Quantcast
Channel: VijayKarnataka
Viewing all articles
Browse latest Browse all 6795

ಇ-ವೀಸಾದಿಂದ ಪ್ರವಾಸಿಗರ ವೃದ್ಧಿ

$
0
0

ಭಾರತಕ್ಕ ಬಂದ ವಿದೇಶಿ ಪ್ರವಾಸಿಗಳ ಸಂಖ್ಯೆ ಸಾವಿರಪಟ್ಟು ಹೆಚ್ಚಳ

ಹೊಸದಿಲ್ಲಿ: ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಕೇಂದ್ರ ಸರಕಾರ ವಿದೇಶಿ ಪ್ರವಾಸಿಗರಿಗೆ ನೆರವಾಗುವಂತೆ ಇ-ವೀಸಾ ವ್ಯವಸ್ಥೆ ಜಾರಿಗೊಳಿಸಿದ್ದು, ಇದು ಶೇ.1040.4ರಷ್ಟು ಪ್ರಗತಿ ಸಾಧಿಸಿದೆ. ಯೋಜನೆಯಡಿಯಲ್ಲಿ ವೀಸಾ ಪಡೆದ ಸುಮಾರು 4.45 ಲಕ್ಷ ಪ್ರವಾಸಿಗರು ಭಾರತಕ್ಕೆ ಕಳೆದೊಂದು ವರ್ಷದಲ್ಲಿ ಭೇಟಿ ನೀಡಿದ್ದಾರೆ.

ಇಂಗ್ಲೆಂಡ್‌ನಿಂದ ಅತಿ ಹೆಚ್ಚು ಪ್ರವಾಸಿಗರು ಭೇಟಿ ನೀಡಿದ್ದರೆ, ನಂತರ ಅಮೆರಿಕದ ಪ್ರವಾಸಿಗರು ಈ ಸೌಲಭ್ಯ ಪಡೆದುಕೊಂಡವರಲ್ಲಿ ಹೆಚ್ಚಿದ್ದಾರೆ. 2015ರಲ್ಲಿ ಭಾರತ ಒಟ್ಟು 70 ಲಕ್ಷ ವಿದೇಶಿ ಪ್ರವಾಸಿಗರನ್ನು ಆಕರ್ಷಿಸುವಲ್ಲಿ ಸಫಲವಾಗಿದ್ದು, ಈ ಸಂಖ್ಯೆ ಡಿಸೆಂಬರ್‌ನಲ್ಲಿ ಶೇ.4.5 ರಷ್ಟು ಹೆಚ್ಚಾಗಿತ್ತು. 2014ರ ಡಿಸೆಂಬರ್‌ನಲ್ಲಿ 14,083 ಪ್ರವಾಸಿಗರು ಇ-ವೀಸಾ ಪಡೆದು ಭಾರತಕ್ಕೆ ಆಗಮಿಸಿದರೆ, 2015ರಲ್ಲಿ ಈ ಸಂಖ್ಯೆ 1,03,617ರಷ್ಟಾಗಿ, ಶೇ.635.8ರಷ್ಟು ಪ್ರಗತಿ ಸಾಧಿಸಿದೆ.

2014ರ ನವೆಂಬರ್‌ನಲ್ಲಿ ಆರಂಭಿಸಲಾದ ಇ-ವೀಸಾ ಸೌಲಭ್ಯವನ್ನು ವಿಶ್ವದ 113 ದೇಶಗಳಿಗೆ ಪರಿಚಯಿಸಲಾಗಿದೆ ಎಂದು ಪ್ರವಾಸೋದ್ಯಮ ಸಚಿವಾಲಯ ಹೇಳಿದೆ. ಪ್ರವಾಸಿಗರಿಗೆ ಅನುಕೂಲವಾಗುವಂಥ ಕೆಲವು ಯೋಜನೆಗಳನ್ನು ಭಾರತ ಜಾರಿಗೊಳಿಸಿದ ನಂತರ, ಪ್ರವಾಸೋದ್ಯಮದಲ್ಲಿ ದೇಶದ ರ‌್ಯಾಂಕ್ 65ರಿಂದ 52ಕ್ಕೆ ಬಂದಿದೆ.

ಯಾವ ದೇಶದಿಂದ ಎಷ್ಟೆಷ್ಟು ಪ್ರವಾಸಿಗರು?

ಇಂಗ್ಲೆಂಡ್‌ನಿಂದ ಶೇ.23.81 ಪ್ರವಾಸಿಗರು ಆಗಮಿಸಿದರೆ, ಅಮೆರಿಕದಿಂದ ಶೇ.19.59, ರಷ್ಯಾದಿಂದ ಶೇ.9.33, ಆಸ್ಟ್ರೇಲಿಯಾದಿಂದ ಶೇ.5.44 ಮತ್ತು ಜರ್ಮನಿಯಿಂದ ಶೇ.4.86 ಪ್ರವಾಸಿಗರು ದೇಶಕ್ಕೆ ಭೇಟಿ ನೀಡಿದ್ದಾರೆ. ಫ್ರಾನ್ಸ್ (ಶೇ.4.44), ಕೆನಡಾ(ಶೇ.4.40), ಚೀನಾ (ಶೇ.3.10), ರಿಪಬ್ಲಿಕ್ ಆಫ್ ಕೊರಿಯಾ (ಶೇ.1.83) ಮತ್ತು ಉಕ್ರೇನ್ (ಶೇ.1.67) ಪ್ರವಾಸಿಗರಿದ್ದಾರೆ.

ಎಲ್ಲಿಗೆ ಬಂದಿದ್ದು ಹೆಚ್ಚು?

ಹೊಸದಿಲ್ಲಿ ಅಂತಾರಾಷ್ಟ್ರೀಯ ವಿಮಾನನಿಲ್ದಾಣಕ್ಕೆ ಅತಿ ಹೆಚ್ಚು ಅಂದರೆ ಶೇ.36.23 ವಿದೇಶಿ ಪ್ರವಾಸಿಗರು ಬಂದಿಳಿದಿದ್ದಾರೆ. ನಂತರ ಮುಂಬಯಿ (ಶೇ.21.90), ಗೋವಾ (ಶೇ.16.54), ಬೆಂಗಳೂರು (ಶೇ.5.54) ಹಾಗೂ ಕೊಚಿನ್ ವಿಮಾನ ನಿಲ್ದಾಣಕ್ಕೆ ಶೇ.4.68 ಪ್ರವಾಸಿಗರು ಬಂದಿಳಿದಿದ್ದಾರೆ. ಚೆನ್ನೈಗೆ ಶೇ.4.21, ಕೋಲ್ಕೊತಾಕ್ಕೆ ಶೇ.2.74, ಹೈದರಾಬಾದ್‌ಗೆ ಶೇ.2.68, ತಿರುವನಂತಪುರಕ್ಕೆಗೆ ಶೇ.2.05 ಮತ್ತು ಅಹಮದಾಬಾದ್‌ಗೆ ಶೇ.1.79 ಪ್ರವಾಸಿಗರು ಭೇಟಿ ನೀಡಿದ್ದಾರೆ.


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಮುಕೇಶ್ ಅಂಬಾನಿಯವರ ಮೊದಲ ಮನೆ ಹೇಗಿದೆ ಗೊತ್ತಾ?


ಮನವನ್ನು ಮುದಗೊಳಿಸುತ್ತೆ ಪುಟ್ಟ ಕಂದನ ಕ್ಯೂಟ್‌ ವಿಡಿಯೋ


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


ಗುರು ರಾಘವೇಂದ್ರರ ದಿನದ ಭವಿಷ್ಯ ಹಾಗೂ ರಾಶಿ ಫಲ


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ವಿರಾಟ್-ಅನುಷ್ಕಾ ನಡುವಣ ಸಂಭಾಷಣೆ ಊಹಿಸಬಲ್ಲೀರಾ?


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್



<script src="https://jsc.adskeeper.com/r/s/rssing.com.1596347.js" async> </script>