ಕುತ್ತಿಗೆ ಬಳಿ ಗಾಯಗೊಂಡಿರುವ ಬೀದಿ ನಾಯಿಯನ್ನು ಗಮನಿಸಿದ ಠಾಣೆಯ ಲೋಕಮಾನ್ಯ ನಗರ್ ಪ್ರದೇಶದ ನಿವಾಸಿ ಜಯಂತ್ ಮೆಸ್ತ್ರಿ, ಕೂಡಲೇ ಅದನ್ನು ಆಸ್ಪತ್ರೆಗೆ ಕರೆದೊಯ್ದರು. ಮರು ದಿನವೇ ಶಸ್ತ್ರಚಿಕಿತ್ಸೆ ನೆರವೇರಿಸಿದ ವೈದ್ಯರು ಅದರ ಕುತ್ತಿಗೆಯಲ್ಲಿದ್ದ 4.5 ಕೆ.ಜಿ.ಯ ಗಡ್ಡೆಯನ್ನು ತೆಗೆದಿದ್ದಾರೆ. ಶಸ್ತ್ರಚಿಕಿತ್ಸೆ ನಂತರ ಮೆಸ್ತ್ರಿ ಅವರ ಆರೈಕೆ, ಉಪಚಾರದಿಂದ ಬೀದಿ ನಾಯಿ ಚೇತರಿಸಿಕೊಂಡಿದೆ.
'ಕುತ್ತಿಗೆಯಲ್ಲಿ ಗಡ್ಡೆ ಇದ್ದ ಕಾರಣ ನಾಯಿಗೆ ನಡೆಯಲು ಆಗುತ್ತಿರಲಿಲ್ಲ. ಇನ್ನು ಮುಂದೆ ಆರಾಮವಾಗಿ ನಡೆದಾಡಲಿದೆ. ಅದರ ಆರೋಗ್ಯ ಸುಧಾರಿಸುತ್ತಿದ್ದು, 2-3 ದಿನಗಳಲ್ಲಿ ಆಹಾರ ಸೇವಿಸಲಿದೆ,' ಎಂದು ಪಶುವೈದ್ಯ ಅಜಿತ್ ಗೊರೆ ಹೇಳಿದ್ದಾರೆ.
ಪ್ರಾಣಿ ಪ್ರೇಮಿ ಎಂದು ಗುರುತಿಸಿಕೊಂಡಿರುವ ಮೆಸ್ತ್ರಿ, ಈ ಮೊದಲು ಆಮೆಗೆ ಚಿಕಿತ್ಸೆ ಕೊಡಿಸಿದ್ದರು. ಚಿಪ್ಪಿನೊಳಗೆ ತಲೆ ಹಾಕಲು ಸಾಧ್ಯವಾಗದೆ ಒದ್ದಾಡುತ್ತಿದ್ದ ಆಮೆಗೂ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ಠಾಣೆ ಸುತ್ತಮುತ್ತಲ ಪ್ರದೇಶದಲ್ಲಿ ಗಾಯಗೊಂಡಿರುವ ಪ್ರಾಣಿ, ಪಕ್ಷಗಳನ್ನು ಕಂಡರೆ ಮಿಸ್ತ್ರಿ ಕೂಡಲೇ ಅದರ ಚಿಕಿತ್ಸೆಗೆ ಏರ್ಪಾಡು ಮಾಡುತ್ತಾರೆ.
ಠಾಣೆ: ಬೀದಿ ನಾಯಿಗಳನ್ನು ಕಂಡರೆ ಕಲ್ಲು ಹೊಡೆಯುವವರೇ ಹೆಚ್ಚು. ಅನಾರೋಗ್ಯ ಪೀಡಿತ ಬೀದಿ ನಾಯಿ ಜತೆ ಪಶುವೈದ್ಯ ಶಾಲೆ ಹೊರಗೆ ರಾತ್ರಿ ಕಳೆದ ಜಯಂತ್ ಮೆಸ್ತ್ರಿ ಅಂಥವರ ಸಂಖ್ಯೆ ತೀರಾ ಕಡಿಮೆ ಎನ್ನಬಹುದು.