ಮಂಡ್ಯ ರಮೇಶ್ ಪುತ್ರಿ ದಿಶಾ ಮತ್ತು ಮಂಜುನಾಥ್ ಹೆಗಡೆ ಪುತ್ರ ಮನು ಸುರೇಶ ನಿರ್ದೇಶನದ ಚಿತ್ರದಲ್ಲಿ ನಾಯಕಿ ಮತ್ತು ನಾಯಕರಾಗಿ ಕಾಣಿಸಿಕೊಂಡಿದ್ದಾರೆ. ಇವರಿಬ್ಬರೂ ಹೆಸರಾಂತ ನಟನಾ ಸಂಸ್ಥೆಗಳಲ್ಲಿ ತರಬೇತಿ ಪಡೆದವರು.
'ದೇವರು ನಾಡಲ್ಲಿ ಕತೆ ಅಪರೂಪವಾಗಿದ್ದು. ಈ ಚಿತ್ರಕ್ಕೆ ಹೊಸ ಕಲಾವಿದರೇ ಬೇಕಿತ್ತು. ಹಾಗಂತ ದಿಶಾ ಮತ್ತು ಮನು ಹೊಸ ಕಲಾವಿದರು ಅನಿಸುವುದೇ ಇಲ್ಲ. ನಟನೆಗೆ ಬೇಕಿರುವ ತರಬೇತಿ ಪಡೆದು ಬಂದವರು. ಅಲ್ಲದೇ ಅವರಿಗೆ ಕತೆಯನ್ನು ಅರ್ಥ ಮಾಡಿಕೊಳ್ಳುವ ಶಕ್ತಿ ಇದೆ. ಹೀಗಾಗಿ ಆಯ್ಕೆ ಮಾಡಿಕೊಂಡೆ' ಅನ್ನುವುದು ಸುರೇಶ ಮಾತು. ಈಗಾಗಲೇ ಅನೇಕ ಹೊಸ ಕಲಾವಿದರನ್ನು ಮತ್ತು ತಂತ್ರಜ್ಞರನ್ನು ಸಿನಿಮಾ ರಂಗಕ್ಕೆ ಪರಿಚಯಿಸಿದ ಕೀರ್ತಿ ಇವರದ್ದು.
ಸಿನಿಮಾದಲ್ಲಿ ಹಲವು ವಿಶೇಷತೆಗಳಿವೆ. ಪ್ರಕಾಶ್ ರೈ, ಸಿಹಿಕಹಿ ಚಂದ್ರು, ಅಚ್ಯುತ್ಕುಮಾರ್ ಸೇರಿದಂತೆ ಬಹುದೊಡ್ಡ ತಾರಾ ಬಳಗವೇ ಚಿತ್ರದಲ್ಲಿದೆ. ಈ ಸಿನಿಮಾದ ಮೂಲಕ ಅದ್ವೈತ ಸಿನಿಮಾಟೋಗ್ರಾಫರ್ ಕೂಡ ಸಿನಿ ರಂಗಕ್ಕೆ ಪ್ರವೇಶ ಮಾಡುತ್ತಿದ್ದಾರೆ.
ಸಿನಿಮಾದ ಬಹುತೇಕ ಶೂಟಿಂಗ್ ಕೂಡ ಮುಗಿದಿದ್ದು, ಸದ್ಯ ಬಿಡುಗಡೆ ಆಗುವ ಸಿನಿಮಾದ ಟ್ರೈಲರ್ ಸಾಕಷ್ಟು ಕುತೂಹಲ ಮೂಡಿಸಿದೆ.
ಕನ್ನಡ ಸಿನಿ ರಂಗಕ್ಕೆ ಹೊಸ ಕಲಾವಿದರ ಸೇರ್ಪಡೆ ಆಗುತ್ತಲೇ ಇದೆ. ಬಿ.ಸುರೇಶ ನಿರ್ದೇಶನದ ದೇವರ ನಾಡಲ್ಲಿ ಚಿತ್ರದ ಮೂಲಕ ಇನ್ನಿಬ್ಬರು ನಟರು ಸ್ಯಾಂಡಲ್ವುಡ್ಗೆ ಪರಿಚಯ ಆಗುತ್ತಿದ್ದಾರೆ. ವಿಶೇಷತೆ ಅಂದರೆ, ಅವರಿಬ್ಬರೂ ಜನಪ್ರಿಯ ಕಲಾವಿದರ ಮಕ್ಕಳು ಅನ್ನುವುದು.