Quantcast
Channel: VijayKarnataka
Viewing all articles
Browse latest Browse all 6795

ಮೂಕಿ ಅಲ್ಲ ಟಾಕಿ ಪುಷ್ಪಕ ವಿಮಾನ

$
0
0

ಕಮಲ್ ಹಾಸನ್ ನಟನೆಯ ಪುಷ್ಕಕ ವಿಮಾನ ಬಿಡುಗಡೆಯಾಗಿ 29 ವರ್ಷ ಆಗಿದೆ. ಈಗ ಅದೇ ಹೆಸರಿನ ಸಿನಿಮಾವೊಂದು ಕನ್ನಡದಲ್ಲಿ ಮೂಡಿ ಬರುತ್ತಿದೆ. ಕಮಲ್ ನೆಚ್ಚಿನ ಗೆಳೆಯ ರಮೇಶ್ ಅರವಿಂದ್ ಈ ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡುತ್ತಿದ್ದಾರೆ.

- ಶರಣು ಹುಲ್ಲೂರು

ಟಾಕಿಯುಗದಲ್ಲಿ ಮೂಕಿಯಾಗಿ ಬಂದ ಸಿನಿಮಾ ಪುಷ್ಕಕ ವಿಮಾನ. ಕಮಲ್ ಹಾಸನ್ ನಟನೆಯ ಈ ಚಿತ್ರವು ಜನ ಮೆಚ್ಚುಗೆಯಲ್ಲದೇ, ರಾಷ್ಟ್ರ ಪ್ರಶಸ್ತಿಗೂ ಪಾತ್ರವಾಯಿತು. ಪುಷ್ಕಕ ವಿಮಾನ ರಿಲೀಸ್ ಆಗಿ 29 ವರ್ಷವಾಗಿದೆ. ಈಗ ಅದೇ ಹೆಸರಿನ ಸಿನಿಮಾವೊಂದು ಕನ್ನಡದಲ್ಲಿ ಮೂಡಿ ಬರುತ್ತಿದೆ. ಈ ಚಿತ್ರದಲ್ಲಿ ಕಮಲ್ ನೆಚ್ಚಿನ ಗೆಳೆಯ ರಮೇಶ್ ಅರವಿಂದ್ ನಾಯಕರಾಗಿ ನಟಿಸುತ್ತಿದ್ದಾರೆ. ವಿಶೇಷವೆಂದರೆ ಇದು ಮಾತನಾಡುವ (ಟಾಕಿ) ಪುಷ್ಕಕ ವಿಮಾನ ಎನ್ನುವುದು.

ನಿರ್ದೇಶಕ ಎಸ್. ರವಿಂದ್ರನಾಥ್ ಇಂಥದ್ದೊಂದು ಹೆಸರಿಟ್ಟಾಗ ಇದು ಮೂಕಿ ಸಿನಿಮಾ ಎಂದು ಬಿಂಬಿತವಾಗಿತ್ತು. ಈ ವಿಷಯ ಕೇಳಿದ್ದ ಕಮಲ್ ಹಾಸನ್ ಕೂಡ ಥ್ರಿಲ್ ಆಗಿದ್ದರು. ಆದರೆ, ಇದು ಟಾಕಿ ಸಿನಿಮಾ ಎನ್ನುವುದನ್ನು ರಮೇಶ್ ಲವಲವಿಕೆಗೆ ಸ್ಪಷ್ಟಪಡಿಸಿದ್ದಾರೆ.

'ಇದು ನಾರ್ಮಲ್ ಸಿನಿಮಾ. ಪುಷ್ಕಕ ವಿಮಾನ ಚಿತ್ರಕ್ಕೂ ನಮ್ಮ ಚಿತ್ರಕ್ಕೂ ಯಾವ ಸಂಬಂಧವೂ ಇಲ್ಲ. ಶೀರ್ಷಿಕೆಯನ್ನು ಮಾತ್ರ ಆ ರೀತಿ ಇಡಲಾಗಿದೆ. ಅದಕ್ಕೆ ಕಾರಣವೂ ಇದೆ. ಚಿತ್ರದ ನಾಯಕನಿಗೆ ವಿಮಾನದ ಕ್ರೇಜ್. ಹೀಗಾಗಿ ನಿರ್ದೇಶಕರು ಈ ಟೈಟಲ್ ಅನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಅಲ್ಲದೇ ಸಿನಿಮಾದಲ್ಲಿ ತಂದೆ ಮತ್ತು ಮಗಳ ಬಾಂಧವ್ಯವನ್ನು ಹಿಡಿದಿಟ್ಟಿದ್ದಾರೆ. ಇದು ನನ್ನ ವೃತ್ತಿ ಜೀವನದ ಮತ್ತೊಂದು ಸ್ಪೆಷಲ್ ಸಿನಿಮಾ' ಅಂತಾರೆ ರಮೇಶ್.

ಈ ಚಿತ್ರದಲ್ಲಿ ಹಲವು ವಿಶೇಷತೆಗಳಿವೆ. ಎಂಟು ಲಕ್ಷ ರೂಪಾಯಿ ವೆಚ್ಚದಲ್ಲಿ ಟೀಸರ್ ಶೂಟ್ ಮಾಡಿದ್ದು, ಸಿನಿಮಾದ ಆಶಯವನ್ನು ಈ ಮೂಲಕ ತೋರಿಸುವ ಪ್ರಯತ್ನ ಮಾಡಿದ್ದಾರಂತೆ ನಿರ್ದೇಶಕರು. ಈ ವಿಮಾನದ ಕನಸು ಹೊತ್ತವರು ಸುಕೃತ್ ದೇವೇಂದ್ರ, ಪವನ್ ಒಡೆಯರ್, ದೀಪಕ್ ಕೃಷ್ಣ, ವಿಖ್ಯಾತ್, ದೀಪಕ್ ಕಿಶೋರ್, ದೇವಂತ್ ರಾಜ್ ಗೌಡ ಅನ್ನುವ ಯುವ ಪಡೆ. ಹೀಗಾಗಿ ಕಲರ್‌ಫುಲ್ ಆಗಿ ಪುಷ್ಕಕ ವಿಮಾನ ರೆಡಿ ಆಗುತ್ತಿದೆ.

'ನಾವು ರಮೇಶ್ ಸಾರ್ ಹತ್ತಿರ ಹೋಗಿ ಸಿನಿಮಾದ ಕತೆ ಹೇಳಿದೆವು. ಅವರಂತೂ ಸಖತ್ ಥ್ರಿಲ್ ಆದರು. ಜನಪ್ರಿಯ ಶೀರ್ಷಿಕೆಯನ್ನು ಮತ್ತೆ ಹೇಗೆ ಸಿನಿಮಾಗೆ ಇಡುವುದು ಅಂತ ಕೇಳಿದರು. ಮೂಲ ಸಿನಿಮಾದ ನಿರ್ದೇಶಕ ಮತ್ತು ನಿರ್ಮಾಪಕ ಸಂಗೀತಂ ಶ್ರೀನಿವಾಸ್ ಅವರು ಬಳಿ ಹೋಗಿ, ಅವರ ಅನುಮತಿ ಪಡೆದು ಚಿತ್ರಕ್ಕೆ ಶೀರ್ಷಿಕೆ ಇಟ್ಟಿದ್ದೇವೆ. ಮೂಲ ಚಿತ್ರಕ್ಕೆ ಧಕ್ಕೆ ಆಗದಂತೆ ಸಿನಿಮಾ ಮಾಡುತ್ತೇವೆ' ಅಂತಾರೆ ನಿರ್ದೇಶಕರು.

ಜನಪ್ರಿಯ ವಿಮಾನ

ಟಾಕಿ ಚಿತ್ರಗಳ ಕಾಲದಲ್ಲಿ ಮತ್ತೆ ಮೂಕಿ ಯುಗಕ್ಕೆ ಕರೆದೊಯ್ದ ಚಿತ್ರ ಪುಷ್ಕಕ ವಿಮಾನ. 1987ರಲ್ಲಿ ಬಿಡುಗಡೆಯಾದ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಸಖತ್ ಸದ್ದು ಮಾಡಿತು. ಮೂಕಿ ಸಿನಿಮಾ ಆಗಿದ್ದರಿಂದ, ಎಲ್ಲಾ ರಾಜ್ಯಗಳಲ್ಲೂ ಚಿತ್ರ ಬಿಡುಗಡೆ ಆಯಿತು. ತಮ್ಮದೇ ಭಾಷೆಯ ಸಿನಿಮಾ ಎನ್ನುವಂತೆ ಸ್ವೀಕರಿಸಿದರು ಪ್ರೇಕ್ಷಕರು. ಸಂಗೀತಂ ಶ್ರೀನಿವಾಸ ರಾವ್ ನಿರ್ದೇಶನದಲ್ಲಿ ಮೂಡಿ ಬಂದ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ, ಫಿಲ್ಮ್‌ಫೇರ್ ಅವಾರ್ಡ್ ಹೀಗೆ ಅನೇಕ ಗೌರವಗಳು ಸಂದಿವೆ.


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಮುಕೇಶ್ ಅಂಬಾನಿಯವರ ಮೊದಲ ಮನೆ ಹೇಗಿದೆ ಗೊತ್ತಾ?


ಮನವನ್ನು ಮುದಗೊಳಿಸುತ್ತೆ ಪುಟ್ಟ ಕಂದನ ಕ್ಯೂಟ್‌ ವಿಡಿಯೋ


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


ಗುರು ರಾಘವೇಂದ್ರರ ದಿನದ ಭವಿಷ್ಯ ಹಾಗೂ ರಾಶಿ ಫಲ


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ವಿರಾಟ್-ಅನುಷ್ಕಾ ನಡುವಣ ಸಂಭಾಷಣೆ ಊಹಿಸಬಲ್ಲೀರಾ?


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್



<script src="https://jsc.adskeeper.com/r/s/rssing.com.1596347.js" async> </script>