Quantcast
Channel: VijayKarnataka
Viewing all articles
Browse latest Browse all 6795

ಚೆನ್ನೈನಲ್ಲಿನ್ನು ಹಿರಿಯ ನಾಗರಿಕರಿಗೆ ಉಚಿತ ಬಸ್‌ ಪ್ರಯಾಣ

$
0
0

ಚೆನ್ನೈ: ಹಿರಿಯ ನಾಗರಿಕರಿಗೆ ಉಚಿತ ಬಸ್ ಪ್ರಯಾಣ ಯೋಜನೆಯನ್ನು ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ ಗುರುವಾರ ಪ್ರಕಟಿಸಿದ್ದಾರೆ.

ಇನ್ನು ಮುಂದೆ ಹಿರಿಯ ನಾಗರಿಕರು ತಿಂಗಳಲ್ಲಿ 10 ಸಲ ಸರಕಾರಿ ಸ್ವಾಮ್ಯದ ಸಾರಿಗೆ ಸಂಸ್ಥೆ (ಎಂಟಿಸಿ) ಬಸ್‌ಗಳಲ್ಲಿ ಉಚಿತವಾಗಿ ಪಯಣಿಸಬಹುದು ಎಂದು ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಘೋಷಿಸಿದರು.

ಈ ನೂತನ ಯೋಜನೆಯುವ ಮುಖ್ಯಮಂತ್ರಿ ಜೆ.ಜಯಲಲಿತಾ ಅವರ ಜನ್ಮದಿನವಾದ ಫೆಬ್ರವರಿ 24ರಿಂದ ಅನುಷ್ಠಾನಕ್ಕೆ ಬರಲಿದೆ.

ಯೋಜನೆಯನ್ನು ಮೊದಲ ಬಾರಿಗೆ ಚೆನ್ನೈಗೆ ಸೀಮಿತವಾಗಿ ಅನುಷ್ಠಾನಕ್ಕೆ ತಂದರೂ, ಪ್ರತಿಕ್ರಿಯೆ ಆಧರಿಸಿ ತಮಿಳುನಾಡಿನ ಇತರೆ ನಗರ ಹಾಗೂ ಪಟ್ಟಣಗಳಿಗೂ ವಿಸ್ತರಿಸುವ ಬಗ್ಗೆ ನಿರ್ಧರಿಸಲಾಗುವುದು ಎಂದು ಅವರು ತಿಳಿಸಿದರು.

2011ರ ಚುನಾವಣೆ ವೇಳೆ ನಾವು ಪಕ್ಷದ ಪ್ರಣಾಳಿಕೆಯನ್ನು ಅನೇಕ ಭರವಸೆಗಳನ್ನು ನೀಡಿದ್ದೆವು. ಆ ಸಂದರ್ಭದಲ್ಲಿ ನಾವು ಹಿರಿಯ ನಾಗರಿಕರಿಗೆ ಉಚಿತ ಬಸ್‌ ಪ್ರಯಾಣದ ಆಶ್ವಾಸನೆಯನ್ನೂ ಕೊಟ್ಟಿದ್ದೆವು. ಅದನ್ನೀಗ ನಿಜವಾಗಿಸುತ್ತಿದ್ದೇವೆ. ಹಾಗೂ ಈ ಯೋಜನೆಯನ್ನು ಹೆಮ್ಮೆಯಿಂದ ಘೋಷಿಸುತ್ತಿದ್ದೇನೆ ಎಂದು ಸಿಂಎ ಜಯಲಲಿತಾ ಹೇಳಿದಾಗ ಪಕ್ಷದ ಶಾಸಕರು ಮೇಜು ಕುಟ್ಟಿ ಸ್ವಾಗತಿಸಿದರು.

60 ವರ್ಷ ಮೀರಿದ ನಾಗರಿಕರು ಈ ಉಚಿತ ಪ್ರಯಾಣಕ್ಕೆ ಅರ್ಹರು. ಅವರು ಎಂಟಿಸಿ ಡಿಪೋ ಹಾಗೂ ಕಚೇರಿಗಳಿಂದ ಟೋಕನ್‌ಗಳನ್ನು ಪಡೆದುಕೊಳ್ಳಬಹುದು.

ಪ್ರತಿ ಹಿರಿಯ ನಾಗರಿಕರಿಗೆ ತಿಂಗಳಿಗೆ 10 ಟೋಕನ್‌ಗಳು ಸಿಗಲಿವೆ. ಇದಕ್ಕಾಗಿ ಹಿರಿಯರು ಅರ್ಜಿಯನ್ನು ಭರ್ತಿ ಮಾಡಿ, ತಮ್ಮ ಫೋಟೊ ಸಹಿತ ಗುರುತಿನ ಚೀಟಿಯನ್ನು ಎಂಟಿಸಿ ಡಿಪೋಗಳಿಂದ ಪಡೆದುಕೊಳ್ಳಬೇಕು ಎಂದು ಜಯಲಲಿತಾ ವಿನಂತಿಸಿದರು.

ಈ ಅರ್ಜಿಯನ್ನು ಪಡೆದುಕೊಳ್ಳಲು ಯಾವುದೇ ಕಾಲಮಿತಿ ಇಲ್ಲ. ಯಾವ ಹಿರಿಯರು ಯಾವಾಗ ಬೇಕಾದರೂ ಅರ್ಜಿ ಪಡೆದು ಸಲ್ಲಿಸಿ ಗುರುತಿನ ಚೀಟಿ, ಟೋಕನ್‌ಗಳನ್ನು ಪಡೆದುಕೊಳ್ಳಬಹುದು ಎಂದ ಮುಖ್ಯಮಂತ್ರಿ, ನಾವು ಪ್ರಣಾಳಿಕೆಯಲ್ಲಿ ನೀಡಿದ್ದ ಹೆಚ್ಚಿನ ಸಂಖ್ಯೆಯ ಕಲ್ಯಾಣ ಯೋಜನೆಗಳನ್ನು ಅನುಷ್ಠಾನಕ್ಕೆ ತರಲಿದ್ದೇವೆ ಎಂದು ತಿಳಿಸಿದರು.


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ಅಪಘಾತ ಗಾಯಾಳುಗಳಿಗೆ ನೆರವು ನೀಡಿದವರಿಗೆ ಜೀವರಕ್ಷಕ ಪ್ರಶಸ್ತಿ


ಜಮೀನಿನಲ್ಲೇ ಘೋರ ದುರಂತ: ನೀರು ತುಂಬಿದ್ದ ಗುಂಡಿಗೆ ಬಿದ್ದು ಮೂವರು ಸಾವು


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


ವಚನಗಳಿಂದ ಸಂಗೀತ ಲೋಕ ಶ್ರೀಮಂತ


ಶಿವಸೇನೆ ಬಿಗಿಪಟ್ಟು: ದೇಶ ಗೆದ್ದ ಬಿಜೆಪಿ ವಿಲವಿಲ


ಶುಭ ಫಲಕ್ಕಾಗಿ ಮನೆಯಲ್ಲಿ ಗಾಳಿ ಗಂಟೆ ಹಾಕುವ ಮುನ್ನ ಈ ವಿಚಾರ ತಿಳಿಯಿರಿ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ತುಳು ತೆರೆಗೆ ಸೋನಿಯಾ ಎಂಟ್ರಿ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್



<script src="https://jsc.adskeeper.com/r/s/rssing.com.1596347.js" async> </script>