ಮುಂಬಯಿನಲ್ಲೂ ಕೆಲವು ಜ್ಯುವೆಲರ್ಗಳು ಅಂಗಡಿಗಳನ್ನು ಸೋಮವಾರ ಮುಚ್ಚಿದ್ದರು. ರಾಜಸ್ಥಾನದ ಜೈಪುರ ಸೇರಿದಂತೆ ಕೆಲವು ನಗರಗಳಲ್ಲಿ ಮುಷ್ಕರ ಮುಂದುವರಿದಿದೆ. ''ರಾಜಧಾನಿಯಲ್ಲಿ ಮುಷ್ಕರ ಅನಿರ್ದಿಷ್ಟ ಕಾಲ ಮುಂದುವರಿಯುತ್ತಿದೆ. ಉದ್ದೇಶಿತ ಅಬಕಾರಿ ಸುಂಕವನ್ನು ಸರಕಾರ ವಾಪಸ್ ಪಡೆಯುವ ತನಕ ಮುಷ್ಕರ ನಿಲ್ಲಿಸುವ ಪ್ರಶ್ನೆಯೇ ಇಲ್ಲ,'' ಎಂದು ಅಖಿಲ ಭಾರತ ಸರಫಾ ಸಂಘಟನೆಯ ಅಧ್ಯಕ್ಷ ಸುರೀಂದರ್ ಕುಮಾರ್ ಜೈನ್ ಹೇಳಿದ್ದಾರೆ.
ದಿಲ್ಲಿಯ ಚಾಂದಿನಿ ಚೌಕದಲ್ಲಿ ಆಭರಣ ಮಾರಾಟಗಾರರು, ತಯಾರಕರು ಧರಣಿಯನ್ನು ನಡೆಸಲು ನಿರ್ಧರಿಸಿದ್ದಾರೆ. ಬೆಳ್ಳಿಯೇತರ ಆಭರಣಗಳಿಗೆ ಶೇ.1ರಷ್ಟು ಅಬಕಾರಿ ಸುಂಕ ವಿಧಿಸುವ ಸರಕಾರದ ಕ್ರಮ ವಿರೋಧಿಸಿ ಜ್ಯುವೆಲರ್ಗಳು 18 ದಿನಗಳ ಮುಷ್ಕರ ನಡೆಸಿದ್ದರು. ಇದರಿಂದ ಉದ್ಯಮಕ್ಕೆ 60ರಿಂದ 70 ಸಾವಿರ ಕೋಟಿ ರೂ. ನಷ್ಟವಾಗಿದೆ ಎಂದು ಅಂದಾಜು ಮಾಡಲಾಗಿದೆ.
ಹೊಸದಿಲ್ಲಿ : ಅಬಕಾರಿ ಸುಂಕ ವಿರೋಧಿಸಿ ಬಹುತೇಕ ಜ್ಯುವೆಲರ್ಗಳು ಮುಷ್ಕರ ವಾಪಸ್ ಪಡೆದಿದ್ದಾರೆ. ಜೇಟ್ಲಿ ಜತೆಗಿನ ಮಾತುಕತೆ ನಂತರ ಪ್ರಮುಖ ಜ್ಯುವೆಲರ್ಸ್ ಸಂಘಟನೆಗಳು ಮುಷ್ಕರ ನಿಲ್ಲಿಸಿದ್ದವು. ಆದರೆ, ಈ ವಿಷಯದಲ್ಲಿ ಜ್ಯುವೆಲರ್ಗಳ ಮಧ್ಯೆ ಭಿನ್ನಮತ ಎದ್ದಿದ್ದು ರಾಜಧಾನಿ ದಿಲ್ಲಿಯಲ್ಲಿ ಮುಷ್ಕರ ಮುಂದುವರಿದಿದೆ.