Quantcast
Channel: VijayKarnataka
Viewing all articles
Browse latest Browse all 6795

ಬಡ್ಡಿ ಇಳಿಕೆಯಿಂದ ದೇಶದ ವಿತ್ತ ವ್ಯವಸ್ಥೆಗೆ ಅನುಕೂಲ

$
0
0

ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರ ಕಡಿತಕ್ಕೆ ಜೇಟ್ಲಿ ಸಮರ್ಥನೆ
ಹೊಸದಿಲ್ಲಿ : ಅಂಚೆ ಕಚೇರಿಯ ಉಳಿತಾಯ ಯೋಜನೆಗಳು ಮತ್ತು ಪಿಪಿಎಫ್ ಬಡ್ಡಿ ದರ ಕಡಿತವನ್ನು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಭಾನುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ.

ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯ ಸ್ಥಳದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ''ದೇಶವು ಕಡಿಮೆ ಬಡ್ಡಿ ದರಗಳತ್ತ ಪ್ರಸ್ತುತ ಸಾಗುತ್ತಿದೆ. ಇದರಿಂದ ಜಡಗಟ್ಟಿರುವ ದೇಶದ ಅರ್ಥವ್ಯವಸ್ಥೆಯನ್ನು ಉತ್ತೇಜಿಸಲು ಸಾಧ್ಯವಾಗುತ್ತದೆ,'' ಎಂದಿದ್ದಾರೆ.
''ಸಣ್ಣ ಉಳಿತಾಯ ಯೋಜನೆಗೆ ಸಂಬಂಧಿಸಿದ ಬಡ್ಡಿ ದರಗಳು ಒಂದು 'ಸೂತ್ರ'ವನ್ನು ಆಧರಿಸಿರುತ್ತವೆ. ಬಡ್ಡಿ ದರವು ಮಾರುಕಟ್ಟೆ ಅನುಸಾರ ನಿರ್ಧಾರವಾಗುತ್ತದೆ. ಬಡ್ಡಿದರ ಕಡಿತದಿಂದ ಉಳಿತಾಯವಾಗುವ ಹಣವನ್ನು ಸಬ್ಸಿಡಿ ಯೋಜನೆಗಳಿಗೆ ಬಳಸಲಾಗುತ್ತದೆ,'' ಎಂದು ಹೇಳಿದರು.
ಹಿರಿಯ ನಾಗರಿಕರ ಉಳಿತಾಯ ಯೋಜನೆ, ಪಿಪಿಎಫ್ ಮತ್ತು ಇತರೆ ಯೋಜನೆಗಳಿಗೆ ಬಡ್ಡಿ ದರ ಕಡಿತಗೊಳಿಸಿದ್ದನ್ನು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಟೀಕಿಸಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ ಜೇಟ್ಲಿ, ''ಹಿಂದಿನ ಯುಪಿಎ ಸರಕಾರ ಸಹ ಬಡ್ಡಿಯನ್ನು ಇಳಿಕೆ ಮಾಡಿದೆ. ಬಡ್ಡಿ ದರಗಳು ಏರಿಕೆಯಲ್ಲಿದ್ದ ಅವಧಿಯಲ್ಲಿಯೇ ಈ ಕಡಿತಗಳನ್ನು ಆ ಸರಕಾರ ಮಾಡಿತ್ತು. ಅದೇ ಸೂತ್ರವನ್ನು ನಾವೀಗ ಅನುಸರಿಸಿದ್ದೇವೆ. ಸುದೀರ್ಘ ಕಾಲದಿಂದ ಇದನ್ನೇ ಪಾಲಿಸಲಾಗುತ್ತಿದ್ದು, ನಾವೇನೂ ಹೊಸ ಸೂತ್ರ ಮಾಡಿಲ್ಲ. ಮಾರುಕಟ್ಟೆ ಅನುಸಾರ ಬಡ್ಡಿ ದರಗಳು ನಿರ್ಧಾರವಾಗುತ್ತವೆ. ಬಡ್ಡಿ ದರ ಮತ್ತು ಮಾರುಕಟ್ಟೆಗೆ ನೇರ ಸಂಬಂಧವಿದೆ,'' ಎಂದು ಸಮರ್ಥಿಸಿಕೊಂಡರು.
ಅದ್ಧೂರಿ ವಸ್ತುಗಳಿಗೆ ತೆರಿಗೆ:
ಜ್ಯುವೆಲರ್‌ಗಳಿಗೆ ಶೇ.1ರಷ್ಟು ಅಬಕಾರಿ ಸುಂಕ ವಿಧಿಸುವ ಕ್ರಮವನ್ನೂ ಸಮರ್ಥಿಸಿಕೊಂಡ ಜೇಟ್ಲಿ, ''ಅದ್ಧೂರಿ ವಸ್ತುಗಳನ್ನು ತೆರಿಗೆ ವ್ಯವಸ್ಥೆ ಅಡಿಗೆ ತರುತ್ತಿದ್ದೇವೆ. ದೇಶವು ಸರಕು ಸೇವೆ ತೆರಿಗೆ ಜತೆ ಸಾಗುತ್ತಿದೆ,'' ಎಂದು ಹೇಳಿದರು. ''ಬಜೆಟ್ ಅಧಿವೇಶನದ ಎರಡನೇ ಹಂತದಲ್ಲಿ ಜಿಎಸ್‌ಟಿ ವಿಧೇಯಕವನ್ನು ಸರಕಾರ ಜಾರಿಗೊಳಿಸಲಿದೆ. ಕಾಂಗ್ರೆಸ್ ಸೇರಿದಂತೆ ಕೆಲವು ಪ್ರತಿಪಕ್ಷಗಳ ಜತೆ ಈ ಕುರಿತು ಭಿನ್ನಾಭಿಪ್ರಾಯಗಳಿದ್ದರೂ, ಅವನ್ನು ಸರಿದೂಗಿಸಿಕೊಂಡು ವಿಧೇಯಕಕ್ಕೆ ಅನುಮೋದನೆ ಪಡೆಯಲಾಗುವುದು. ಆ ವಿಶ್ವಾಸ ನಮ್ಮ ಸರಕಾರಕ್ಕಿದೆ,'' ಎಂದು ಜೇಟ್ಲಿ ಹೇಳಿದರು.

ಪಿಪಿಎಫ್ ದರ ತುಂಬಾ ಜಾಸ್ತಿ!
''ಪಿಪಿಎಫ್‌ಗೆ ಈಗ ಶೇ.8.1ರಷ್ಟು ಬಡ್ಡಿ ನೀಡುತ್ತಿದ್ದು, ಜಗತ್ತಿನ ಬೇರೆ ದೇಶಗಳಿಗೆ ಹೋಲಿಸಿದರೆ ಬಡ್ಡಿ ದರ ನಮ್ಮಲ್ಲಿಯೇ ಹೆಚ್ಚು ಆಕರ್ಷಕವಾಗಿದೆ. ಬಡ್ಡಿ ದರ ಜಾಸ್ತಿಯೇ ಇದೆ. ಅಲ್ಲದೇ ಇದೆಲ್ಲ ತೆರಿಗೆಮುಕ್ತವಾಗಿದೆ. ಯೋಜನೆಯಲ್ಲಿ ಒಟ್ಟಾರೆ ಶೇ.11.12ರಷ್ಟು ಬಡ್ಡಿಯನ್ನು ಪಿಪಿಎಫ್ ಚಂದಾದಾರರು ಪಡೆದಂತಾಗುತ್ತದೆ,'' ಎಂದು ಜೇಟ್ಲಿ ಅವರು ಅಭಿಪ್ರಾಯಪಟ್ಟಿದ್ದಾರೆ.




















Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಬಿಗ್‌ ನ್ಯೂಸ್: ದ್ವಿತೀಯ ಪಿಯು ಪರೀಕ್ಷೆ ಫಲಿತಾಂಶ ಪ್ರಕಟ -‌ ಈ ಬಾರಿಯೂ...


 ಕೌಟುಂಬಿಕ ಕಲಹ ಹಿನ್ನೆಲೆ; ಬುದ್ದಿವಾದ ಹೇಳಿದ ತಂಗಿಯನ್ನೇ ಕೊಂದ ಅಣ್ಣ…


ಗುರು ರಾಘವೇಂದ್ರರ ದಿನದ ಭವಿಷ್ಯ ಹಾಗೂ ರಾಶಿ ಫಲ


‘ಒಡಕು ಮೂಡಿಸಿದ ಸಿದ್ಧರಾಮಯ್ಯ’


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ತುಳು ತೆರೆಗೆ ಸೋನಿಯಾ ಎಂಟ್ರಿ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್



<script src="https://jsc.adskeeper.com/r/s/rssing.com.1596347.js" async> </script>