Quantcast
Channel: VijayKarnataka
Viewing all articles
Browse latest Browse all 6795

ದಾರಿ ದೀಪ: ಹರಕೆ ಉಳಿಕೆಗೆ ಪರಿಹಾರ

$
0
0

* ಹರೀಶ್ ಕಾಶ್ಯಪ್

*ಅನೇಕ ವರ್ಷಗಳಿಂದ ಹರಕೆಗಳು ಉಳಿದಿವೆ. ಗೊಂದಲಗಳಿವೆ. ಪರಿಹಾರವೇನು?

ವಿಜಯಾ ಕಾಮತ್, ಹುಬ್ಬಳ್ಳಿ

ದೇವರೇನೂ ಬಂದು ಸಾಲ ಕೇಳುವುದಿಲ್ಲ. ಹಾಗೆಂದು ಮನಸ್ಸಿಗೆ ಬಂದಂತೆ ಅನೇಕರು ಹಲವು ಹರಕೆ ಮಾಡಿ ಮರೆವರು! ಮನೆಯವರೂ ತೀರಿಸದೆ ಉಳಿದದ್ದೂ ಸೇರಿ, ಇರುವ ನಿಮ್ಮಂಥವರನ್ನೂ ಋಣದಲ್ಲಿ ಹಾಕುವರು! ಮೊದಲಿಗೆ 'ಹರಕೆ'ಯಿಂದ ನಾವು ಉನ್ನತಿ ಪಡೆವುದೇ ಹೊರತು ದೇವರಿಗೇನೂ ಆಗಬೇಕೆಂದಿಲ್ಲ. ಆದರೆ ದೇವರು ಸಾಕ್ಷಿ ಎನಿಸಿದ್ದಾರೆ. ಆ ಸಾಕ್ಷಿಯೇ ಮಾನಸಿಕ ಕ್ಲೇಶವಾಗಿ ಹರಕೆ ತಲೆಯನ್ನು ಹಿಡಿವುದು. ಮತ್ತೆ ಮುಖ್ಯವಾಗಿ ಹರಕೆ ಮಾಡುವುದು ಒಂದು ಆ ಕ್ಷಣದ ಗಂಭೀರತೆ ಹೊರತು ನಂತರ ಸಂಸಾರ ಜಂಜಾಟದಲ್ಲಿ ಗೌಣವಾಗುವುದೇ ಹೆಚ್ಚು. ಹೀಗಾಗಿ 'ಹರಕೆ' ಏನೋ ಅದನ್ನು ಆ ಕೂಡಲೇ ನೆರವೇರಿಸಿ 'ಕೃಷ್ಣಾರ್ಪಣ' ಮಾಡಿಬಿಟ್ಟರೆ ದೇವರಿಗೂ ತಲೆಬಿಸಿ ಇಲ್ಲ. ಹರಕೆಯ ತಲೆಗಳಿಗೂ ತಾಪವಿಲ್ಲ! ಆದರೆ ಜನ ಹಾಗೆ ಚಿಂತಿಸೋದಿಲ್ಲ, ತಪ್ಪಿಸಿಕೊಳ್ಳೋ ಮಾರ್ಗ ಹುಡುಕುತ್ತಿರುತ್ತಾರೆ. ಆದರೆ ಕರ್ಮಸೂತ್ರ ಬಹಳ ಅಚ್ಚುಕಟ್ಟು. ಅದು ವಿವಿಧ ಬಗೆಯಲ್ಲಿ ವಸೂಲ್ ಮಾಡದೇ ಬಿಡದು. ಹರಕೆಯು ಸಮಸ್ಯೆ ಬಿಡಿಸುವ ಪ್ರಾಚೀನ ಸಾಧನ. ಅದೇ ಸಮಸ್ಯೆಯಾಗಿ ಮಾಡಿಕೊಂಡರು ಜನ! ಏಕೆ-ಏನು ಎಂಬ ವಿವರ ಇಷ್ಟು ಹೇಳಬೇಕಾಯ್ತು. ನಿಮಗೆ ಅನೇಕ ಹರಕೆಯ ತೀರುವಳಿ ಇರುವುದರಿಂದ ಎಲ್ಲ ಈಗ ನೆರವೇರಿಸಲಾಗದು. ಪ್ರತಿ ಶುಕ್ರವಾರ ಫಲಾಹಾರ ಮಾತ್ರ ಮಾಡುತ್ತ ಪುರೋಹಿತರಿಂದ ಸಂಕಲ್ಪ ಮಾಡಿಸಿ-ಗಾಯತ್ರಿ ಜಪ ವಿಧಿಯಂತೆ ಒಂದು ಲಕ್ಷ ಸಂಖ್ಯೆ ಮಾಡಿ- ಆ ನಂತರ ಕುಲದೇವರಿಗೆ ರಥೋತ್ಸವ-ಮಹಾ ಪೂಜೆ ಸಹಿತ ದಶಸಹಸ್ರ ಗಾಯತ್ರಿ ಹೋಮ ಆಗಬೇಕು. ಹೋಮಾದಿಗಳ ವಿವರ ವಿಧಿವಿಧಾನ ಉತ್ತಮ ಪುರೋಹಿತರಿಂದ ತಿಳಿದು ಮಾಡಿಸಿ. ಇದು ಸಮಸ್ತ ಹರಕೆಗಳ ಪ್ರಾಯಶ್ಚಿತ್ತವಾಗುವುದು ಮತ್ತು ಇನ್ನೊಂದು ಹರಕೆಯನ್ನು ಮೊದಲು ಮಾಡಿಬಿಡಿ!

*ಗುರುದೋಷವಿದೆ ಎಂದು ಹೇಗೆ ನಿರ್ಣಯ ಮಾಡುವುದು ಗುರುಗಳೇ? ವಿವರ ಕಳಿಸಿರುವೆ.

ವಿಕಾಸ್ ಭಟ್, ಬೆಂಗಳೂರು

ಸಿಂಹರಾಶಿಯ ನಿಮಗೆ ಬಾಧಾಗತನಾಗಿ ಮೇಷದ ಗುರು -ರಾಹು ಇರುವುದರಿಂದ ಹಾಗೆ ಹೇಳಿರುವರು. ಸರಿಯಾಗೇ ಇದೆ. ಯಾವುದೇ ಜಾತಕದ ಕನ್ಯಾ-ಮಿಥುನ-ವೃಶ್ಚಿಕ-ಮಕರಗಳಲ್ಲಿ (ವಿಶೇಷವಾಗಿ)ಗುರುವು ಶನಿ-ರಾಹುವನ್ನು ಬೆರೆದರೆ ಅದು ಗುರುದೋಷ. ಲಗ್ನವಾದರೆ ಗುರುನಿಂದೆ-ದ್ವಿತೀಯವಾದರೆ ವಾಕ್‌ದೋಷ-ಗುರು ಶಾಪ, ತೃತೀಯವಾದರೆ ಹೀನ ಸಂಗ, ಚತುರ್ಥ ಸುಖನಾಶ. ಹೀಗೆ ಭಾವಗಳು ಅನೇಕವಿದೆ. ಹಾಗೆಯೇ ಪ್ರತಿ ವರ್ಗದ ಜನರಿಗೆ ಪ್ರತ್ಯೇಕ ಬಗೆಯ ಪ್ರಾಯಶ್ಚಿತ್ತಗಳಿವೆ. ಇದು ಅದಲು-ಬದಲಾದರೆ ಕರ್ಮ ಪ್ರಮಾದ ದೋಷವಾಗುವುದು! ಬಹಳ ಜಟಿಲ ಶಾಸ್ತ್ರವಿದು, ಸುಮ್ಮನೆ ಬಾರದು. ನಿಮ್ಮ ತಂದೆ ಇರುವುದರಿಂದ, ಅವರಿಂದ ಕೆಲ ಪ್ರಾಯಶ್ಚಿತ್ತಗಳಾಗಿ ಜತೆಯಲ್ಲಿ ನಿಮ್ಮ ಉಪಾಸನೆ ನಡೆದಲ್ಲಿ ಸರಿಯಾಗುವುದು. ಯಾವುದಕ್ಕೂ ಪ್ರಶ್ನೆ ಹಾಕಿ ಸ್ಫುಟ ಮಾಡಿಕೊಳ್ಳುವುದೇ ಒಳಿತು.


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಮುಕೇಶ್ ಅಂಬಾನಿಯವರ ಮೊದಲ ಮನೆ ಹೇಗಿದೆ ಗೊತ್ತಾ?


ಮನವನ್ನು ಮುದಗೊಳಿಸುತ್ತೆ ಪುಟ್ಟ ಕಂದನ ಕ್ಯೂಟ್‌ ವಿಡಿಯೋ


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


ಗುರು ರಾಘವೇಂದ್ರರ ದಿನದ ಭವಿಷ್ಯ ಹಾಗೂ ರಾಶಿ ಫಲ


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ತುಳು ತೆರೆಗೆ ಸೋನಿಯಾ ಎಂಟ್ರಿ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್



<script src="https://jsc.adskeeper.com/r/s/rssing.com.1596347.js" async> </script>