ಬೆಂಗಳೂರು: ಬೆಂಗಳೂರು ಮೂಲದ ಸಾರ್ವಜನಿಕ ವಲಯದ ರಕ್ಷಣಾ ಕಂಪನಿ ಎಚ್ಎಎಲ್ಗೆ 75 ವರ್ಷ ತುಂಬಿರುವ ಹಿನ್ನೆಲೆಯಲ್ಲಿ, ಅಮೃತ ಮಹೋತ್ಸವದ ಸ್ಮರಣಾರ್ಥ ಅಂಚೆ ಇಲಾಖೆಯು ವಿಶೇಷ ಅಂಚೆ ಚೀಟಿಯನ್ನು ಬಿಡುಗಡೆಗೊಳಿಸಿದೆ.
ಕರ್ನಾಟಕ ವೃತ್ತದ ಮುಖ್ಯ ಪ್ರಧಾನ ಪೋಸ್ಟ್ ಮಾಸ್ಟರ್ ಉಷಾ ಚಂದ್ರಶೇಖರ್ ಅಂಚೆ ಚೀಟಿಯನ್ನು ಬಿಡುಗಡೆಗೊಳಿಸಿದರು. ಎಚ್ಎಎಲ್ನ ಎಚ್ಆರ್ ವಿಭಾಗದ ನಿರ್ದೇಶಕ ವಿ.ಎಂ ಛಾಮೋಲ ಹಾಗೂ ಉಭಯ ಸಂಸ್ಥೆಗಳ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಈ ಸಂದರ್ಭ ಮಾತನಾಡಿದ ಉಷಾ ಚಂದ್ರಶೇಖರ್, '' ಅಂಚೆ ಇಲಾಖೆಯು ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಸಿದ್ಧಪಡಿಸುವ ' ಮೈ ಸ್ಟಾಂಪ್' ಮಾದರಿಯನ್ನು ಸಿದ್ಧಪಡಿಸಿದ್ದು, ಈ ಪರಿಕಲ್ಪನೆಯಲ್ಲಿ ಅಂಚೆ ಚೀಟಿ ಪಡೆಯುತ್ತಿರುವ ಮೊದಲ ಸಂಸ್ಥೆ ಎಚ್ಎಎಲ್ ಆಗಿದೆ'' ಎಂದರು.
''ಎಚ್ಎಎಲ್: ದಿ ಫೋರ್ಸ್ ಬಿಹೈಂಡ್ ದಿ ಫೋರ್ಸಸ್'' ಎನ್ನುವುದು ಅಂಚೆ ಚೀಟಿಯಲ್ಲಿರುವ ಘೋಷಾ ವಾಕ್ಯವಾಗಿದೆ. ಅಮದೃತ ಮಹೋತ್ಸವದ ವಿಶೇಷ ಲಾಂಛನವನ್ನೂ ಇದರಲ್ಲಿ ಬಿಂಬಿಸಲಾಗಿದೆ.
↧
ಎಚ್ಎಎಲ್ ಸ್ಮರಣಾರ್ಥ ಅಂಚೆ ಚೀಟಿ ಬಿಡುಗಡೆ
↧