Quantcast
Channel: VijayKarnataka
Viewing all articles
Browse latest Browse all 6795

ಸುನಂದಾ ಸಾವಿಗೆ ‘ವಿಷ’ವೇ ಕಾರಣ

$
0
0

-ಏಮ್ಸ್ ವೈದ್ಯಕೀಯ ಮಂಡಳಿ ಅಭಿಪ್ರಾಯ-

ಹೊಸದಿಲ್ಲಿ: ಮಾಜಿ ಸಚಿವ ಶಶಿ ತರೂರ್ ಪತ್ನಿ ಸುನಂದಾ ಪುಷ್ಕರ್ ಸಾವಿಗೆ ಅವರ ದೇಹಕ್ಕೆ ಸೇರಿರುವ ''ವಿಷ''ವೇ ಕಾರಣ ಎಂದು ಏಮ್ಸ್ ತಜ್ಞ ವೈದ್ಯರ ತಂಂಡ ಅಭಿಪ್ರಾಯಪಟ್ಟಿದೆ. ಅಲ್ಲದೆ ಸುನಂದಾ ಅವರ ಹೊಟ್ಟೆಯಲ್ಲಿ ಉದ್ವೇಗ ನಿವಾರಕ ಮಾತ್ರೆಯ ಓವರ್‌ಡೋಸ್ ಪತ್ತೆಯಾಗಿರುವುದನ್ನು ಮಂಡಳಿ ಸರ್ವಾನುಮತದಿಂದ ದೃಢೀಕರಿಸಿದೆ.

ಇದೇವೇಳೆ, ಇಂಜೆಕ್ಷನ್ ಮೂಲಕ ವಿಷಯ ಉಣಿಸಿರುವ ಸಾಧ್ಯತೆಯನ್ನು ಮಂಡಳಿ ತಳ್ಳಿ ಹಾಕಿಲ್ಲ. ತನ್ನ ಅಭಿಪ್ರಾಯಗಳನ್ನು ದಿಲ್ಲಿ ಪೊಲೀಸರಿಗೆ ರವಾನಿಸಲಾಗಿದೆ ಎಂದೂ ಮಂಡಳಿ ಹೇಳಿದೆ.

ಸುನಂದ ಅವರ ದೇಹದ ಮೇಲೆ ಸಿರಿಂಜ್ ಮಾರ್ಕ್ ಕಂಡುಬಂದಿರುವುದರಿಂದ ಇದರಲ್ಲಿ ಯಾರದಾದರೂ ಕೈವಾಡ ಇದೆಯೇ ಎನ್ನುವ ಕುರಿತು ಎಸ್‌ಐಟಿ ತೀವ್ರ ತನಿಖೆ ನಡೆಸಬೇಕು ಎಂದು ಮಂಡಳಿ ಹೇಳಿದಿದೆ. ''ವೈದ್ಯಕೀಯ ಮಂಡಳಿ ಸರ್ವಾನುಮತದಿಂದ ಹೇಳುವುದೆಂದರೆ, ದೇಹದೊಳಗೆ ವಿಷ ಸೇರಿಕೆಯಿಂದ ಈ ಸಾವು ಸಂಭವಿಸಿದೆೆ,'' ಎಂದು ಸಮಿತಿ ಅಂತಿಮ ಷರಾ ಬರೆದಿದೆ.

ಸುನಂದ ಪುಷ್ಕರ್ ಮೃತಪಟ್ಟ ಜಾಗದಲ್ಲಿ ಖಾಲಿ ಇರುವ ಮಾತ್ರೆಯ 27 ಕವರ್‌ಗಳು ದೊರೆತಿವೆ. ಅಲ್ಲದೆ ಹೊಟ್ಟೆ, ಕಿಡ್ನಿ, ಕರುಳು ಅಲ್ಲದೆ ರಕ್ತದಲ್ಲೂ ಆಲ್ಫ್ರಾಕ್ಸ್ ಇರುವುದನ್ನು ಎಫ್‌ಬಿಐ ವರದಿಯೂ ದೃಢಪಡಿಸಿದೆ. ಈ ಎಲ್ಲ ಸಾಕ್ಷಾಧಾರಗಳಿಂದ ಆಲ್ಫ್ರಾಝೋಲಂ ಮಾತ್ರೆಯ ಅತಿಯಾಗಿ ಹೊಟ್ಟೆ ಸೇರಿರುವುದರಿಂದ ಸಾವು ಸಂಭವಿಸಿದೆ ಎಂದು ಮಂಡಳಿ ಅಭಿಪ್ರಾಯಪಟ್ಟಿದೆ.

ಅಲ್ಲದೆ ದೇಹದ ಮೇಲೆ ಹಲ್ಲಿನ ಗುರುತೂ ಸೇರಿದಂತೆ ಡಜನ್‌ಗೂ ಹೆಚ್ಚು ಗಾಯದ ಗುರುತುಗಳಿವೆ. ಇದು ಸಾವಿಗೂ ಮುನ್ನ ನಡೆದಿರುವ ಸಂಘರ್ಷವನ್ನು ಸೂಚಿಸುತ್ತದೆ ಎಂದು ಮಂಡಳಿ ತಿಳಿದಿದೆ.

ಒಟ್ಟಾರೆ, ಏಮ್ಸ್ ವೈದ್ಯಕೀಯ ಮಂಡಳಿ ಅಭಿಪ್ರಾಯ ಸುನಂದಾ ಕೊಲೆಯಾಗಿರಬಹುದೇ ಎಂಬ ಅನುಮಾನವನ್ನು ಬಲಪಡಿಸಿದೆ. ಪೂರ್ಣ ತನಿಖೆ ನಂತರವಷ್ಟೇ ಸತ್ಯ ಹೊರಬೀಳಬೇಕಿದೆ.

51 ವರ್ಷದ ಸುನಂದಾ ಪುಷ್ಕರ್, ದಿಲ್ಲಿಯ ಫೈವ್ ಸ್ಟಾರ್ ಹೋಟೆಲ್‌ನಲ್ಲಿ ಜನವರಿ 17, 2014ರ ರಾತ್ರಿ ಶವವಾಗಿ ಪತ್ತೆಯಾಗಿದ್ದರು.ಇದೇ ಸಂದರ್ಭದಲ್ಲಿ ಅವರ ಪತಿ ಶಶಿ ತರೂರ್ ಮತ್ತು ಪಾಕಿಸ್ತಾನದ ಪರ್ತಕರ್ತೆ ಮಹರ್ ತರಾರ್ ನಡುವೆ ಅಕ್ರಮ ಸಂಬಂಧ ಇದೆ ಎಂದು ಗುಲ್ಲೆದ್ದಿತ್ತು. ಅದೇ ಸುನಂದಾ ಸಾವಿಗೆ ಕಾರಣವಾಗಿರಬಹುದೇ ಎಂಬ ಕುರಿತೂ ಚರ್ಚೆ ನಡೆದಿತ್ತು.


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಮುಕೇಶ್ ಅಂಬಾನಿಯವರ ಮೊದಲ ಮನೆ ಹೇಗಿದೆ ಗೊತ್ತಾ?


ಮನವನ್ನು ಮುದಗೊಳಿಸುತ್ತೆ ಪುಟ್ಟ ಕಂದನ ಕ್ಯೂಟ್‌ ವಿಡಿಯೋ


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


ಗುರು ರಾಘವೇಂದ್ರರ ದಿನದ ಭವಿಷ್ಯ ಹಾಗೂ ರಾಶಿ ಫಲ


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ತುಳು ತೆರೆಗೆ ಸೋನಿಯಾ ಎಂಟ್ರಿ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್



<script src="https://jsc.adskeeper.com/r/s/rssing.com.1596347.js" async> </script>