Quantcast
Channel: VijayKarnataka
Viewing all articles
Browse latest Browse all 6795

ವೆಂಕಟ್ ಜೊತೆ ನಟಿಸೋಕೆ ಭಯವೇಕೆ?

$
0
0

- ಎಚ್. ಮಹೇಶ್

ಬಿಗ್‌ಬಾಸ್ ರಿಯಾಲಿಟಿ ಷೋನಲ್ಲಿ ಭಾಗವಹಿಸಿ ಮನೆಮಾತಾಗಿರುವ ಗೌತಮಿ ಗೌಡ, ಇದೀಗ ಎಸ್. ನಾರಾಯಣ್ ನಿರ್ದೇಶನದ ವೆಂಕಟ್ ನಾಯಕನಾಗಿ ನಟಿಸುತ್ತಿರುವ ಡಿಕ್ಟೇಟರ್ ಚಿತ್ರದಲ್ಲಿ ನಾಯಕಿಯಾಗಿ ನಟಿಸುವುದು ಖಚಿತವಾಗಿದೆ. ಚಿ.ಸೌ. ಸಾವಿತ್ರಿ ಸೀರಿಯಲ್‌ನಲ್ಲಿ ನಟಿಸಿದ್ದ ಗೌತಮಿ, ಬಿಗ್ ಬಾಸ್ ರಿಯಾಲಿಟಿ ಷೋನಿಂದ ಇತ್ತೀಚೆಗಷ್ಟೇ ಎಲಿಮಿನೇಟ್ ಆಗಿದ್ದರು. ಅವರು ಅಲ್ಲಿಂದ ಹೊರಬರುತ್ತಿದ್ದಂತೆ ವೆಂಕಟ್ ಜೊತೆ ನಟಿಸಲು ಎಸ್. ನಾರಾಯಣ್ ಆಫರ್ ಕೊಟ್ಟಿದ್ದಾರೆ.

ಈ ಬಗ್ಗೆ ಗೌತಮಿ ಅವರನ್ನು ಕೇಳಿದಾಗ, 'ಎಸ್. ನಾರಾಯಣ್ ಸರ್ ಅಂತಹ ಬಿಗ್ ಡೈರೆಕ್ಟರ್ ಜೊತೆ ಕೆಲಸ ಮಾಡುವುದಕ್ಕೆ ಅವಕಾಶ ಸಿಕ್ಕಿರುವುದು ನನಗೆ ಖುಷಿ ತಂದಿದೆ. ಸ್ಟೋರಿ ಕೇಳುತ್ತಿದ್ದೇನೆ. ಎಲ್ಲವೂ ಮಾತುಕತೆ ಹಂತದಲ್ಲಿದೆ. ದೊಡ್ಡ ನಿರ್ದೇಶಕರ ಬ್ಯಾನರ್‌ನಲ್ಲಿ ನಟಿಸುವುದೆಂದರೆ ಯಾರಿಗಾದರೂ ಸಂತಸ ತರುವ ವಿಷಯವೆ' ಎಂದರು.

ವೆಂಕಟ್ ಜೊತೆ ನಟಿಸುವುದಕ್ಕೆ ಭಯ ಏನಾದರೂ ಆಗಬಹುದಾ ಎಂಬ ಪ್ರಶ್ನೆಗೆ 'ಅವರ ಜೊತೆ ನಟಿಸುವುದಕ್ಕೆ ಭಯ ಏಕೆ? ಅವರು ಬಿಗ್ ಬಾಸ್‌ನಲ್ಲಿ ಇದ್ದ ಎಪಿಸೋಡ್‌ಗಳನ್ನು ನೋಡಿದ್ದೇನೆ. ಅವರು ಒಳ್ಳೆಯ ಮನುಷ್ಯ' ಎಂದರು ಗೌತಮಿ.

ಗೌತಮಿ ಈಗಾಗಲೇ ಮುತ್ತಿನ ಪಲ್ಲಕ್ಕಿ ಹಾಗೂ ಮಾತುಕತೆ ಚಿತ್ರದಲ್ಲಿ ನಟಿಸಿದ್ದಾರೆ. ವೆಂಕಟ್ ಜೊತೆ ನಟಿಸುತ್ತಿರುವುದು ಮೂರನೇ ಸಿನಿಮಾ. ಇನ್ನು ಮುಂದೆಯೂ ಧಾರಾವಾಹಿಯಲ್ಲಿ ನಟಿಸುತ್ತೀರಾ? 'ಧಾರಾವಾಹಿಗಳಲ್ಲಿ ನಟಿಸುವುದು ಇನ್ನು ಮುಂದೆ ಡೌಟು. ನನಗೆ ಸಿನಿಮಾರಂಗದಲ್ಲಿ ಮುಂದುವರಿಯಬೇಕು ಎಂಬ ಆಸೆ ಇದೆ. ಅದಕ್ಕಾಗಿ ಸಿನಿಮಾ ರಂಗದ ಕಡೆ ಹೆಚ್ಚು ಗಮನ ಕೊಟ್ಟಿದ್ದೇನೆ. ರಿಯಾಲಿಟಿ ಷೋಗಳಲ್ಲಿ ಗುರುತಿಸಿಕೊಳ್ಳುವುದಕ್ಕೆ ಯಾವುದೇ ಪ್ರಾಬ್ಲಂ ಇಲ್ಲ' ಎಂದರು ಗೌತಮಿ.

ಹೊಳೆ ನರಸೀಪುರದವರಾದ ಗೌತಮಿ, ಬೆಂಗಳೂರಿನಲ್ಲಿ ಶಿಕ್ಷಣ ಮುಗಿಸಿ ಇಲ್ಲಿಯೇ ವೃತ್ತಿ ಜೀವನ ಕಂಡುಕೊಂಡಿದ್ದಾರೆ. ಬಿಗ್‌ಬಾಸ್ ರಿಯಾಲಿಟಿ ಷೋನಲ್ಲಿ ಭಾಗವಹಿಸಿದ ನಂತರ ಅವರ ಜನಪ್ರಿಯತೆ ಹೆಚ್ಚಾಗಿದೆ ಎಂಬುದನ್ನು ಅವರು ಒಪ್ಪಿಕೊಳ್ಳುತ್ತಾರೆ.


Viewing all articles
Browse latest Browse all 6795

Trending Articles


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಪ್ರಜ್ಞಾ ಪ್ರವಾಹ, ಕರ್ನಾಟಕ “ದೇಶಿ ಚಿಂತನೆ” ಪ್ರಬಂಧ ಸ್ಪರ್ಧೆ


ತುಳು ತೆರೆಗೆ ಸೋನಿಯಾ ಎಂಟ್ರಿ


BIG NEWS : ಶಾಲೆಗಳ ಪ್ರಥಮ ಮಾನ್ಯತೆ, ಮಾನ್ಯತೆ ನವೀಕರಣದ ಕುರಿತು ‘ಶಿಕ್ಷಣ ಇಲಾಖೆ’ಯಿಂದ...


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ಕಳ್ಳತನ ಮಾಡುವಾಗ ಮನೆಯೊಡತಿ ನೋಡಿದ್ದಕ್ಕೆ ಕೊಂದೇ ಬಿಟ್ಟ ಅರ್ಚಕ!


Indira Canteen : ‘ಇಂದಿರಾ ಕ್ಯಾಂಟೀನ್’ನಲ್ಲಿ ಮಾಂಸ ಸೇವನೆಗೂ ಅವಕಾಶವಿದೆ : ಸಚಿವ...


ಭಾಷಾಭಿಮಾನ ಬೆಳೆಸುವ ಪ್ರಯತ್ನ ತುಳು ಕ್ಯಾಲೆಂಡರ್‌ ‘ಕಾಲಕೋಂದೆ’


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!



<script src="https://jsc.adskeeper.com/r/s/rssing.com.1596347.js" async> </script>