Quantcast
Channel: VijayKarnataka
Viewing all articles
Browse latest Browse all 6795

ದಿಲ್ಲಿಯಲ್ಲಿ ಜ್ಯುವೆಲರ್‌ಗಳ ಮುಷ್ಕರ ಮುಂದುವರಿಕೆ

$
0
0

ಹೊಸದಿಲ್ಲಿ : ಅಬಕಾರಿ ಸುಂಕ ವಿರೋಧಿಸಿ ಬಹುತೇಕ ಜ್ಯುವೆಲರ್‌ಗಳು ಮುಷ್ಕರ ವಾಪಸ್ ಪಡೆದಿದ್ದಾರೆ. ಜೇಟ್ಲಿ ಜತೆಗಿನ ಮಾತುಕತೆ ನಂತರ ಪ್ರಮುಖ ಜ್ಯುವೆಲರ್ಸ್‌ ಸಂಘಟನೆಗಳು ಮುಷ್ಕರ ನಿಲ್ಲಿಸಿದ್ದವು. ಆದರೆ, ಈ ವಿಷಯದಲ್ಲಿ ಜ್ಯುವೆಲರ್‌ಗಳ ಮಧ್ಯೆ ಭಿನ್ನಮತ ಎದ್ದಿದ್ದು ರಾಜಧಾನಿ ದಿಲ್ಲಿಯಲ್ಲಿ ಮುಷ್ಕರ ಮುಂದುವರಿದಿದೆ.

ಮುಂಬಯಿನಲ್ಲೂ ಕೆಲವು ಜ್ಯುವೆಲರ್‌ಗಳು ಅಂಗಡಿಗಳನ್ನು ಸೋಮವಾರ ಮುಚ್ಚಿದ್ದರು. ರಾಜಸ್ಥಾನದ ಜೈಪುರ ಸೇರಿದಂತೆ ಕೆಲವು ನಗರಗಳಲ್ಲಿ ಮುಷ್ಕರ ಮುಂದುವರಿದಿದೆ. ''ರಾಜಧಾನಿಯಲ್ಲಿ ಮುಷ್ಕರ ಅನಿರ್ದಿಷ್ಟ ಕಾಲ ಮುಂದುವರಿಯುತ್ತಿದೆ. ಉದ್ದೇಶಿತ ಅಬಕಾರಿ ಸುಂಕವನ್ನು ಸರಕಾರ ವಾಪಸ್ ಪಡೆಯುವ ತನಕ ಮುಷ್ಕರ ನಿಲ್ಲಿಸುವ ಪ್ರಶ್ನೆಯೇ ಇಲ್ಲ,'' ಎಂದು ಅಖಿಲ ಭಾರತ ಸರಫಾ ಸಂಘಟನೆಯ ಅಧ್ಯಕ್ಷ ಸುರೀಂದರ್ ಕುಮಾರ್ ಜೈನ್ ಹೇಳಿದ್ದಾರೆ.

ದಿಲ್ಲಿಯ ಚಾಂದಿನಿ ಚೌಕದಲ್ಲಿ ಆಭರಣ ಮಾರಾಟಗಾರರು, ತಯಾರಕರು ಧರಣಿಯನ್ನು ನಡೆಸಲು ನಿರ್ಧರಿಸಿದ್ದಾರೆ. ಬೆಳ್ಳಿಯೇತರ ಆಭರಣಗಳಿಗೆ ಶೇ.1ರಷ್ಟು ಅಬಕಾರಿ ಸುಂಕ ವಿಧಿಸುವ ಸರಕಾರದ ಕ್ರಮ ವಿರೋಧಿಸಿ ಜ್ಯುವೆಲರ್‌ಗಳು 18 ದಿನಗಳ ಮುಷ್ಕರ ನಡೆಸಿದ್ದರು. ಇದರಿಂದ ಉದ್ಯಮಕ್ಕೆ 60ರಿಂದ 70 ಸಾವಿರ ಕೋಟಿ ರೂ. ನಷ್ಟವಾಗಿದೆ ಎಂದು ಅಂದಾಜು ಮಾಡಲಾಗಿದೆ.


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ಅಪಘಾತ ಗಾಯಾಳುಗಳಿಗೆ ನೆರವು ನೀಡಿದವರಿಗೆ ಜೀವರಕ್ಷಕ ಪ್ರಶಸ್ತಿ


ಜಮೀನಿನಲ್ಲೇ ಘೋರ ದುರಂತ: ನೀರು ತುಂಬಿದ್ದ ಗುಂಡಿಗೆ ಬಿದ್ದು ಮೂವರು ಸಾವು


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


ವಚನಗಳಿಂದ ಸಂಗೀತ ಲೋಕ ಶ್ರೀಮಂತ


ಶಿವಸೇನೆ ಬಿಗಿಪಟ್ಟು: ದೇಶ ಗೆದ್ದ ಬಿಜೆಪಿ ವಿಲವಿಲ


ಶುಭ ಫಲಕ್ಕಾಗಿ ಮನೆಯಲ್ಲಿ ಗಾಳಿ ಗಂಟೆ ಹಾಕುವ ಮುನ್ನ ಈ ವಿಚಾರ ತಿಳಿಯಿರಿ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ತುಳು ತೆರೆಗೆ ಸೋನಿಯಾ ಎಂಟ್ರಿ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್