ಕರ್ನಾಟಕ ಚಲನಚಿತ್ರ ಅಕಾಡೆಮಿ ಏರ್ಪಡಿಸಿದ್ದ ಗಿರೀಶ್ ಕಾಸರವಳ್ಳಿಯವರ ಚಿತ್ರರಂಗದ ಬದುಕನ್ನು ಕುರಿತ ಬೆಳ್ಳಿ ಹೆಜ್ಜೆ ಕಾರ್ಯಕ್ರಮದಲ್ಲಿ ಅವರು ಹೀಗೆ ಹೇಳಿದ್ದಾರೆ.
'ಆಸ್ಕರ್ ಪ್ರಶಸ್ತಿ ಗ್ರೇಟ್ ಎನ್ನುವ ಮಿಸ್ಕನ್ಸೆಪ್ಷನ್ ಇದೆ. ಆದರೆ, ಅದು ಸರಿಯಲ್ಲ. ಆಸ್ಕರ್ ಪ್ರಶಸ್ತಿ ಜನಪ್ರಿಯ ಚಿತ್ರಗಳಿಗಾಗಿ ಇರುವುದು. ಪ್ರಯೋಗಾತ್ಮಕ ಚಿತ್ರಗಳಿಗಲ್ಲ' ಎಂದಿದ್ದಾರೆ. ಸಾಮಾನ್ಯವಾಗಿ ಫಿಲ್ಮ್ ಫೆಡರೇಷನ್ ಆಫ್ ಇಂಡಿಯಾ ಆಸ್ಕರ್ ಸ್ಪರ್ಧೆಗಾಗಿ ಭಾರತೀಯ ಚಿತ್ರಗಳನ್ನು ಆಯ್ಕೆ ಮಾಡಿ ಕಳಿಸುತ್ತಿದೆ. ಆದರೆ ಅದು ಎಷ್ಟು ಕೆಟ್ಟ ಚಿತ್ರಗಳನ್ನು ಆಯ್ಕೆ ಮಾಡಿ ಕಳಿಸುತ್ತಾ ಬಂದಿದೆ ಎಂದರೆ, ಆಸ್ಕರ್ ಸಮಿತಿ ಭಾರತದ ಚಿತ್ರಗಳನ್ನು ನೋಡಲು ಹಿಂಜರಿಯುತ್ತಾರೆ' ಎಂದಿರುವ ಅವರು, ಲಗಾನ್ ಚಿತ್ರವನ್ನು ಕಮಿಟಿಯವರು ನೋಡುವಂತೆ ಮಾಡಲು 9 ಕೋಟಿ ಖರ್ಚು ಮಾಡಬೇಕಾಗಿ ಬಂದಿದೆ. ನಾನು ಖಂಡಿತ ಈ ತರ ಹಣ ಖರ್ಚು ಮಾಡಲಿಚ್ಚಿಸುವುದಿಲ್ಲ. ಅದರ ಬದಲು ಒಂದು ಕೋಟಿಯಲ್ಲಿ ಇನ್ನೆರಡು ಚಿತ್ರಗಳನ್ನು ಮಾಡುತ್ತೇನೆ ಎಂದಿದ್ದಾರೆ ಅವರು.
ಅಂತಾರಾಷ್ಟ್ರೀಯ ಖ್ಯಾತಿಯ ನಿರ್ದೇಶಕ ಗಿರೀಶ್ ಕಾಸರವಳ್ಳಿ ಆಸ್ಕರ್ ಪ್ರಶಸ್ತಿ ಗ್ರೇಟ್ ಅಲ್ಲ ಎಂದು ಹೇಳಿದ್ದಾರೆ. ಲಗಾನ್ ಚಿತ್ರ ಆಸ್ಕರ್ ಪ್ರವೇಶಿಸಲು 9 ಕೋಟಿ ರೂ. ಖರ್ಚು ಮಾಡಬೇಕಾಯ್ತಂತೆ ಎಂದಿದ್ದಾರೆ.