ಆಲ್ ಇಂಡಿಯಾ ಸ್ಟೂಡೆಂಟ್ಸ್ ಫೆಡರೇಶನ್ ಕಾರ್ಯಕರ್ತ ವಿಷ್ಣು ಜೈಸ್ವಾಲ್ ಅವರೇ ಈ ಟಿ ಶರ್ಟ್ ಉಪಾಯ ನೀಡಿದ್ದಾರೆ ಎನ್ನಲಾಗಿದೆ.
ಈ ಟಿ ಶರ್ಟ್ನ ಮೇಲೆ 'ಮೇರಾ ಯಾರ್ ಕನ್ಹಯ್ಯ ಕುಮಾರ್' (ನನ್ನ ಸ್ನೇಹಿತ ಕನ್ಹಯ್ಯ) ಎಂದು ಬರೆಯಲಾಗಿದೆ. 150 ರೂಪಾಯಿಗೆ ಟಿ ಶರ್ಟ್ ಮಾರಾಟ ಮಾಡಲಾಗುತ್ತಿದೆ ಎಂದು ಜೈಸ್ವಾಲ್ ತಿಳಿಸಿದ್ದಾರೆ.
ಈ ಹೊಸ ಐಡಿಯಾದ ಬಗ್ಗೆ ಸಂಘಟನೆಯೊಳಗೇ ಕೆಲವರಿಗೆ ಭಿನ್ನಾಭಿಪ್ರಾಯಗಳಿವೆ ಎನ್ನಲಾಗಿದೆ. ಆದರೆ, ಇದರ ಹಿಂದೆ ಹಣ ಮಾಡುವ ಉದ್ದೇಶವಿಲ್ಲ . ಬದಲಾಗಿ ಕನ್ಹಯ್ಯನನ್ನು ಬ್ರ್ಯಾಂಡ್ ಆಗಿಸುವ ಪ್ರಯತ್ನ ಎಂದು ಜೈಸ್ವಾಲ್ ತಿಳಿಸಿದ್ದಾರೆ.
ಪ್ರತಿಭಟನಾ ನಿರತರು ಶಾಂತಿಯ ಸಂಕೇತವಾಗಿ ಗುಲಾಬಿ ಹೂಗಳನ್ನು ಬಳಸುತ್ತಿದ್ದು. ಇದರಿಂದ ಹೂ ಮಾರಾಟಗಾರರಿಗೂ ಭರ್ಜರಿ ಲಾಭವಾಗಿದೆ ಎಂದು ತಿಳಿದುಬಂದಿದೆ.
ಹೊಸದಿಲ್ಲಿ: ಜೆಎನ್ಯು ವಿವಿ ಕ್ಯಾಂಪಸ್ನಲ್ಲಿ ಗುರುವಾರ ಪ್ರತಿಭಟನಾ ನಿರತರಾದ ನೂರಾರು ವಿದ್ಯಾರ್ಥಿಗಳು ಕನ್ಹಯ್ಯ ಕುಮಾರ್ ಭಾವಚಿತ್ರವನ್ನೊಳಗೊಂಡ ಟಿ ಶರ್ಟ್ ಧರಿಸುವ ಮೂಲಕ ಗಮನ ಸೆಳೆದರು. ಟಿ ಶರ್ಟ್ಗಳನ್ನು ಕೆಲವರು ಮಾರಾಟ ಮಾಡಿದರೆ, ಇನ್ನೂ ಕೆಲವನ್ನು ಉಚಿತವಾಗಿ ನೀಡಲಾಗಿದೆ.