Quantcast
Channel: VijayKarnataka
Viewing all articles
Browse latest Browse all 6795

ಭಾರತಕ್ಕೆ ಸ್ವಾತಂತ್ರ್ಯ ಕೊಡಲು ನೇತಾಜಿ ಕಾರಣ: ಲಾರ್ಡ್ ಅಟ್ಲೀ

$
0
0

ಹೊಸದಿಲ್ಲಿ: ಖ್ಯಾತ ಕಾದಂಬರಿಕಾರ ಎಸ್.ಎಲ್.ಭೈರಪ್ಪ ಅವರು 'ಭಾರತಕ್ಕೆ ಸ್ವಾತಂತ್ರ್ಯ ತಂದು ಕೊಡುವಲ್ಲಿ ಗಾಂಧೀಜಿಯ ಅಹಿಂಸಾ ಮಾರ್ಗದ ಪಾತ್ರ ಅಷ್ಟಿರಲಿಲ್ಲ,' ಎಂದು ಹೇಳಿದ್ದು ವಿವಾದವಾಗಿದ್ದು, ಈ ಬೆನ್ನಲ್ಲೇ ಅವರ ಹೇಳಿಕೆಗೆ ಪುಷ್ಟಿ ನೀಡುವಂಥ ಪುಸ್ತಕವೊಂದು ಬಿಡುಗಡೆಯಾಗುತ್ತಿದೆ.

ಇತ್ತೀಚೆಗೆ ನರೇಂದ್ರ ಮೋದಿ ಸರಕಾರ ನೇತಾಜಿ ಸುಭಾಷ್ ಚಂದ್ರ ಬೋಸ್ ಜೀವನಕ್ಕೆ ಸಂಬಂಧಿಸಿದ ಅನೇಕ ಕಡತಗಳನ್ನು ಬಿಡುಗಡೆಗೊಳಿಸಿದೆ. ಇದರಿಂದ ಬೋಸ್ ಸಾವಿನ ಗುಟ್ಟು ರಟ್ಟಾಗದಿದ್ದರೂ, ಈ ಕಡತಗಳು ಅನೇಕ ಸತ್ಯಗಳನ್ನು ಬಯಲಿಗೆಳೆಯಲಿದೆ. ಅಲ್ಲದೇ ಭಾರತೀಯ ಆಧುನಿಕ ಇತಿಹಾಸವನ್ನು ಮರು ಸೃಷ್ಟಿಸುವ ಅಗತ್ಯವನ್ನು ಮನಗಾಣಿಸಿದೆ.

ಸೈನ್ಯ ಇತಿಹಾಸ ತಜ್ಞ ಜ.ಜಿ.ಡಿ. ಬಕ್ಷಿ ಬರೆದ 'ಬೋಸ್: ಆ್ಯನ್ ಇಂಡಿಯನ್ ಸಮುರಾಯ್' ಎಂಬ ಪುಸ್ತಕವೊಂದು ಬಿಡುಗಡೆಯಾಗಲಿದ್ದು, ಇದರಲ್ಲಿ ಭಾರತ ಸ್ವಾತಂತ್ರ್ಯ ಪಡೆಯುವಲ್ಲಿ ಬೋಸ್ ಪಾತ್ರ ಎಷ್ಟಿತ್ತು, ಗಾಂಧೀಜಿಯ ಬಗ್ಗೆ ಬ್ರಿಟಿಷರಿಗೆ ಯಾವ ಅಭಿಪ್ರಾಯವಿತ್ತು ಎಂಬುದನ್ನು ವಿವರಿಸಲಾಗಿದೆ, ಎಂದು 'ಮೇಲ್ ಟುಡೇ' ವರದಿ ಮಾಡಿದೆ.

ದೇಶ ಸ್ವತಂತ್ರವಾದಾಗ ಅಧಿಕಾರವನ್ನು ಹಸ್ತಾಂತರಿಸಿ, ಸಹಿ ಮಾಡಿದ್ದ ಬ್ರಿಟಿಷ್ ಪ್ರಧಾನಿ ಕ್ಲೆಮೆಂಟ್ ಅಟ್ಲೀ, 'ಭಾರತ ಸ್ವಾತಂತ್ರ್ಯ ಪಡೆಯುವಲ್ಲಿ ನೇತಾಜಿಯವರ ಭಾರತೀಯ ರಾಷ್ಟ್ರೀಯ ಸೈನ್ಯದ ಪಾತ್ರ ಬಹಳ ಪ್ರಮುಖವಾದದ್ದು,' ಎಂದು ಹೇಳಿರುವುದು ಈ ಪುಸ್ತಕದಲ್ಲಿ ಪ್ರಮುಖವಾಗಿ ಉಲ್ಲೇಖವಾಗಿದೆ.

ಅಷ್ಟೇ ಅಲ್ಲ, 'ಭಾರತ ಸ್ವಾತಂತ್ರ್ಯ ಪಡೆಯುವಲ್ಲಿ ಗಾಂಧೀಜಿಯ ಅಹಿಂಸಾ ತತ್ವದ ಪಾತ್ರ ಗೌಣ,' ಎಂದು ಅಟ್ಲೀ ಹೇಳಿದ್ದರೆನ್ನಲಾಗಿದೆ.

ದೇಶ ಸ್ವತಂತ್ರರಾಗಿರುವುದಾಗಿ ಸಹಿ ಮಾಡಿ, ಎರಡು ದಿನಗಳ ಕಾಲ ಕೊಲ್ಕತ್ತಾದ ರಾಜ್ಯಪಾಲರ ಅರಮನೆಯಲ್ಲಿ ಅಟ್ಲೀ ತಂಗಿದ್ದರು. ಆಗಿನ ಪಶ್ಚಿಮ ಬಂಗಾಳದ ಗೌರ್ನರ್ ಆಗಿದ್ದ ನ್ಯಾ.ಪಿ.ಬಿ.ಚಕ್ರವರ್ತಿಯವರೊಂದಿಗೆ ಅವರು ನಡೆಸಿದ ಮಾತುಕತೆಯ ತುಣುಕಗಳನ್ನು ಬಕ್ಷಿ ತಮ್ಮ ಪುಸ್ತಕದಲ್ಲಿ ಪ್ರಸ್ತುತಪಡಿಸಿದ್ದಾರೆ.

ಚಕ್ರವರ್ತಿ ಹೇಳಿದ್ದೇನು?: 'ನಾನು ಪ.ಬಂಗಾಳದ ಪ್ರಭಾರಿ ರಾಜ್ಯಪಾಲನಾಗಿ ಕಾರ್ಯನಿರ್ವಹಿಸುವಾಗ ಅಟ್ಲೀಯೊಂದಿಗೆ ಸಾಕಷ್ಟು ಸಮಯ ಕಳೆಯುವ ಅವಕಾಶ ಸಿಕ್ಕಿತ್ತು. ಆಗಲೇ ಅವರೊಂದಿಗೆ ಭಾರತದಿಂದ ಬ್ರಿಟಿಷರು ತೊಲಗಲು ಕಾರಣವಾದ ಪ್ರಮುಖ ಅಂಶಗಳ ಬಗ್ಗೆಯೂ ಚರ್ಚಿಸಿದೆ. ಬಹಳ ವರ್ಷಗಳ ಹಿಂದೆಯೇ 'ಬ್ರಿಟಿಷರೇ ಭಾರತ ಬಿಟ್ಟು ತೊಲಗಿ' ಚಳುವಳಿ ಗಾಂಧೀಜಿ ನೇತೃತ್ವದಲ್ಲಿ ಆರಂಭಗೊಂಡಿದ್ದರೂ ತರಾತುರಿಯಲ್ಲಿ 1947ರಲ್ಲಿ ದೇಶಕ್ಕೆ ಸ್ವತಂತ್ರ ಬರಲು ಕಾರಣವೆನೆಂಬುವುದು ಅವರಿಗೆ ನನ್ನ ನೇರ ಪ್ರಶ್ನೆಯಾಗಿತ್ತು. ಇದಕ್ಕೆ ಅಟ್ಲೀ ಹಲವು ಕಾರಣಗಳನ್ನು ನೀಡಿದ್ದರಾದರೂ, ಅದರಲ್ಲಿ ಪ್ರಮುಖವಾದದ್ದು 'ನೇತಾಜಿ ಸೈನ್ಯ ಚಟುವಟಿಕೆಗಳಿಂದ ಭಾರತೀಯ ಸೈನ್ಯ ಹಾಗೂ ನೌಕಾ ಸಿಬ್ಬಂದಿ ಬ್ರಿಟಿಷ್ ಆಡಳಿತಕ್ಕೆ ತಮ್ಮ ನಿಷ್ಠೆಯನ್ನು ಕಳೆದುಕೊಂಡಿದ್ದು,' ಎಂಬುದಾಗಿತ್ತು,' ಎಂದಿದ್ದಾರೆ.

'ಸಂಭಾಷಣೆಯ ಕಡೆಯಲ್ಲಿ ನಾನು ಅಟ್ಲೀಗೆ ಬ್ರಿಟಿಷರನ್ನು ಭಾರತದಿಂದ ತೊಲಗಿಸುವಲ್ಲಿ ಗಾಂಧೀಜಿಯ ಪಾತ್ರ ಎಷ್ಟರ ಮಟ್ಟಿಗೆ ಪ್ರಮುಖವಾಗಿತ್ತೆಂದು ಪ್ರಶ್ನಿಸಿದೆ. ಅದಕ್ಕೆ ಅವರು ಮುಖದಲ್ಲಿ ಕೊಂಕು ನಗೆಯೊಂದು ಬೀರಿ, ಪದಗಳನ್ನು ನುಂಗುತ್ತಾ 'ನ..ಗ...ಣ್ಯ.' ಎಂದು ಉತ್ತರಿಸಿದ್ದರು,' ಎಂದು ಚಕ್ರವರ್ತಿ ಹೇಳಿದ್ದಾರೆ.

1982ರಲ್ಲಿ ರಂಜನ್ ಬೊರ್ರಾ ಅವರ 'ಐತಿಹಾಸಿಕ ಪುನರ್ವಿಮರ್ಶೆ' ಕೃತಿಯಲ್ಲಿ ಈ ಸಂಭಾಷಣೆ ಪ್ರಕಟವಾಗಿದೆ.


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ಮಲಗಿದ್ದ ಮಹಿಳೆ ಬೆದರಿಸಿ ಬೆತ್ತಲೆ ಫೋಟೋ ತೆಗೆದ ಕಳ್ಳ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್


‘ವ್ಯಾಪಾರ’ದಲ್ಲಿ ವೃದ್ಧಿಯಾಗಲು ಹೀಗೆ ಮಾಡಿ….


ಅಪ್ಪ ಅಮ್ಮ ಬೈಯ್ತಾರೆ ಅಂತ ಬೆಂಗಳೂರಿಂದ ಚಳ್ಳಕೆರೆಗೆ ಹೋದ ಮಕ್ಕಳು


Indira Canteen : ‘ಇಂದಿರಾ ಕ್ಯಾಂಟೀನ್’ನಲ್ಲಿ ಮಾಂಸ ಸೇವನೆಗೂ ಅವಕಾಶವಿದೆ : ಸಚಿವ...


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


Namaskāra नमस्कार (salutation)


ತುಳು ತೆರೆಗೆ ಸೋನಿಯಾ ಎಂಟ್ರಿ



<script src="https://jsc.adskeeper.com/r/s/rssing.com.1596347.js" async> </script>