Quantcast
Channel: VijayKarnataka
Viewing all articles
Browse latest Browse all 6795

ಅರುಣಾಚಲಕ್ಕೆ ಕಾನೂನು, ಸುವ್ಯವಸ್ಥೆ ಸಮಸ್ಯೆ

$
0
0

ರಾಷ್ಟ್ರಪತಿ ಆಡಳಿತಕ್ಕೆ ಪ್ರಣಬ್ ಅಂಕಿತ

ಹೊಸದಿಲ್ಲಿ: ಅರುಣಾಚಲ ಪ್ರದೇಶದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಗೆ ತರುವಂತೆ ನರೇಂದ್ರ ಮೋದಿ ಸರಕಾರ ಮಾಡಿದ್ದ ಶಿಫಾರಸು ಬಗ್ಗೆ ತೃಪ್ತಿ ಹೊಂದಲು ಮತ್ತು ಸರಿಯಾದ ನಿರ್ಧಾರ ತೆಗೆದುಕೊಳ್ಳಲು ಮೂರು ದಿನ ತೆಗೆದುಕೊಂಡ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಕೊನೆಗೂ ಮಂಗಳವಾರ, ತಮ್ಮ ಅಂಕಿತ ಒತ್ತಿದ್ದಾರೆ.

ಅತಿಸೂಕ್ಷ್ಮ ಗಡಿ ರಾಜ್ಯವಾಗಿರುವ ಅರುಣಾಚಲದಲ್ಲಿ ಸೃಷ್ಟಿಯಾದ ರಾಜಕೀಯ ಪ್ರಕ್ಷುಬ್ಧತೆ ಬಳಿಕ ಅಲ್ಲಿ ಕಾನೂನು ಮತ್ತು ಸುವ್ಯವಸ್ಥೆಯ ಪರಿಸ್ಥಿತಿ ಸಂಪೂರ್ಣ ಕುಸಿದುಬಿದ್ದಿರುವುದಕ್ಕೆ ವಿಶೇಷ ಗಮನ ನೀಡಿರುವ ರಾಷ್ಟ್ರಪತಿ, ಅದೇ ವಿಷಯವನ್ನು ಆಧಾರವಾಗಿಟ್ಟುಕೊಂಡು ರಾಷ್ಟ್ರಪತಿ ಆಡಳಿತ ಜಾರಿ ಮಾಡಿದ್ದಾರೆ.

ಫ್ರಾನ್ಸ್ ಅಧ್ಯಕ್ಷ ಫ್ರಾಂಕಾಯಿಸ್ ಹೊಲಾಂಡ್ ತಮ್ಮ ಮೂರು ದಿನಗಳ ಭಾರತ ಪ್ರವಾಸ ಪೂರ್ಣಗೊಳಿಸಿ, ತಾಯ್ನಾಡಿಗೆ ಪ್ರವಾಸ ಆರಂಭಿಸಿದ ಬೆನ್ನಹಿಂದೆಯೇ, ಅರುಣಾಚಲಕ್ಕೆ ರಾಷ್ಟ್ರಪತಿ ಅಂಕಿತ ಬಿದ್ದಿದೆ.

ಕೇಂದ್ರ ಸಂಪುಟದ ಶಿಫಾರಸಿಗೆ ಪ್ರಣಬ್ ಏಕಾಏಕಿ ತಕ್ಷಣದ ನಿರ್ಧಾರ ಹೊರಹಾಕಲಿಲ್ಲ. ಅದರ ಬದಲಿಗೆ ಅವರು ಬಿಗಿ ಮತ್ತು ಎಚ್ಚರಿಕೆಯ ನಡೆ ಅನುಸರಿಸಿದ್ದಾರೆ. ಕೇಂದ್ರ ಶಿಫಾರಸು ಪತ್ರ ಕೈಸೇರಿದ ನಂತರ ಅವರು ಗೃಹ ಸಚಿವ ರಾಜನಾಥ್ ಸಿಂಗ್ ಅವರನ್ನು ಕರೆಸಿ, ಕೇಂದ್ರದ ಆಡಳಿತ ಹೇರುವ ಔಚಿತ್ಯ ಮತ್ತು ಕೇಂದ್ರ ಸಂಪುಟದ ಅವಸರ ಅಥವಾ ತುರ್ತು ನಿರ್ಧಾರದ ಕುರಿತು ಪ್ರಶ್ನೆ ಹಾಕಿದರು. ಸಂವಿಧಾನದ ವಿಧಿ 356ರ ಅಡಿ ರಾಷ್ಟ್ರಪತಿ ಆಳ್ವಿಕೆಯ ಸಾಧಕ-ಬಾಧಕಗಳನ್ನು ಕೆದಕಿದರು.

ಅರುಣಾಚಲ ರಾಜ್ಯಪಾಲರ ಪತ್ರದಲ್ಲಿದ್ದ ಅಂಶಗಳನ್ನು ಪ್ರಣಬ್ ಅವರಿಗೆ ಮನವರಿಕೆ ಮಾಡಲು ರಾಜನಾಥ್ ಸಿಂಗ್ ವಿಶೇಷ ಶ್ರಮ ವಹಿಸಬೇಕಾಯಿತು ಎಂದು ತಿಳಿದು ಬಂದಿದೆ.

ಇಷ್ಟಕ್ಕೂ ತೃಪ್ತರಾಗದ ಪ್ರಣಬ್, ಕರ್ನಾಟಕದಲ್ಲಿ ಬೊಮ್ಮಾಯಿ ಸರಕಾರವಿದ್ದಾಗ ಎದುರಾದ ಸಂವಿಧಾನ ಬಿಕ್ಕಟ್ಟು, 10 ವರ್ಷಗಳ ಹಿಂದೆ ಬಿಹಾರ ಸರಕಾರದ ವಿಸರ್ಜನೆ ಇತ್ಯಾದಿ ಸಂವಿಧಾನ ಬಿಕ್ಕಟ್ಟಿನಲ್ಲಿ ವಾದ ಮಂಡಿಸಿದ್ದ ಕೆಲವು ಹಿರಿಯ ವಕೀಲರರು ಮತ್ತು ನ್ಯಾಯವಾದಿಗಳ ಜತೆ ಸಮಾಲೋಚನೆ ನಡೆಸಿದರು ಎಂದು ತಿಳಿದುಬಂದಿದೆ.

ಇದರ ಬೆನ್ನಹಿಂದೆಯೇ, ಲೋಕಸಭೆಯ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ನೇತೃತ್ವದ ಕಾಂಗ್ರೆಸ್ ನಿಯೋಗ ಪ್ರಣಬ್ ಮುಖರ್ಜಿ ಅವರನ್ನು ಭೇಟಿ ಮಾಡಿ, ಅರುಣಾಚಲದಲ್ಲಿ ರಾಷ್ಟ್ರಪತಿ ಆಡಳಿತ ಜಾರಿ ಮಾಡಬೇಕೆಂಬ ಕೇಂದ್ರ ಸರಕಾರದ ನಿರ್ಧಾರವನ್ನು ವಿರೋಧಿಸಿ, ಮನವಿ ಪತ್ರ ಸಲ್ಲಿಸಿತ್ತು. ಜತೆಗೆ, ಅರುಣಾಚಲ ಪ್ರದೇಶದಲ್ಲಿ ಸಂವಿಧಾನಾತ್ಮಕ ಬಿಕ್ಕಟ್ಟು ಸೃಷ್ಟಿಯಾಗಲು ಅಲ್ಲಿನ ರಾಜ್ಯಪಾಲರು ಕೇಂದ್ರ ಸರಕಾರದ ಅಣತೆಯಂತೆ ಕುಣಿಯುತ್ತಿರುವುದೇ ಕಾರಣ ಎಂದು ಆರೋಪಿಸಿದ್ದರು.

ಈ ಎಲ್ಲಾ ಬೆಳವಣಿಗೆಗಳ ನಡುವೆ ಕಾಂಗ್ರೆಸ್ ಪಕ್ಷ, ಅರುಣಾಚಲ ವಿವಾದ ಕುರಿತು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದು, ಜನವರಿ 27ರಂದು(ಇಂದು) ವಿಚಾರಣೆ ನಡೆಸಲು ಸರ್ವೋಚ್ಚ ನ್ಯಾಯಾಲಯ ಸಮ್ಮತಿಸಿದೆ.

ರಾಷ್ಟ್ರಪತಿ ಆಳ್ವಿಕೆ ಜಾರಿ ನಿರ್ಧಾರವು ಪ್ರಜಾಸತ್ತೆಯ ಕಗ್ಗೊಲೆ ಎಂದು ಹಲವು ಪ್ರತಿಪಕ್ಷಗಳು ಟೀಕಿಸಿದರೆ, ಆಡಳಿತಾರೂಢ ಬಿಜೆಪಿ, ಅರುಣಾಲದಲ್ಲಿ ಸಂವಿಧಾನ ಬಿಕ್ಕಟ್ಟು ಸೃಷ್ಟಿಗೆ ಕಾಂಗ್ರೆಸ್ ಕಾರಣ ಎಂದು ಆರೋಪಿಸಿದೆ.

ಸಂವಿಧಾನ ಬಿಕ್ಕಟ್ಟು ಏನು?
ಅರುಣಾಚಲ ಪ್ರದೇಶ ವಿಧಾನಸಭೆಯ ಸ್ಪೀಕರ್ ನಬಮ್ ರೆಬಿಯಾ ವಿರುದ್ಧ ದೋಷಾರೋಪ ನಿಲುವಳಿ ಕೈಗೊಳ್ಳಲು ನಬಮ್ ತುಕಿ ನೇತೃತ್ವದ ಕಾಂಗ್ರೆಸ್ ಸರಕಾರ ಮುಂಗಡವಾಗಿ ವಿಧಾನಸಭಾ ಅಧಿವೇಶನ ಗೊತ್ತು ಮಾಡಿದ ನಂತರ ಅದು ರಾಜಕೀಯ ಪ್ರಕ್ಷುಬ್ಧತೆಯಲ್ಲಿ ತೊಳಲಾಡುತ್ತಿದೆ.
60 ಸದಸ್ಯಬಲದ ಅರುಣಾಚಲ ವಿಧಾನಸಭೆಯ 21 ಭಿನ್ನಮತೀಯ ಕಾಂಗ್ರೆಸ್ ಸದಸ್ಯರು 11 ಬಿಜೆಪಿ ಸದಸ್ಯರು ಮತ್ತು ಇಬ್ಬರು ಪಕ್ಷೇತ್ರ ಸದಸ್ಯರು ಒಟ್ಟಾಗಿ ಉಪಸ್ಪೀಕರ್ ಟಿ. ನೊರ್ಬು ಥಾಂಗ್‌ಡಾಕ್ ನೇತೃತ್ವದಲ್ಲಿ ಡಿಸೆಂಬರ್ 16ರಂದು ಖಾಸಗಿ ಸಭೆ ನಡೆಸಿ, ಸ್ಪೀಕರ್ ರೆಬಿಯಾ ವಿರುದ್ಧ ದೋಷಾರೋಪ ನಿಲುವಳಿ ಕೈಗೊಂಡ ನಂತರ ಅರುಣಾಚಲ ಪ್ರದೇಶದಲ್ಲಿ ರಾಜಕೀಯ ಬಿಕ್ಕಟ್ಟು ಹೆಚ್ಚಾಯಿತು.

-----

ಅರುಣಾಚಲದಲ್ಲಿ ರಾಷ್ಟ್ರಪತಿ ಆಳ್ವಿಕೆ ವಿರುದ್ಧ ನಾವು ಸುಪ್ರೀಂ ಕೋರ್ಟ್ ಮೆಟ್ಟಿಲೇರುತ್ತೇವೆ. ಗಣರಾಜ್ಯೋತ್ಸವ ದಿನದಂದೇ ರಾಷ್ಟ್ರಪತಿ ಆಳ್ವಿಕೆ ಜಾರಿ ಮಾಡಿರುವುದು ಖಂಡನೀಯ.
- ನಬಮ್ ತುಕಿ, ಅರುಣಾಚಲ ಪ್ರದೇಶ ಮುಖ್ಯಮಂತ್ರಿ


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಮುಕೇಶ್ ಅಂಬಾನಿಯವರ ಮೊದಲ ಮನೆ ಹೇಗಿದೆ ಗೊತ್ತಾ?


ಜಮೀನಿನಲ್ಲೇ ಘೋರ ದುರಂತ: ನೀರು ತುಂಬಿದ್ದ ಗುಂಡಿಗೆ ಬಿದ್ದು ಮೂವರು ಸಾವು


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


ವಚನಗಳಿಂದ ಸಂಗೀತ ಲೋಕ ಶ್ರೀಮಂತ


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ತುಳು ತೆರೆಗೆ ಸೋನಿಯಾ ಎಂಟ್ರಿ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್



<script src="https://jsc.adskeeper.com/r/s/rssing.com.1596347.js" async> </script>