'ಅಧಿಕಾರಕ್ಕೆ ಬರುವ ಮುನ್ನ ಕಾಳಧನಿಕರನ್ನು ಶಿಕ್ಷಿಸಲಾಗುವುದು. ವಿಶ್ವದ ಯಾವುದೇ ಮೂಲೆಯಲ್ಲಿದ್ದರೂ ಕಪ್ಪುಹಣವನ್ನು ದೇಶಕ್ಕೆ ತಂದು ಜನರ ಬ್ಯಾಂಕ್ ಖಾತೆಗೆ ಜಮೆ ಮಾಡುತ್ತೇವೆ ಎಂದು ಬಡಾಯಿ ಕೊಚ್ಚಿಕೊಂಡಿದ್ದ ನಮ್ಮ ಪ್ರಧಾನಿಯವರು ಈಗ ಮಾಡಿದ್ದಾದರೂ ಏನು? ತೆರಿಗೆ ವಂಚಕರ ರಕ್ಷಣೆಗೆ ನಿಲ್ಲುವ ಮೂಲಕ ಜನರ ಆಶೋತ್ತರಗಳಿಗೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ,,'' ಎಂದು ಜರಿದರು. ಈ ಸರಕಾರ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲಬೆಲೆ ಗಣನೀಯ ಪ್ರಮಾಣದಲ್ಲಿ ಇಳಿಕೆ ಕಂಡಿದ್ದರೂ ಜನರಿಗೆ ದೊಡ್ಡ ಮಟ್ಟದಲ್ಲಿ ಅದರ ಲಾಭ ದೊರೆಕಿಸಿಕೊಡುತ್ತಿಲ್ಲ. ಆಹಾರ ಧಾನ್ಯಗಳ ಬೆಲೆ ಏರಿಕೆ ನಿಯಂತ್ರಿಸದೇ ಶ್ರೀಸಾಮಾನ್ಯನ ಬದುಕನ್ನು ದುರ್ಬಲಗೊಳಿಸಿದೆ ಎಂದು ಆಪಾದಿಸಿದರು.
'ಜನ ಕಲ್ಯಾಣ, ಪ್ರಜಾಪ್ರಭುತ್ವದ ಮೌಲ್ಯಗಳ ಬಗ್ಗೆ ಭಾಷಣ ಮಾಡುವ ಪ್ರಧಾನಿಯವರು ಇದುವರೆಗೂ ಜೆಎನ್ಯು ವಿವಾದ, ಹೈದರಾಬಾದ್ ವಿವಿ ದಲಿತ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೇಮುಲ ಆತ್ಮಹತ್ಯೆ ಪ್ರಕರಣದ ಬಗ್ಗೆ ಒಂಚೂರು ಕಳಕಳಿ ವ್ಯಕ್ತಪಡಿಸಿಲ್ಲ,' ಎಂದು ದೂರಿದರು. 'ಮೊನ್ನೆ ಜೇಟ್ಲಿ ಬಜೆಟ್ ಓದುತ್ತಿದ್ದರೆ, ಚಿದಂಬರಂ ಓದುತ್ತಿದ್ದರೆ ಎಂಬ ಅನುಮಾನ ಕಾಡತೊಡಗಿತ್ತು. ಒಂದೆಡೆ ಮೋದಿ, ಎಂನರೇಗಾ ಯೋಜನೆ ಬಗ್ಗೆ ಅಪಸ್ವರ ಎತ್ತಿದರೆ, ಜೇಟ್ಲಿ ಅದರ ಗುಣಗಾನ ಮಾಡತೊಡಗಿದ್ದರು. ನನ್ನ ಬಳಿ ಬಂದು ಅವರು ಎಂನರೇಗಾ ಯೋಜನೆ ಅತ್ಯುತ್ತಮವಾಗಿದೆ ಎಂದು ಹೇಳಿದರು. ನಾನಾಗ ನಿಮ್ಮ ಬಾಸ್(ಮೋದಿ)ಗೆ ಹೋಗಿ ಹಾಗೆ ಹೇಳಿ ಎಂದು ಜೇಟ್ಲಿಗೆ ಹೇಳಿದಾಗ ಅವರಿಂದ ಯಾವ ಮಾತೂ ಹೊರಡಲಿಲ್ಲ,' ಎಂದು ರಾಹುಲ್ ಹೇಳಿದರು.
ಯಾರಿಗೂ ಮಾತಿಗೆ ಬೆಲೆ ಇಲ್ಲ: 'ಮೋದಿ ಅವರದ್ದು ಸರ್ವಾಧಿಕಾರಿ ಧೋರಣೆ. ವಿರೋಧಿಗಳ ಅಭಿಪ್ರಾಯವಿರಲಿ, ತಮ್ಮ ಪಕ್ಷದ ಸಂಸದರು, ಸಚಿವರ ಮಾತನ್ನೇ ಆಲಿಸುವ ಮನಸ್ಥಿತಿ ಅವರದಲ್ಲ.ಹೀಗಾಗಿಯೇ ನಾಗಾ ಒಪ್ಪಂದ ಕುರಿತು ಗೃಹ ಸಚಿವ ರಾಜನಾಥ್ ಸಿಂಗ್ ಅವರಿಗೇ ತಿಳಿದಿರಲಿಲ್ಲ,' ಎಂದು ಲೇವಡಿ ಮಾಡಿದರು. ಕೇವಲ ತಮ್ಮ ಅಭಿಪ್ರಾಯದಿಂದ ಮಾತ್ರ ದೇಶ ಮುನ್ನಡೆಯುತ್ತದೆ ಎಂಬ ಅಹಂಭಾವವನ್ನು ಪ್ರಧಾನಿ ಬಿಡಬೇಕು ಎಂದರು. ' 2008ರ ದಾಳಿ ನಂತರ ಪಕ್ಅನ್ನು ನಾವು ಪಂಜರದೊಳಗೆ ಇರಿಸಿದ್ದೆವು. ಆದರೆ ಮೋದಿ ಅವರು ಪಾಕ್ ಪ್ರಧಾನಿ ನವಾಜ್ ಷರೀಫ್ ಅವರ ಜತೆ ಚಹಾ ಕುಡಿಯುವ ಮೂಲಕ ನಮ್ಮ 6 ವರ್ಷಗಳ ಕೆಲಸವನ್ನು ಏಕಾಂಗಿಯಾಗಿಸಿದರು,' ಎಂದು ದೂರಿದರು.
ನಾನು ಆರೆಸ್ಸೆಸ್ನವನಲ್ಲ, ತಪ್ಪು ಮಾಡುತ್ತೇನೆ...
ತಮ್ಮ ಭಾಷಣದುದ್ದಕ್ಕೂ ಮೋದಿ ಅವರನ್ನು ಕುಟುಕಿದ ರಾಹುಲ್, ಒಂದು ಹಂತದಲ್ಲಿ 'ನಾನು ಆರೆಸ್ಸಸ್ಗೆ ಸೇರಿದವನಲ್ಲ, ಹಾಗಾಗಿಯೇ ತಪ್ಪು ಮಾಡುತ್ತೇನೆ. ಮಹಾತ್ಮ ಗಾಂಧೀಜಿ ನಮ್ಮವರು. ವೀರ್ ಸಾವರ್ಕರ್ ನಿಮ್ಮವರು, ಒಂದೊಮ್ಮೆ ನಾನು ಹೇಳಿದ್ದು ತಪ್ಪು ಎಂದು ನೀವು (ಪ್ರಧಾನಿ) ಭಾವಿಸುವುದಾದರೆ ಸಾವರ್ಕರ್ ಅವರನ್ನು ತಿರಸ್ಕರಿಸುವಿರಾ?'ಎಂದು ಪ್ರಶ್ನಿಸಿದರು.
ಹೊಸದಿಲ್ಲಿ: ಅಪರೂಪಕ್ಕೆ ಎಂಬಂತೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಬುಧವಾರ ವೀರಾವೇಷದಿಂದ ಸಂಸತ್ತಿನಲ್ಲಿ ಕೇಂದ್ರ ಸರಕಾರದ ವಿರುದ್ಧ ಹರಿಹಾಯ್ದರು. ಲೋಕಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣದ ವಂದನಾ ನಿರ್ಣಯ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಈ ಬಾರಿಯ ಬಜೆಟ್ನಲ್ಲಿ ಕಾಳಧನಿಕರಿಗೆ ಗ್ರೇಸ್ ಅವಧಿ ಎಂಬಂತೆ ಪ್ರಕಟಿಸಿರುವ 'ಅನುಸರಣಾ ಗವಾಕ್ಷಿ ಪದ್ಧತಿ'ಯನ್ನು ಮುಂದಿಟ್ಟುಕೊಂಡು ಇದೊಂದು 'ಫೇರ್ ಅಂಡ್ ಲವ್ಲಿ' ಸ್ಕೀಮ್ ಎಂದು ಜರಿದರು. 'ಕಪ್ಪುಹಣ'ವನ್ನು (ತೆರಿಗೆ ವಂಚನೆ ದುಡ್ಡು) 'ಬಿಳಿ'ಯಾಗಿಸುವ (ಸಕ್ರಮಗೊಳಿಸುವ) ಕ್ರಮ ಎಂದು ಕೆಂಡಕಾರಿದರು.