಾವಿಗೆ ಸೂಕ್ತ ಪರಿಹಾರ ನೀಡಬೇಕೆಂದು, ಮೃತರ ಪತ್ನಿ ವಿಜಯರಾಣಿ ಹಾಗೂ ಮಗ ಟಿ.ದೀಪನ್ ಕೋರ್ಟ್ ಮೆಟ್ಟಿಲೇರಿದ್ದರು. ಈ ಪ್ರಕರಣವು ಮೋಟಾರ್ ಆ್ಯಕ್ಸಿಡೆಂಟ್ಸ್ ಕ್ಲೈಮ್ ಟ್ರಿಬ್ಯೂನಲ್‌ಗೆ ವರ್ಗಾಯಿಸಲ್ಪಟ್ಟಿತ್ತು.

ಈ ಪ್ರಕರಣದ ವಿಚಾರಣೆ ಇತ್ತೀಚೆಗೆ ನಡೆದಿದ್ದು, ಲಾರಿಯ ವಿಮಾ ಕಂಪನಿ ಹಾಗೂ ಕಾರಿನ ವಿಮಾ ಕಂಪನಿ ಒಪ್ಪಂದಕ್ಕೆ ಬಂದು ಮೃತರ ಕುಟುಂಬಕ್ಕೆ ಒಟ್ಟು 1.76 ಕೋಟಿ ರೂ. ಪರಿಹಾರವನ್ನು ಕುಟುಂಬಕ್ಕೆ ಹಸ್ತಾಂತರಿಸಿತು.


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಬಿಗ್‌ ನ್ಯೂಸ್: ದ್ವಿತೀಯ ಪಿಯು ಪರೀಕ್ಷೆ ಫಲಿತಾಂಶ ಪ್ರಕಟ -‌ ಈ ಬಾರಿಯೂ...


 ಕೌಟುಂಬಿಕ ಕಲಹ ಹಿನ್ನೆಲೆ; ಬುದ್ದಿವಾದ ಹೇಳಿದ ತಂಗಿಯನ್ನೇ ಕೊಂದ ಅಣ್ಣ…


ಗುರು ರಾಘವೇಂದ್ರರ ದಿನದ ಭವಿಷ್ಯ ಹಾಗೂ ರಾಶಿ ಫಲ


‘ಒಡಕು ಮೂಡಿಸಿದ ಸಿದ್ಧರಾಮಯ್ಯ’


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ತುಳು ತೆರೆಗೆ ಸೋನಿಯಾ ಎಂಟ್ರಿ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್



<script src="https://jsc.adskeeper.com/r/s/rssing.com.1596347.js" async> </script>