Quantcast
Channel: VijayKarnataka
Viewing all articles
Browse latest Browse all 6795

ಬಾಜಿರಾವ್ ಮಸ್ತಾನಿ: ಮನ ಮುಟ್ಟುವ ಬಾಜಿರಾವ್ ಲವ್ ಸ್ಟೋರಿ

$
0
0

ಚಿತ್ರ : ಬಾಜಿರಾವ್ ಮಸ್ತಾನಿ

- ಎಚ್. ಮಹೇಶ್

ಸಂಜಯ್ ಲೀಲಾ ಬನ್ಸಾಲಿ ಚಿತ್ರಗಳು ಅಂದರೇನೇ ಹಾಗೆ. ಬೃಹತ್ ಬಂಗಲೆ, ಎಂದೂ ನೋಡಿರದ ಡಿಸೈನಿಂಗ್ ಉಡುಪುಗಳು. ಮನ ಮುಟ್ಟುವ ಲವ್ ಸೀನ್‌ಗಳು ತುಂಬಿಕೊಂಡಿರುತ್ತವೆ. ಬಾಜಿರಾವ್ ಮಸ್ತಾನಿ ಚಿತ್ರದಲ್ಲೂ ಅದು ಮುಂದುವರೆದಿದೆ. ಅರಮನೆ ಸೆಟ್, ಯುದ್ಧದ ದೃಶ್ಯಗಳು, ನಾಯಕ, ನಾಯಕಿಗೆ ಕೊಟ್ಟಿರುವ ಉಡುಪುಗಳು ಪ್ರೇಕ್ಷಕರನ್ನು ಅಚ್ಚರಿಗೆ ದೂಡುತ್ತವೆ.

ಬಾಜಿರಾವ್ ಬಲ್ಲಾಳ್ (ರಣ್‌ವೀರ್ ಸಿಂಗ್) ಮರಾಠ ಪ್ರದೇಶದ ರಾಜ. ಆತನಿಗೆ ಯುದ್ಧಗಳನ್ನು ಗೆಲ್ಲುವ ಹಂಬಲ. ಸುಮಾರು 40ಕ್ಕೂ ಹೆಚ್ಚು ಯುದ್ಧಗಳನ್ನು ಗೆಲ್ಲುತ್ತಾನೆ. ಆ ಸಮಯದಲ್ಲಿ ಮುಸ್ಲಿಂ ರಾಜನ ಮಗಳು ಮಸ್ತಾನಿ ( ದೀಪಿಕಾ)ಯನ್ನು ನೋಡಿ ಇಂಪ್ರೆಸ್ ಆಗುತ್ತಾನೆ. ಮನೆಯಲ್ಲಿ ಪತಿಯೇ ದೇವರೆಂದು ತಿಳಿದುಕೊಂಡಿರುವ ಪತ್ನಿ ಕಾಶಿಬಾಯಿ (ಪ್ರಿಯಾಂಕಾ ಚೋಪ್ರಾ) ಇದ್ದರೂ ಮಸ್ತಾನಿಯನ್ನು ವರಿಸಿಕೊಳ್ಳಲು ಮುಂದಾಗುತ್ತಾನೆ. ಹಿಂದು ರಾಜ, ಮುಸ್ಲಿಂ ರಾಣಿಯನ್ನು ಮದುವೆಯಾಗುವುದಕ್ಕೆ ಸಾಧ್ಯವೇ? ರಾಜ್ಯವನ್ನು ಶತ್ರುಗಳಿಂದ ರಕ್ಷಿಸಲು ಯುದ್ಧಮಾಡುವ ಅನಿವಾರ್ಯದ ಜತೆಗೆ ಮಸ್ತಾನಿಯನ್ನು ವರಿಸಲು ಪತ್ನಿ ಕಡೆಯಿಂದಲೇ ವಿರೋಧ ಎದುರಿಸುತ್ತಾನೆ.

ನಿರ್ದೇಶಕ ಸಂಜಯ್ ಲೀಲಾ, ಐತಿಹಾಸಿಕ ಕತೆಯನ್ನು ಇಂದಿನ ಕಾಲಮಾನಕ್ಕೆ ತಕ್ಕಂತೆ ಹೊಂದಿಸಿಕೊಂಡಿದ್ದಾರೆ. ಚಿತ್ರದಲ್ಲಿ ರಾಜನ ಆಳ್ವಿಕೆ ಕತೆಗಿಂತ ಬಾಜಿರಾವ್ ಹಾಗೂ ಮಸ್ತಾನಿ ನಡುವಿನ ಲವ್ ಕತೆ ಕಡೆ ಹೆಚ್ಚು ಗಮನ ಕೊಟ್ಟಿದ್ದಾರೆ. ರಣ್ ವೀರ್, ತನ್ನ ಪಾತ್ರಕ್ಕೂ ಜೀವ ತುಂಬುವಲ್ಲಿ ಯಶಸ್ವಿಯಾಗಿದ್ದಾರೆ. ಅವರ ನಿಲ್ಲುವ ಭಂಗಿ, ಅದಕ್ಕೆ ತಕ್ಕಂತಹ ಉಡುಪುಗಳು, ಡೈಲಾಗ್ ಡೆಲಿವರಿ ಎಲ್ಲವೂ ಇಲ್ಲಿ ಸೂಪರ್. ದೀಪಿಕಾ, ರಣ್ ವೀರ್ ನಡುವಿನ ಲವ್ ಕೆಮಿಸ್ಟ್ರಿ ತೆರೆಮೇಲೆ ಚೆನ್ನಾಗಿ ವರ್ಕ್ ಔಟ್ ಆಗಿದೆ.

ಪ್ರಿಯಾಂಕಾ ಚೋಪ್ರಾರದ್ದು ತುಂಬಾ ಪವರ್‌ಫುಲ್ ಕ್ಯಾರೆಕ್ಟರ್. ತನ್ನ ಗಂಡ ಮತ್ತೊಬ್ಬಳನ್ನು ವರಿಸುತ್ತೇನೆ ಎಂದಾಗ ಕೋಪಗೊಳ್ಳುತ್ತಾಳೆ, ಪ್ರತಿಭಟಿಸುತ್ತಾಳೆ. ಆದರೆ ತನ್ನ ಗಂಡನ ಮೇಲಿನ ಪ್ರೀತಿಗೋಸ್ಕರ ದೀಪಿಕಾಗೆ ಎರಡನೇ ಹೆಂಡತಿ ಪಟ್ಟ ಕೊಡಲು ಒಪ್ಪಿಕೊಳ್ಳುತ್ತಾಳೆ. ಆ ಸಮಯದಲ್ಲಿ ಪ್ರಿಯಾಂಕಾ ಅಭಿನಯ ನಿಜಕ್ಕೂ ಭೇಷ್ ಅನಿಸುತ್ತದೆ. ಯುದ್ಧದ ಸನ್ನಿವೇಷಗಳು ಓಕೆ. ಹಿನ್ನೆಲೆ ಸಂಗೀತ ಚಿತ್ರಕ್ಕೆ ಅಷ್ಟಾಗಿ ಸಾಥ್ ಕೊಟ್ಟಿಲ್ಲ. ಆದರೆ ಚಿತ್ರದ ಹಾಡುಗಳು ಮತ್ತೊಮ್ಮೆ ನೋಡಬೇಕು ಅನಿಸುವಂತಿವೆ. ಹಾಡುಗಳ ಕೊರಿಯಾಗ್ರಫಿ ಚೆನ್ನಾಗಿ ಮೂಡಿ ಬಂದಿದೆ. ಚಿತ್ರದ ನಿಜವಾದ ಸ್ಟಾರ್ ಚಿತ್ರದ ಉಡುಪುಗಳು. ಪ್ರತಿ ಪಾತ್ರಕ್ಕೂ ನಿರ್ದೇಶಕರು ಪ್ರಾಮುಖ್ಯ ಕೊಟ್ಟಿದ್ದಾರೆ. ಬನ್ಸಾಲಿ ಚಿತ್ರಗಳನ್ನು ನೋಡುವ ಪ್ರೇಕ್ಷಕ ವರ್ಗಕ್ಕೆ ಈ ಚಿತ್ರ ನಿರಾಸೆ ಮಾಡುವುದಿಲ್ಲ.


Viewing all articles
Browse latest Browse all 6795

Trending Articles


ಪ್ರಜ್ಞಾ ಪ್ರವಾಹ, ಕರ್ನಾಟಕ “ದೇಶಿ ಚಿಂತನೆ” ಪ್ರಬಂಧ ಸ್ಪರ್ಧೆ


ಮಲಗಿದ್ದ ಮಹಿಳೆ ಬೆದರಿಸಿ ಬೆತ್ತಲೆ ಫೋಟೋ ತೆಗೆದ ಕಳ್ಳ


ಅಪಘಾತ ಗಾಯಾಳುಗಳಿಗೆ ನೆರವು ನೀಡಿದವರಿಗೆ ಜೀವರಕ್ಷಕ ಪ್ರಶಸ್ತಿ


ಬಿಗ್‌ ನ್ಯೂಸ್: ದ್ವಿತೀಯ ಪಿಯು ಪರೀಕ್ಷೆ ಫಲಿತಾಂಶ ಪ್ರಕಟ -‌ ಈ ಬಾರಿಯೂ...


 ಕೌಟುಂಬಿಕ ಕಲಹ ಹಿನ್ನೆಲೆ; ಬುದ್ದಿವಾದ ಹೇಳಿದ ತಂಗಿಯನ್ನೇ ಕೊಂದ ಅಣ್ಣ…


Indira Canteen : ‘ಇಂದಿರಾ ಕ್ಯಾಂಟೀನ್’ನಲ್ಲಿ ಮಾಂಸ ಸೇವನೆಗೂ ಅವಕಾಶವಿದೆ : ಸಚಿವ...


ವಚನಗಳಿಂದ ಸಂಗೀತ ಲೋಕ ಶ್ರೀಮಂತ


Final chapter from Krishnamacharya's Yogasanagalu Part II Pranayam. Plus the...


ವಿರಾಟ್-ಅನುಷ್ಕಾ ನಡುವಣ ಸಂಭಾಷಣೆ ಊಹಿಸಬಲ್ಲೀರಾ?


ಆಲೋಚನೆಗೂ ಕ್ರಿಯೆಯಷ್ಟೇ ಮಹತ್ವವಿದೆ


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಮುಕೇಶ್ ಅಂಬಾನಿಯವರ ಮೊದಲ ಮನೆ ಹೇಗಿದೆ ಗೊತ್ತಾ?


‘ವ್ಯಾಪಾರ’ದಲ್ಲಿ ವೃದ್ಧಿಯಾಗಲು ಹೀಗೆ ಮಾಡಿ….


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


ಗುರು ರಾಘವೇಂದ್ರರ ದಿನದ ಭವಿಷ್ಯ ಹಾಗೂ ರಾಶಿ ಫಲ


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ತುಳು ತೆರೆಗೆ ಸೋನಿಯಾ ಎಂಟ್ರಿ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್



<script src="https://jsc.adskeeper.com/r/s/rssing.com.1596347.js" async> </script>