Quantcast
Channel: VijayKarnataka
Viewing all articles
Browse latest Browse all 6795

ಇಂದಿನಿಂದ 3 ದಿನ ಜ್ಯುವೆಲರ್ಸ್‌ ಮುಷ್ಕರ

$
0
0

ಶೇ.1ರಷ್ಟು ಅಬಕಾರಿ ಸುಂಕದ ಮರು ಜಾರಿ ವಿರೋಧಿಸಿ ಜ್ಯುವೆಲರ್ಸ್‌ ವರ್ತಕರ ಮುಷ್ಕರ
ಮುಂಬಯಿ: ಜ್ಯುವೆಲರ್ಸ್‌ ವಲಯದ ವರ್ತಕರು ಮತ್ತು ಉದ್ಯಮಿಗಳು ಕೇಂದ್ರ ಸರಕಾರ ಶೇ.1ರಷ್ಟು ಅಬಕಾರಿ ಸುಂಕವನ್ನು ಮರು ಜಾರಿಗೊಳಿಸಲು ನಿರ್ಧರಿಸಿರುವುದನ್ನು ವಿರೋಧಿಸಿ ರಾಷ್ಟ್ರ ವ್ಯಾಪಿ 3 ದಿನಗಳ ಮುಷ್ಕರವನ್ನು ಬುಧವಾರ (ಮಾರ್ಚ್ 2) ಆರಂಭಿಸಲು ನಿರ್ಧರಿಸಿದ್ದಾರೆ.

ಶೇ.1 ಅಬಕಾರಿ ಸುಂಕದ ಮರು ಜಾರಿ ಹಾಗೂ 2 ಲಕ್ಷ ರೂ.ಗಿಂತ ಹೆಚ್ಚಿನ ಮೌಲ್ಯದ ಆಭರಣ ವ್ಯವಹಾರಗಳಿಗೆ ಪ್ಯಾನ್ ಕಾರ್ಡ್ ಕಡ್ಡಾಯಗೊಳಿಸಿರುವುದನ್ನು ವಿರೋಧಿಸಿ ಮುಷ್ಕರ ನಡೆಸಲಾಗುವುದು ಎಂದು ಆಲ್ ಇಂಡಿಯಾ ಜೆಮ್ಸ್ ಆ್ಯಂಡ್ ಜ್ಯುವೆಲ್ಲರಿ ಟ್ರೇಡ್ ಫೆಡರೇಷನ್ (ಜಿಜೆಎಫ್) ಅಧ್ಯಕ್ಷ ಶ್ರೀಧರ್ ಜಿ.ವಿ ತಿಳಿಸಿದ್ದಾರೆ.

ಸುಮಾರು 300ಕ್ಕೂ ಹೆಚ್ಚು ಸಂಘಟನೆಗಳು ಭಾಗವಹಿಸಲಿದ್ದು, ಉತ್ಪಾದಕರು, ರಿಟೇಲ್ ವರ್ತಕರು, ಕುಶಲಕರ್ಮಿಗಳು ಮುಷ್ಟರ ಹೂಡಲಿದ್ದಾರೆ ಎಂದು ಹೇಳಿದ್ದಾರೆ.

ಈ ನಡುವೆ ಕೇರಳ ಮತ್ತು ರಾಜ್ ಕೋಟ್‌ನಲ್ಲಿ (ಗುಜರಾತ್) ಎಲ್ಲ ಜ್ಯುವೆಲರ್ಸ್‌ ಅಸೋಸಿಯೇಶನ್‌ಗಳು ಮಂಗಳವಾರವೇ ಮುಷ್ಕರ ಆರಂಭಿಸಿವೆ.

ಬಜೆಟ್‌ನಲ್ಲಿ ಶೇ.1ರ ಅಬಕಾರಿ ಸುಂಕವನ್ನು ಮತ್ತೆ ಜಾರಿಗೊಳಿಸಲು ಪ್ರಸ್ತಾಪಿಸಿರುವುದು ಸಮಂಜಸವಲ್ಲ. 2ಲಕ್ಷ ರೂ.ಗಿಂತ ಹೆಚ್ಚಿನ ಮೊತ್ತದ ವ್ಯವಹಾರಗಳಿಗೆ ಪ್ಯಾನ್ ಕಡ್ಡಾಯ ಮಾಡಿರುವುದರಿಂದ ಈಗಾಗಲೇ ಆಭರಣ ವಲಯದ ವಹಿವಾಟು 25-30 ಪರ್ಸೆಂಟ್ ತಗ್ಗಿದೆ. 2ಲಕ್ಷ ರೂ.ಗಳ ಮಿತಿಯನ್ನು 10 ಲಕ್ಷ ರೂ.ಗೆ ವಿಸ್ತರಿಸುವುದರ ಬದಲಿಗೆ ಶೇ.1ರಷ್ಟು ಅಬಕಾರಿ ಸುಂಕವನ್ನು ಮರು ಜಾರಿಗೊಳಿಸುವ ಸರಕಾರದ ನಿರ್ಧಾರದಿಂದ ಮತ್ತಷ್ಟು ತೊಂದರೆಯಾಗಲಿದೆ ಎಂದು ಶ್ರೀಧರ್ ವಿವರಿಸಿದರು.


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಮುಕೇಶ್ ಅಂಬಾನಿಯವರ ಮೊದಲ ಮನೆ ಹೇಗಿದೆ ಗೊತ್ತಾ?


ಮನವನ್ನು ಮುದಗೊಳಿಸುತ್ತೆ ಪುಟ್ಟ ಕಂದನ ಕ್ಯೂಟ್‌ ವಿಡಿಯೋ


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


ಗುರು ರಾಘವೇಂದ್ರರ ದಿನದ ಭವಿಷ್ಯ ಹಾಗೂ ರಾಶಿ ಫಲ


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ತುಳು ತೆರೆಗೆ ಸೋನಿಯಾ ಎಂಟ್ರಿ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್



<script src="https://jsc.adskeeper.com/r/s/rssing.com.1596347.js" async> </script>